Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ದೇವಾಲಯಗಳಲ್ಲಿ ನೀವು ಅರ್ಪಿಸುವ ಕೂದಲು...

ದೇವಾಲಯಗಳಲ್ಲಿ ನೀವು ಅರ್ಪಿಸುವ ಕೂದಲು ಎಲ್ಲಿಗೆ ಹೋಗಿ ತಲುಪುತ್ತದೆ?

ಅದಕ್ಕಿದೆ ಭಾರೀ ಡಿಮ್ಯಾಂಡು

ವಾರ್ತಾಭಾರತಿವಾರ್ತಾಭಾರತಿ21 Oct 2016 5:10 PM IST
share
ದೇವಾಲಯಗಳಲ್ಲಿ ನೀವು ಅರ್ಪಿಸುವ ಕೂದಲು ಎಲ್ಲಿಗೆ ಹೋಗಿ ತಲುಪುತ್ತದೆ?

ಮಕ್ಕಳ ಮೊದಲ ತಲೆಗೂದಲು ತೆಗೆಯುವುದರಿಂದ ಆರಂಭಿಸಿ ಸತ್ತ ವ್ಯಕ್ತಿಗೆ ಅಂತ್ಯಕ್ರಿಯೆ ನಡೆಸಿದ ಮೇಲೆಯೂ ಸಹ ಭಾರತದಲ್ಲಿ ಕೂದಲು ತೆಗೆಸುವ ಹರಕೆಯ ಪರಂಪರೆ ವಿಶಿಷ್ಟವಾಗಿ ಬೆಳೆದುಬಂದಿದೆ. ದೇಶದ ಹಲವು ದೇವಸ್ಥಾನಗಳಲ್ಲಿ ಹೀಗೆ ಕೂದಲು ತೆಗೆಸುವ ಹರಕೆ ಇದೆ. ದಕ್ಷಿಣ ಭಾರತದ ಪ್ರಸಿದ್ಧ ತಿರುಪತಿಯ ತಿಮ್ಮಪ್ಪನ ದೇವಸ್ಥಾನದಿಂದ ಆರಂಭಿಸಿ ಹಲವು ದೇವಾಲಯಗಳಲ್ಲಿ ಇಷ್ಟಾರ್ಥ ನೆರವೇರಿದ್ದಕ್ಕಾಗಿ ಕೂದಲು ಕೊಡುವ ಪರಂಪರೆ ಇದೆ. ಇಂಥಾ ದೊಡ್ಡ ದೇವಾಲಯಗಳಲ್ಲಿ ಪ್ರತೀ ದಿನ ಅಸಂಖ್ಯಾತ ಟನ್‌ಗಳಷ್ಟು ಕೂದಲು ಸಂಗ್ರಹವಾಗುತ್ತದೆ. ಈ ದೇವಾಲಯಗಳಿಗೆ ಕೂದಲು ಕೊಟ್ಟು ಲಕ್ಷಾಂತರ ಲಾಭವಾಗಿದೆ ಎಂದು ಹರಕೆ ಹೊತ್ತವರು ಹೇಳುವುದನ್ನು ಕೇಳಿರಬಹುದು. ಆದರೆ ಹೀಗೆ ಕತ್ತರಿಸಿದ ಕೂದಲು ಏನಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದನ್ನು ಯಾರು ಬಳಸುತ್ತಾರೆ? ಇದನ್ನು ಬಳಸಲು ಯೋಗ್ಯವಾಗಿಸುವುದು ಹೇಗೆ? ಅಲ್ಲದೆ ಈ ಕೂದಲುಗಳು ಲಂಡನ್ ಅಥವಾ ಇತರ ಪಶ್ಚಿಮ ದೇಶಗಳ ಮಾರುಕಟ್ಟೆ ಪ್ರವೇಶಿಸುವುದು ಹೇಗೆ?

ಈ ಕೂದಲುಗಳ ಲಂಡನ್ ಯಾತ್ರೆಯ ಮೊದಲ ಭಾಗ ಕೂದಲು ದಾನ ಮಾಡಿದ ದೇವಾಲಯದಲ್ಲೇ ಆರಂಭವಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಕೂದಲುಗಳಿಗೆ ಹೆಚ್ಚು ಬೆಲೆ ಸಿಗುತ್ತದೆ. ಏಕೆಂದರೆ ಇದನ್ನು ವರ್ಜಿನ್ ಹೇರ್ (ಉತ್ತಮ ಗುಣಮಟ್ಟದ) ಎಂದು ಹೇಳಲಾಗುತ್ತದೆ. ಇವುಗಳನ್ನು ವರ್ಜಿನ್ ಎಂದು ಹೇಳುವ ಹಿಂದೆಯೂ ಒಂದು ಕಾರಣವಿದೆ. ಬಹಳಷ್ಟು ಭಾರತೀಯರು ತಮ್ಮ ಕೂದಲಿಗೆ ಬಣ್ಣ ಬಳಿಯುವುದು ಅಥವಾ ಇನ್ಯಾವುದೇ ರಾಸಾಯನಿಕಗಳನ್ನು ಬಳಸುವುದಿಲ್ಲ. ದೇವಾಲಯಗಳಲ್ಲಿ ಕೂದಲು ಅರ್ಪಿಸುವವರು ಬಹಳ ಕೆಳವರ್ಗ, ಮಧ್ಯಮವರ್ಗದವರು. ಇವರು ಹೇರ್ ಸ್ಟೈಲಿಂಗ್ ಕೂಡ ಮಾಡುವುದಿಲ್ಲ. ಹೀಗಾಗಿ ಇವರ ಕೂದಲು ಬಹುತೇಕ ನೈಸರ್ಗಿಕವಾಗಿರುತ್ತದೆ. ಅಲ್ಲದೆ ಬಾಲ್ಯದಲ್ಲಿ ಬೆಳೆಸಿದ ಮೊದಲ ಕೂದಲಿನಲ್ಲಿ ಕೆರೋಟಿನ್ ಅಂಶ ಹೆಚ್ಚಾಗಿರುತ್ತದೆ. ಈ ಪ್ರೊಟೀನ್ ಕಾರಣದಿಂದ ಕೂದಲು ಆರೋಗ್ಯಕರವಾಗಿರುತ್ತದೆ. ಇದೇ ಕಾರಣದಿಂದ ಇವುಗಳನ್ನು ವರ್ಜಿನ್ ಹೇರ್ ಎನ್ನಲಾಗುತ್ತದೆ.

ದೇವಾಲಯದಲ್ಲಿ ಅರ್ಪಿಸಿದ ಕೂದಲುಗಳನ್ನು ಪ್ರೊಸೆಸಿಂಗ್‌ಗಾಗಿ ಕಾರ್ಖಾನೆಗಳಿಗೆ ಕಳುಹಿಸಲಾಗುತ್ತದೆ. ಪ್ರೊಸೆಸಿಂಗ್‌ನ ಮೊದಲ ಭಾಗವಾಗಿ ಅವುಗಳನ್ನು ಕೈಗಳಿಂದ ಬಿಡಿಸಲಾಗುತ್ತದೆ. ಕೈಗಳಿಂದ ಲಕ್ಷಾಂತರ ಟನ್ ಕೂದಲುಗಳನ್ನು ಬಿಡಿಸುವುದು ಬಹಳ ಕಷ್ಟ ಮತ್ತು ಧೀರ್ಘ ಪ್ರಕ್ರಿಯೆಯಾಗಿದೆ. ಕಾರ್ಖಾನೆಗಳಲ್ಲಿ ತೆಳುವಾದ ಸೂಜಿಗಳ ನೆರವಿನಿಂದ ಕಾರ್ಮಿಕರು ಇದನ್ನು ಬಿಡಿಸುತ್ತಾರೆ. ನಂತರ ಈ ಕೂದಲು ಪ್ರೊಸೆಸಿಂಗ್‌ನ ಮುಂದಿನ ಹಂತಕ್ಕೆ ಸಿದ್ಧವಾಗುತ್ತದೆ.

ಬಿಡಿಸಿದ ಮೇಲೆ ಈ ಕೂದಲುಗಳನ್ನು ಲೋಹದ ಒಂದು ತುಂಡಿನಿಂದ ಹೊಡೆದು ಸ್ವಚ್ಛಗೊಳಿಸಲಾಗುತ್ತದೆ. ಅದರ ನಂತರ ಇವುಗಳನ್ನು ಅವುಗಳ ಉದ್ದಕ್ಕೆ ಅನುಸಾರವಾಗಿ ವಿಭಿನ್ನ ಬಂಡಲ್‌ಗಳಲ್ಲಿ ಕಟ್ಟಲಾಗುತ್ತದೆ. ಇದರ ನಂತರ ಕೂದಲುಗಳ ಈ ಬಂಡಲ್‌ಗಳನ್ನು ಕೀಟಾಣುರಹಿತವನ್ನಾಗಿ ಮಾಡಲು ಡೈಲ್ಯೂಟ್ ಆಗಿರುವ ಆಸಿಡ್ ದ್ರಾವಣದಲ್ಲಿ ಮುಳುಗಿಸಲಾಗುತ್ತದೆ. ಸ್ವಚ್ಛ ಮಾಡಿದ ಕೂದಲುಗಳನ್ನು ಎಲ್ಲಕ್ಕಿಂತ ಶ್ರೇಷ್ಠವಾದ ಕೂದಲುಗಳಿಗೆ ಆಸ್ಮೋಸಿಸ್ ಬಾತ್ ಮಾಡಲಾಗುತ್ತದೆ. ಆ ಮೂಲಕ ಅವುಗಳ ಕ್ಯುಟಿಕಲ್ಸ್ ನಷ್ಟವಾಗದೆಯೇ ಅವುಗಳಿಗೆ ಅಂಟಿದ ಕೊಳೆಯನ್ನು ನಿವಾರಿಸಲಾಗುತ್ತದೆ. ಈ ಸ್ವಚ್ಛ ಮತ್ತು ಶುದ್ಧ ಕೂದಲುಗಳಿಂದ ಮಹಿಳೆಯರು ಮತ್ತು ಪುರುಷರಿಗಾಗಿ ರಂಗು ರಂಗಿನ ವಿಗ್ ತಯಾರಿಸಲಾಗುತ್ತದೆ. ಇವುಗಳ ಬೇಡಿಕೆ ಹೆಚ್ಚಾಗಿರುವ ದೇಶಗಳಲ್ಲಿ ವಿಗ್‌ಗಳು ಮಾರಾಟವಾಗುತ್ತವೆ.

ಹಲವು ಸಲ ಕಡಿಮೆ ಬೆಲೆ ಇರುವ ವಿಗ್ ಕೊಂಡಲ್ಲಿ, ಮಾನವ ಕೂದಲುಗಳ ಜೊತೆಗೆ ಅದರಲ್ಲಿ ಕತ್ತೆ ಅಥವಾ ಕುರಿಯ ಕೂದಲುಗಳೂ ಸೇರಿರುತ್ತವೆ. ಇದನ್ನು ಹೊರತುಪಡಿಸಿ ಅಸಲಿ ಕೂದಲೆಂದು ಹೇಳಿ ಸಿಂತೆಟಿಕ್ ಕೂದಲನ್ನೂ ಮಾರಲಾಗುತ್ತದೆ. ಆದರೆ ಉತ್ತಮ ಗುಣಮಟ್ಟದ ಅಸಲಿ ಮಾನವ ಕೂದಲುಗಳಿಂದ ತಯಾರಾದ ವಿಗ್‌ಗೆ ಅಂತಾರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯಿದೆ. ಅಂಗಡಿಯವರು ಉತ್ತಮ ಗುಣಮಟ್ಟದ ವಿಗ್‌ಗೆ 10 ಸಾವಿರ ಕೇಳಿದರೆ ಅದು ದುಬಾರಿ ಎಂದೇನೂ ತಿಳಿದುಕೊಳ್ಳಬೇಡಿ. ಇದರ ಬೆಲೆಯಿಂದಾಗಿಯೇ ಅಂತಾರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹಳಷ್ಟು ಬಾರಿ ಇದನ್ನು ಕಪ್ಪು ಚಿನ್ನ ಎಂದೂ ಹೇಳಲಾಗುತ್ತದೆ.

ಕೃಪೆ: http://www.jansatta.com/

share
ವಾರ್ತಾಭಾರತಿ
ವಾರ್ತಾಭಾರತಿ
Next Story
X