ಕೆಡಿಪಿ ಸದಸ್ಯರಾಗಿ ಆಶೋಕ್ ಸಂಪ್ಯ ನೇಮಕ
![ಕೆಡಿಪಿ ಸದಸ್ಯರಾಗಿ ಆಶೋಕ್ ಸಂಪ್ಯ ನೇಮಕ ಕೆಡಿಪಿ ಸದಸ್ಯರಾಗಿ ಆಶೋಕ್ ಸಂಪ್ಯ ನೇಮಕ](https://www.varthabharati.in/sites/default/files/images/articles/2016/10/21/21ptr-Ashok sampya.jpg)
ಪುತ್ತೂರು,ಅ.21: ಪುತ್ತೂರು ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿ(ಕೆಡಿಪಿ) ನಾಮನಿರ್ದೇಶಿತ ಸದಸ್ಯರಾಗಿ ಕಾಂಗ್ರೆಸ್ ಮುಖಂಡ ಅಶೋಕ್ ಸಂಪ್ಯ ಅವರನ್ನು ಸರ್ಕಾರ ನೇಮಕಗೊಳಿಸಿದೆ.
ಈ ಹಿಂದೆ ನಾಮನಿರ್ದೇಶಿತ ಸದಸ್ಯರಾಗಿದ್ದ ಸುರೇಶ್ ಕುಮಾರ್ ಸೊರಕೆ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಅಶೋಕ್ ಸಂಪ್ಯ ಅವರನ್ನು ನೇಮಕಗೊಳಿಸಲಾಗಿದೆ.
ಅಶೋಕ್ ಸಂಪ್ಯ ಅವರು ಪುತ್ತೂರು ಯುವವಾಹಿನಿ ಘಟಕದ ಅಧ್ಯಕ್ಷರಾಗಿ, ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ, ಎನ್ಎಸ್ಯುಐ ಜಿಲ್ಲಾ ಉಪಾಧ್ಯಕ್ಷರಾಗಿ, ಆರ್ಯಾಪು ಗ್ರಾ.ಪಂ ಸದಸ್ಯರಾಗಿ, ಸಂಪ್ಯ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾಗಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Next Story