ನಿಮ್ಮ ದಕ್ಷತೆಯ ಮೇಲೆ ನೇರ ಪರಿಣಾಮ ಬೀರುವ ಈ ಆಹಾರ ದುರಭ್ಯಾಸಗಳನ್ನು ಬಿಟ್ಟುಬಿಡಿ

ನಿಮ್ಮ ಕಾರ್ಯವೈಖರಿಯನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ನೀವು ಯೋಚಿಸುವಾಗ ಮತ್ತು ಹೆಚ್ಚು ಸಮರ್ಥವಾಗಿ ಕೆಲಸ ಮಾಡುವ ಬಗ್ಗೆ ಚಿಂತಿಸುವಾಗ ಸಾಮಾಜಿಕ ಮಾಧ್ಯಮಗಳನ್ನು ಬ್ಲಾಕ್ ಮಾಡುವುದು ಅಥವಾ ಬಾಗಿಲುಗಳನ್ನು ಮುಚ್ಚಿ ಕೆಲಸ ಮಾಡುವ ಬಗ್ಗೆ ಯೋಚಿಸಿರುತ್ತೀರಿ. ಕೆಲವೊಮ್ಮೆ ಲಂಚ್ ಬಾಕ್ಸ್ನಲ್ಲಿದ್ದ ತಿನಿಸನ್ನು ಸೇವಿಸಲು ಮನಸ್ಸಾಗುವುದಿಲ್ಲ. ನಿಮ್ಮ ಕೆಲಸದಲ್ಲಿ ಆಸಕ್ತಿ ಕಳೆದುಕೊಂಡಿದ್ದರೆ ಮತ್ತು ಸ್ವಲ್ಪ ನಿಧಾನಗತಿಯಲ್ಲಿದ್ದರೆ ಮೊದಲಿಗೆ ನೀವು ಹುಡುಕಬೇಕಾಗಿದ್ದೇ ಆಹಾರ. ನಿಮ್ಮ ತಟ್ಟೆಯೇ ನಿಮಗೆ ಉತ್ತರ ನೀಡಲಿದೆ. ನಿತ್ಯವೂ ಅಲ್ಲದೆ ಇದ್ದರೂ ವಾರಕ್ಕೊಮ್ಮೆಯಾದರೂ ನೀವು ಆಹಾರದ ವಿಚಾರದಲ್ಲಿ ಮಾಡುವ ಕೆಲವು ತಪ್ಪುಗಳನ್ನು ಇಲ್ಲಿ ನೀಡಿದ್ದೇವೆ. ಇವೇ ನಿಮ್ಮ ಉತ್ಪಾದನೆಗೆ ಸವಾಲಾಗಿ ಪರಿಣಮಿಸಿವೆ.
ಉಪಾಹಾರ ತ್ಯಜಿಸುವುದು
ಇದೇ ನಿಮ್ಮ ಪಟ್ಟಿಯಲ್ಲಿ ಟಾಪ್ನಲ್ಲಿದೆ. ಬಹಳಷ್ಟು ಮಂದಿ ಇಂದಿಗೂ ಬೆಳಗಿನ ಉಪಾಹಾರ ಸೇವಿಸುವ ಅಗತ್ಯವಿಲ್ಲ ಎಂದೇ ತಿಳಿಯುತ್ತಾರೆ. ಇತ್ತೀಚೆಗೆ ನಡೆದ ಸಮೀಕ್ಷೆಯೊಂದರ ಪ್ರಕಾರ ಐದು ಮಂದಿಯಲ್ಲಿ ಒಬ್ಬರಾದರೂ ಬೆಳಗಿನ ಉಪಾಹಾರ ಸೇವಿಸುವುದಿಲ್ಲ ಅಥವಾ ಕೇವಲ ಕಾಫಿ ಮಾತ್ರ ಕುಡಿಯುತ್ತಾರೆ. ಇನ್ನೂ ಶೇ. 25ರಷ್ಟು ಮಂದಿ ಬೆಳಗ್ಗೆ ಯೋಗಾರ್ಟ್, ಎನರ್ಜಿ ಬಾರ್ ತಿನ್ನುತ್ತಾರೆ. ಆದರೆ ಹೀಗೆ ಬೆಳಗಿನ ಉಪಾಹಾರ ಬಿಡುವುದರಿಂದ ಆಗುವ ಸಮಸ್ಯೆಯ ಬಗ್ಗೆ ಯೋಚಿಸಿದಲ್ಲಿ ಬೆಳಗಿನ ಉಪಾಹಾರ ಬಯಸುವವರು ಇನ್ನೂ ಹೆಚ್ಚು ಮಂದಿ ಇದ್ದಿರಬಹುದು.
ಹೀಗೆ ಬೆಳಗಿನ ಉಪಾಹಾರ ತ್ಯಜಿಸುವುದು ತೂಕ ಬೆಳೆಸಲು ಕಾರಣವಾಗಿ ಸುಸ್ತು ಆವರಿಸುತ್ತದೆ. ಆದರೆ ದೀರ್ಘ ರಾತ್ರಿಯ ನಂತರ ಉಪವಾಸ ಇರುವುದು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಅಂದರೆ ನಮ್ಮ ಮೆದುಳೂ ಸೇರಿ ದೇಹ ಖಾಲಿಯಾಗಿರುತ್ತದೆ. ಅಧ್ಯಯನಗಳು ತಿಳಿಸುವಂತೆ ಉಪಾಹಾರ ಸೇವಿಸುವುದು ಮುಖ್ಯವಾಗಿ ಗುಣಮಟ್ಟದ ಉಪಾಹಾರ ಶಾಲಾ ಮಕ್ಕಳಲ್ಲಿ ಸಾಮರ್ಥ್ಯ ವೃದ್ಧಿಸುತ್ತದೆ. ಚಿಪ್ಸ್ ಅಥವಾ ಸಿಹಿ ತಿನಿಸುಗಳನ್ನು ತಿಂದವರಿಗೆ ಹೋಲಿಸಿದಲ್ಲಿ ಉತ್ತಮ ಉಪಾಹಾರ ಸೇವಿಸಿದವರು ಸುಧಾರಿತ ಶೈಕ್ಷಣಿಕ ಪ್ರದರ್ಶನ ತೋರಿಸಿದ್ದಾರೆ. ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ದಿನವಿಡೀ ಸ್ಥಿರವಾಗಿಡಲು ಪ್ರೊಟೀನ್ ಉತ್ತಮವಾಗಿರುವ ಉಪಾಹಾರವನ್ನು ಸೇವಿಸುವುದು ಅಗತ್ಯ. ಇದು ದೇಹ ಮತ್ತು ಮೆದುಳಿನ ಶಕ್ತಿಗೆ ಕಾರಣವಾಗಲಿದೆ.
ಕಾರ್ಬೋಹೈಡ್ರೇಟ್ ಇರುವ ಮಧ್ಯಾಹ್ನದ ಊಟ.
ಸಭೆಗಳ ನಡುವೆ ತ್ವರಿತವಾಗಿ ಒಂದು ಆಹಾರವನ್ನು ಸೇವಿಸುವ ಅಗತ್ಯವಿರುವಾಗ ಬಹುತೇಕ ಪಿಜ್ಜಾದಂತಹ ದಪ್ಪನೆಯ ಕಾರ್ಬೋಹೈಡ್ರೇಟ್ ತುಂಬಿದ ಆಹಾರ ಸೇವಿಸುತ್ತೀರಿ. ಆದರೆ ಸ್ಯಾಂಡ್ವಿಚ್ ಅಥವಾ ಬರೀಟೋಗಳನ್ನು ಸೇವಿಸಿ ಅರ್ಧಗಂಟೆಯಲ್ಲೇ ಮೆದುಳಿನಲ್ಲಿ ಸುಸ್ತಾಗುವ ಅನುಭವವಾಗುತ್ತದೆ. ಹೀಗಾಗಿ ಕೀಬೋರ್ಡ್ ಬಳಿ ನಿದ್ದೆ ಮಾಡುವ ಭಾವನೆ ಬರುತ್ತದೆ.
ಸಂಸ್ಕರಿತ ಕಾರ್ಬೋಹೈಡ್ರೇಟ್ ಆಹಾರ ಸೇವನೆಯಿಂದ ನಿಮ್ಮ ಹೊಟ್ಟೆಯನ್ನು ಶೀಘ್ರವಾಗಿ ತುಂಬಿ ಮತ್ತೆ ಕೆಲಸಕ್ಕೆ ಇಳಿಯುವುದು ನಿಮ್ಮ ಉದ್ದೇಶ. ಆದರೆ ಇದು ನಿಮ್ಮ ಮನಸ್ಸಿನ ಮೇಲೆ ಮತ್ತು ಶಕ್ತಿಯ ಮೇಲೆ ಪರಿಣಾಮ ಬೀರಿ ಉತ್ಪಾದನಾ ಶಕ್ತಿಯನ್ನು ಕಡಿಮೆ ಮಾಡುತ್ತದೆ. ರಕ್ತದಲ್ಲಿ 25 ಗ್ರಾಂಗಳಷ್ಟು ಗ್ಲುಕೋಸ್ ಹರಿಯುತ್ತಿದ್ದಲ್ಲಿ ಮೆದುಳು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಅಂದರೆ ಬಾಳೆಹಣ್ಣಿನಲ್ಲಿ ಇರುವಷ್ಟು ಗ್ಲುಕೋಸ್. ಕಡಿಮೆ ಗ್ಲಿಸೆಮಿಕ್ ಕಾರ್ಬೋಗಳಾದ ಧಾನ್ಯಗಳು, ಆಹಾರಗಳು, ತರಕಾರಿಗಳು ಮತ್ತು ಹಾಲು ಮತ್ತು ಯೋಗಾರ್ಟ್ನಲ್ಲಿ ನಿಮಗೆ ಅಧಿಕ ಗುಣಮಟ್ಟದ ಗ್ಲುಕೋಸ್ ಮೂಲಗಳು ಸಿಗುತ್ತವೆ.
ಕಡಿಮೆ ಜೀರ್ಣಗೊಳ್ಳುವ ಕಾರ್ಬೋಗಳು ಕಡಿಮೆ ಮತ್ತು ದೀರ್ಘ ಶಕ್ತಿಗೆ ಉತ್ತಮ. ಸರಳ ಕಾರ್ಬೋಗಳನ್ನು ಶಕ್ತಿಗಾಗಿ ಬೇಗನೇ ಜೀರ್ಣಗೊಳಿಸಬಹುದು. ಉತ್ತಮ ಮಧ್ಯಾಹ್ನದ ಭೋಜನ ದೇಹಕ್ಕೆ ಅಗತ್ಯ ಶಕ್ತಿಯನ್ನು ಕೊಡುತ್ತದೆ.
ಮಧ್ಯಾಹ್ನದ ಊಟ ಬಿಡುವುದು
ಮಧ್ಯಾಹ್ನದ ಊಟ ಬಿಡುವುದು ನಿಮ್ಮ ಪಟ್ಟಿಯಲ್ಲಿ ಇರಲೇಬಾರದು. ರಕ್ತದಲ್ಲಿ ಸಕ್ಕರೆ ಪ್ರಮಾಣ ಕೊರತೆಯಾಗಿ ಮೆದುಳಿನ ಮೇಲೆ ಪರಿಣಾಮವಾಗುವುದು ಇದ್ದೇ ಇದೆ. ಆದರೆ ಮಧ್ಯಾಹ್ನದ ಭೋಜನ ಬಿಟ್ಟರೆ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳ ಕೊರತೆ ಬೀಳುತ್ತದೆ. ಇದರಿಂದ ಉತ್ಪಾದನಾ ಶಕ್ತಿ ಇನ್ನಷ್ಟು ಕಡಿಮೆಯಾಗುತ್ತದೆ. ಹೀಗಾಗಿ ಮಧ್ಯಾಹ್ನ ಊಟ ಬಿಡಲೇಬಾರದು. ಪ್ರತೀ ನಾಲ್ಕು ಗಂಟೆಗಳಿಗೊಮ್ಮೆ ಆಹಾರ ಸೇವನೆ ಉತ್ತಮ ಶಕ್ತಿಯನ್ನು ದೇಹಕ್ಕೆ ಕೊಡುತ್ತದೆ. ಆದರೆ ಊಟ ಬಿಡುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುವಂತೆ ಮಾಡಿ ಅನಾರೋಗ್ಯ ಕಾಡಬಹುದು.
ಕಾಫಿ ಕುಡಿಯುವ ಹವ್ಯಾಸ
ಶಕ್ತಿ ಕಡಿಮೆಯಾಯಿತೆಂದು ಕಾಫಿ ಕುಡಿಯಲು ಹೋಗುವುದು ಸಾಮಾನ್ಯ ಹವ್ಯಾಸ. ಆದರೆ ಕೆಫೈನ್ ಸ್ವಲ್ಪ ಶಕ್ತಿಯನ್ನು ದೇಹಕ್ಕೆ ನೀಡುತ್ತದಾದರೂ, ಅತೀವ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ನ್ಯೂರೋಸೈಕೋಫಾರ್ಮಕಾಲಜಿ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಕೆಫೈನ್ ಸೇವನೆ ಬಹಳ ಹಾನಿಕರ. ಕೆಫೈನ್ ಕುಡಿಯುವ ಮೊದಲು ಸಾಮಾನ್ಯವಾಗಿ ಕೆಲಸ ಮಾಡುತ್ತಿದ್ದ ಇಲಿಗಳು ನಂತರ ವರ್ತನೆ ಬದಲಾಯಿಸಿದ್ದನ್ನು ಅಧ್ಯಯನದಲ್ಲಿ ಕಂಡಿದೆ. ದಿನಕ್ಕೆ ನಾಲ್ಕು ಕಪ್ ಮೀರಿ ಕುಡಿದರೆ ಅಡ್ಡ ಪರಿಣಾಮ ಖಚಿತ. ಕೆಫೈನ್ ಮೆದುಳನ್ನು ಪ್ರಚೋದಿಸುತ್ತದೆ ಮತ್ತು ಅದರ ಪರಿಣಾಮ ಕೇಂದ್ರ ನರವ್ಯೆಹದಲ್ಲಿ ಕಾಣಿಸುತ್ತದೆ. ಅಲ್ಲಿಂದ ಹೃದಯ ಮತ್ತು ಇತರ ದೇಹದ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ.
ನೀರು ಕುಡಿಯುವುದು
ನಿತ್ಯವೂ ಸಾಕಷ್ಟು ನೀರು ಕುಡಿಯಲೇಬೇಕು. ಸಾಕಷ್ಟು ನೀರು ಕುಡಿಯುವುದರಿಂದ ನಕಾರಾತ್ಮಕ ಪರಿಣಾಮ ಕಡಿಮೆಯಾಗುತ್ತದೆ. ಇದು ನಿಮ್ಮ ವರ್ತನೆಯಲ್ಲಿ ಕಾಣುತ್ತದೆ. ಗಮನ, ಜಾಗೃತಿ, ಕಡಿಮೆ ಸ್ಮರಣಶಕ್ತಿ ಮೇಲೆ ಪರಿಣಾಮ ಬೀರಲಿದೆ. ಸ್ವಲ್ಪ ಮಟ್ಟಿಗೆ ದೇಹದಲ್ಲಿ ನೀರು ಕಡಿಮೆಯಾದರೂ ವ್ಯಕ್ತಿಯ ಶಕ್ತಿಯ ಮಟ್ಟ ಮತ್ತು ಮನೋ ನಿಲುವುಗಳ ಮೇಲೆ ಕಂಡು ಸ್ಪಷ್ಟವಾಗಿ ಯೋಚಿಸಲು ಸಾಧ್ಯವಾಗದಂತೆ ಮಾಡುತ್ತದೆ ಎಂದು ಅಧ್ಯಯನಗಳು ಹೇಳಿವೆ. ಹೀಗಾಗಿ ಆಗಾಗ್ಗೆ ಕಾಫಿ ಕುಡಿಯುವ ಬದಲು ನೀರು ಕುಡಿಯಬೇಕು.
ಸಂಜೆಯ ಸಕ್ಕರೆ ಸೇವನೆ
ಕಡಿಮೆ ಗ್ಲಿಸಮಿಕ್ ಆಹಾರಗಳು ಶಕ್ತಿಯನ್ನು ಹೆಚ್ಚಿಸುವಂತೆ ಅಧಿಕ ಗ್ಲಿಸಮಿಕ್ ಆಹಾರಗಳು ವಿರುದ್ಧ ಪರಿಣಾಮ ಬೀರುತ್ತವೆ. ಕಪ್ಕೇಕ್ಗಳು ಅಥವಾ ಬರ್ತ್ಡೇ ಪಾರ್ಟಿ ಎಂದು ಕೇಕ್ ಸೇವನೆ ದೇಹದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಒಮ್ಮೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಇಳಿದಲ್ಲಿ ನಿದ್ದೆ ಬರುವ ಭಾವನೆ ಬರುತ್ತದೆ. ಅಧಿಕ ಸಕ್ಕರೆ ಪ್ರಮಾಣದ ಸೇವನೆ ಪರಿಣಾಮ ನೆನಪು ಶಕ್ತಿಯ ಮೇಲೆ ಾಣಲಿದೆ ಎಂದು ಅಧ್ಯಯನ ಹೇಳಿದೆ.
ತಜ್ಞರು ಸಲಹೆ ನೀಡಿರುವ ಪ್ರಕಾರ ಮಹಿಳೆಯರು 2.7 ಲೀಟರ್ ಮತ್ತು ಪುರುಷರು 3.7 ಲೀಟರ್ಗಳಷ್ಟು ನೀರನ್ನು ನಿತ್ಯವೂ ಸೇವಿಸಬೇಕು. ಸಂಜೆಯ ಸಕ್ಕರೆ ಸೇವನೆ.
ಕೃಪೆ: http://www.businessinsider.com/







