ಅ.25ರಂದು ನಾಟ್ಯಕಲಾ ತಪಸ್ವಿ ಬಿರುದು ಪ್ರದಾನ
ಮಂಗಳೂರು, ಅ.20: ಶ್ರೀದೇವಿ ನೃತ್ಯ ಕೇಂದ್ರದ ಸಂಸ್ಥಾಪಕಿ ಗುರು ಜಯಲಕ್ಷ್ಮೀ ಆಳ್ವ ಅವರ 83ನೆ ಹುಟ್ಟುಹಬ್ಬದ ಅಂಗವಾಗಿ ಅ.25ರಂದು ಮಂಗಳೂರಿನ ಪುರಭವನದಲ್ಲಿ ಖ್ಯಾತ ನೃತ್ಯ ಗುರು ಪದ್ಮಭೂಷಣ ಸಿ.ವಿ.ಚಂದ್ರಶೇಖರ್ ಅವರಿಗೆ ನಾಟ್ಯಕಲಾ ತಪಸ್ವಿ ಬಿರುದನ್ನು ಪ್ರದಾನ ಮಾಡಲಾಗುವುದು ಎಂದು ಶ್ರೀದೇವಿ ನೃತ್ಯ ಕೇಂದ್ರದ ಡಾ.ಆರತಿ ಶೆಟ್ಟಿ ತಿಳಿಸಿದ್ದಾರೆ.
ಗುರುವಾರ ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಲಕ್ಷ್ಮೀ ಆಳ್ವ ಅವರ ಸ್ಮರಣಾರ್ಥ ಜಯಕಲಾ ಪ್ರಶಸ್ತಿಯನ್ನು ಈ ಬಾರಿ ಸ್ಥಳೀಯ ಕಲಾವಿದ ಶಾಂತಲಾ ಪ್ರಶಸ್ತಿ ವಿಜೇತ ಮುರಳೀಧರ ರಾವ್ ಅವರಿಗೆ ನೀಡಿ ಸನ್ಮಾನಿಸಲಾಗುವುದು ಎಂದರು.
ಇದೇ ಸಂದರ್ಭ ದೃಷಿಕಾ ದೀಚಮ್ಮ ಅವರು ಭರತನಾಟ್ಯ ರಂಗಪ್ರವೇಶ ನಡೆಯಲಿದೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹರಿಕೃಷ್ಣ ಪುನರೂರು, ಗೀತಾ ದೇವಿ, ಹರೀಶ್ ಶೆಟ್ಟಿ, ಗಣಪತಿ ಉಪಸ್ಥಿತರಿದ್ದರು.
Next Story