ಬಹಿಷ್ಕಾರ ಹಾಕುವವರ ವಿರುದ್ಧ ಕ್ರಮ ಜರಗಿಸಿ
ಮನವಿ
.jpg)
ಸಾಗರ, ಅ. 19: ತಾಲೂಕಿನ ತಾಳಗುಪ್ಪ ಹೋಬಳಿಯ ಯಲಕುಂದ್ಲಿ ಗ್ರಾಮದಲ್ಲಿ ಬಗರ್ಹುಕುಂ ಜಮೀನಿನಲ್ಲಿ ಬೆಳೆದಿದ್ದ ಬೆಳೆಯನ್ನು ನಾಶ ಮಾಡಿ ಕಳವು ನಡೆಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ಗ್ರಾಮಸ್ಥರು ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಬುಧವಾರದಿಂದ ಅಮರಣಾಂತ ಧರಣಿ ಸತ್ಯಾಗ್ರಹ ಕೈಗೊಂಡು, ನ್ಯಾಯ ಒದಗಿಸುವಂತೆ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕಳೆದ 35 ವರ್ಷಗಳಿಂದ ಯಲಕುಂದ್ಲಿ ಗ್ರಾಮದ ಸರ್ವೇ ನಂ. 206 ಮತ್ತು 117ರಲ್ಲಿ ಬಗರ್ಹುಕುಂ ಸಾಗುವಳಿ ಮಾಡಿಕೊಂಡು ಬಂದಿದ್ದು, ಭೂಮಂಜೂರಾತಿಗಾಗಿ ಬಗರ್ಹುಕುಂ ಸಮಿತಿಗೆ ಅಜಿರ್ ಸಲ್ಲಿಸಲಾಗಿದೆ. ಆದರೆ ಕಳೆದ 6ತಿಂಗಳಿನಿಂದ ಯಲಕುಂದ್ಲಿ ಗ್ರಾಮದ ಗ್ರಾಮ ಸುಧಾರಣಾ ಸಮಿತಿಯ ಕೆಲವು ಪಟ್ಟಭದ್ರಾ ಹಿತಾಸಕ್ತಿಗಳು ಬಗರ್ಹುಕುಂ ಸಾಗುವಳಿ ಮಾಡುತ್ತಿರುವ ನಮಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಧರಣಿ ನಿರತರು ದೂರಿದ್ದಾರೆ. ಬಗರ್ಹುಕುಂ ಜಾಗದಲ್ಲಿ ಕೃಷಿ ಮಾಡುತ್ತಿರುವ ನಮಗೆ ಸಮಿತಿಗೆ 20ಸಾವಿರ ರೂ. ದಂಡ ಪಾವತಿಸುವಂತೆ ಸೂಚನೆ ನೀಡಿದ್ದಾರೆ. ಅಷ್ಟೊಂದು ಹಣ ಪಾವತಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಕ್ಕೆ ನಮಗೆ ಸಾಮಾಜಿಕ ಬಹಿಷ್ಕಾರವನ್ನು ಹಾಕಿದ್ದಾರೆ. ಆತಂಕದಲ್ಲಿ ಜೀವನ ನಡೆಸುತ್ತಿರುವ ನಮಗೆ ರಕ್ಷಣೆ ನೀಡುವಂತೆ ಕಳೆದ ಜೂನ್ ತಿಂಗಳಿನಲ್ಲಿ ಗ್ರಾಮಾಂತರ ಠಾಣೆಗೆ ದೂರು ಸಹ ನೀಡಿದ್ದೇವೆ. ಆದರೆ ಪೊಲೀಸರು ನಿರ್ಲಕ್ಷ್ಯ ತೋರಿಸಿದ್ದಾರೆ ಎಂದು ಧರಣಿನಿರತರು ತಿಳಿಸಿದರು.
ಅ, 17ರಂದು ಕೊಟ್ಟಿಗೆಮನೆ ಪರಮೇಶ್ವರ ಅವರಿಗೆ ಸೇರಿದ 2ಎಕರೆ ಬಗರ್ಹುಕುಂ ಜಮೀನಿನಲ್ಲಿ ಬೆಳೆದಿರುವ ಸುಮಾರು 30 ಕ್ವಿಂಟಾಲ್ ಜೋಳದ ತೆನೆ ಕಳ್ಳತನ ಮಾಡಲಾಗಿದೆ. ಪರಮೇಶ್ವರ್ ಅವರ ಹೆಂಡತಿ ವನಜಾಕ್ಷಿ ಅವರಿಗೆ ಬೆದರಿಕೆ ಮತ್ತು ಕಿರುಕುಳವನ್ನು ನೀಡಿದ್ದಾರೆ. ಅ. 18ರಂದು ದ್ಯಾವಪ್ಪ ಅವರಿಗೆ ಸೇರಿದ ಬಗರ್ಹುಕುಂ ಜಮೀನಿಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಫಸಲಿಗೆ ಬಂದ ಅನಾನಸ್ ಬೆಳೆ ಮತು ್ತಸ್ಪ್ರಿಂಕ್ಲರ್ನ್ನು ನಾಶ ಮಾಡಿದ್ದಾರೆ. ಅಲ್ಲದೆ ರೇಣುಕಮ್ಮ ಎಂಬವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಧರಣಿನಿ
ತರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರೂ ಕಳ್ಳತನ ಪ್ರಕರಣ ದಾಖಲಿಸದೆ, ಆರೋಪಿಗಳು ತಪ್ಪಿಸಿಕೊಳ್ಳಲು ಸುಲಭವಾದ ಸೆಕ್ಷನ್ ಹಾಕಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಪೊಲೀಸರು ಲಘು ಉತ್ತರವನ್ನು ನೀಡಿದ್ದಾರೆ. ನೊಂದವರಿಗೆ ರಕ್ಷಣೆ ಕೊಡಬೇಕಾಗಿದ್ದ ಪೊಲೀಸರೇ, ಗೂಂಡಾಗಳ ಪರವಾಗಿ ನಿಂತಿರುವುದು ಖಂಡನೀಯ ಎಂದು ಧರಣಿನಿರತರು ದೂರಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಪರಮೇಶ್ವರ ದೂಗೂರು, ವಿಶ್ವನಾಥ ಗೌಡ ಅದರಂತೆ, ತಿಮ್ಮಪ್ಪ, ರಾಮಣ್ಣ ಹಸಲರು, ಗ್ರಾಮಸ್ಥರಾದ ರಾಚಪ್ಪ ಯಲಕುಂದ್ಲಿ, ದ್ಯಾವಪ್ಪ, ವಿಜಯ ಕುಮಾರ್, ಪರಮೇಶ್ವರ, ನಾರಾಯಣಪ್ಪ, ಜಯಮ್ಮ, ಗೌರಮ್ಮ, ನಿರ್ಮಲಾ, ಅಕ್ಷತಾ, ಮಂಜಪ್ಪ ಮತ್ತಿತರರು ಉಪಸ್ಥಿತರಿದ್ದರು. ರಕ್ಷಣೆಯ ಭರವಸೆ
ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾ ಗಾಧಿ
ಕಾರಿ ಡಿ.ಎಂ.ಸತೀಶ್ಕುಮಾರ್, ಯಲಕುಂದ್ಲಿ ಗ್ರಾಮದಲ್ಲಿ ಕೆಲವರು ಬಗರ್ಹುಕುಂ ಸಾಗುವಳಿದಾರರ ಮೇಲೆ ಮಾಡಿರುವ ದೌರ್ಜನ್ಯವನ್ನು ಗಂಭೀರವಾಗಿ ಪರಿಗ ಣಿಸಿದ್ದು, ಎಎಸ್ಪಿ ಅವರಿಗೆ ಪ್ರಕರಣ ಕುರಿತು ತನಿಖೆ ನಡೆಸುವಂತೆ ಸೂಚನೆ ನೀಡ ಲಾಗುತ್ತದೆ ಎಂದು ಭರವಸೆ ನೀಡಿದರು.







