ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಅಗ್ನಿ ಆಕಸ್ಮಿಕ: ಮೂವರು ಗಂಭೀರ
![ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಅಗ್ನಿ ಆಕಸ್ಮಿಕ: ಮೂವರು ಗಂಭೀರ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಅಗ್ನಿ ಆಕಸ್ಮಿಕ: ಮೂವರು ಗಂಭೀರ](/images/placeholder.jpg)
ಮುಲ್ಕಿ,ಅ.21:ಇಲ್ಲಿಗೆ ಸಮೀಪದ ಕಾರ್ನಾಡು ದರ್ಗಾ ಮಸೀದಿಯ ಬಳಿ ಇರುವ ದಿಲ್ಶಾದ್ ಮಂಜಿಲ್ ಮನೆಯಲ್ಲಿ ಶುಕ್ರವಾರ ಗ್ರಾಸ್ ಸಿಲಿಂಡರ್ ಸೋರಿಕೆಯಿಂದ ನಡೆದ ಅಗ್ನಿ ಆಕಸ್ಮಿಕದಲ್ಲಿ ಮೂವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಗಾಯಗೊಂಡವರನ್ನು ಮಹಿಳೆ ಶಹನಾಜ್(40) ಹಾಗೂ ಮಕ್ಕಳಾದ ಪವಾಜ್(17),ನಶ್ವನ್(15) ಎಂದು ಗುರುತಿಸಲಾಗಿದೆ.ಅಗ್ನಿ ಆಕಸ್ಮಿಕದಿಂದ ಅಡುಗೆ ಮನೆ ಹಾನಿಯಾಗಿದ್ದು ಲಕ್ಷಾಂತರ ನಷ್ಟ ಸಂವಿಸಿದೆ.
ಕಾರ್ನಾಡು ದರ್ಗಾ ಮಸೀದಿಯ ಬಳಿ ಇರುವ ದಿಲ್ಶಾದ್ ಮಂಜಿಲ್ ನ ಬಡ ಕುಟುಂಬದಲ್ಲಿ ವಾಸಿಸುತ್ತಿರುವ ಮಹಿಳೆ ಶಹನಾಜ್ ಎಂದಿನಂತೆ ಅಡುಗೆ ಮಾಡಲು ಹೊಸ ಗ್ಯಾಸ್ ಸಿಲಿಂಡರ್ ಹೊತ್ತಿಸಿದ್ದರು.ಆದರೆ ಅವರಿಗೆ ಗ್ಯಾಸ್ ಸಿಲಿಂಡರಿನಲ್ಲಿ ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂದಿರಲಿಲ್ಲ. ಈ ನಡುವೆ ಬದಿಯಲ್ಲಿದ್ದ ಮಿಕ್ಸಿಯನ್ನು ವಿದ್ಯುತ್ತಿಗೆ ಸಿಕ್ಕಿಸಿ ಅರೆಯಲು ಪ್ರಾರಂಭಿಸಿದಾಗ ಸಣ್ಣ ಮಟ್ಟಿಗೆ ಅಗ್ನಿ ಆಕಸ್ಮಿಕ ನಡೆದು ಬೆಂಕಿ ಕಿಡಿ ತಗುಲಿ ಸ್ಫೊಟಗೊಂಡ ಶಬ್ದ ಕೇಳಿಸಿತು.ಕೂಡಲೇ ನೆರೆಮನೆಯವರು ಧಾವಿಸಿ ಬೆಂಕಿಯನ್ನು ಹೊಯಿಗೆ ಮುಖಾಂತರ ನಂದಿಸಿದರು. ಏನಾಯಿತು ಎಂದು ತಿಳಿಯುವಷ್ಟರಲ್ಲಿ ಆಕಸ್ಮಿಕ ಬೆಂಕಿ ತಗುಲಿದ ಕಾರಣ ತಾಯಿ ಸಹಿತ ಸುಟ್ಟ ಗಾಯಗಳಿಂದ ಇಬ್ಬರು ಮಕ್ಕಳು ಗಂಭೀರ ಗಾಂುಗೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಮುಲ್ಕಿ ನ.ಪಂ. ಸದಸ್ಯ ಪುತ್ತುಬಾವ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸುವಲ್ಲಿ ಮಾನವೀಯತೆ ಮೆರೆದಿದ್ದಾರೆ.ಗ್ಯಾಸ್ ಸಿಲಿಂಡರಿನಲ್ಲಿ ವಾಶರ್ ಇಲ್ಲದೆ ಕಾರಣ ಈ ದುರ್ಘಟನೆ ನಡೆದಿದೆ ಎಂದು ಮುಲ್ಕಿ ನ.ಪಂ. ಸದಸ್ಯ ಪುತ್ತು ಬಾವ ಆರೋಪಿಸಿದ್ದಾರೆ.ಈ ಬಗ್ಗೆ ಮೂಲ್ಕಿ ಠಾಣೆಗೆ ಗ್ಯಾಸ್ ಆಜೆನ್ಸಿ ಮಾಲಕ ವಿರುದ್ದ ದೂರು ನೀಡಲಾಗುವುದು ಹಾಗೂ ಬಡಕುಟುಂಬಕ್ಕೆ ಗರಿಷ್ಠ ಪರಿಹಾರ ನೀಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.ಗ್ಯಾಸ್ ಸಿಲಿಂಡರ ಸ್ಪೋಟದ ದುರ್ಘಟನೆಯಿಂದ ಅಡುಗೆ ಮನೆಯ ಸಾಮಾನುಗಳು ಚಲ್ಲಾಪಿಲ್ಲಿಯಾಗಿದ್ದು ಗಾಯಾಳುಗಳು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.ಶುಕ್ರವಾರ ಬೆಳಗ್ಗೆ ನಡೆದ ಘಟನೆಯಿಂದ ಸ್ಥಳೀಯರು ಯಭೀತರಾಗಿದ್ದು ಗ್ಯಾಸ್ ಸಿಲಿಂಡರ್ ಮಾಲಕರ ನಿರ್ಲ್ಯಕ್ಷ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.