Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಅದಾನಿಯ ಆಸ್ಟ್ರೇಲಿಯ ಕಲ್ಲಿದ್ದಲು ಯೋಜನೆ...

ಅದಾನಿಯ ಆಸ್ಟ್ರೇಲಿಯ ಕಲ್ಲಿದ್ದಲು ಯೋಜನೆ ನಿಲ್ಲಿಸುವ ಚಳವಳಿಗೆ ವಿದೇಶಿ ನಿಧಿ?

ಹಿಲರಿ ಕ್ಲಿಂಟನ್ ನಂಟು?: ವಿಕಿಲೀಕ್ಸ್

ವಾರ್ತಾಭಾರತಿವಾರ್ತಾಭಾರತಿ22 Oct 2016 7:23 PM IST
share
ಅದಾನಿಯ ಆಸ್ಟ್ರೇಲಿಯ ಕಲ್ಲಿದ್ದಲು ಯೋಜನೆ ನಿಲ್ಲಿಸುವ ಚಳವಳಿಗೆ ವಿದೇಶಿ ನಿಧಿ?

ಮೆಲ್ಬರ್ನ್, ಅ. 22: ಅದಾನಿ ಗುಂಪು ಆಸ್ಟ್ರೇಲಿಯದಲ್ಲಿ ಕೈಗೆತ್ತಿಕೊಂಡಿರುವ 21.7 ಬಿಲಿಯ ಡಾಲರ್ (1.45 ಲಕ್ಷ ಕೋಟಿ ರೂಪಾಯಿ) ಹೂಡಿಕೆಯ ಕಲ್ಲಿದ್ದಲು ಯೋಜನೆಗೆ ‘‘ವಿದೇಶದಿಂದ ನಿಧಿ ಪಡೆಯುತ್ತಿರುವ, ಸುಸಂಘಟಿತ’’ ಗುಂಪೊಂದು ಅಡಚಣೆಯೊಡ್ಡುತ್ತಿದೆ ಎಂದು ‘ವಿಕಿಲೀಕ್ಸ್’ ಬಿಡುಗಡೆ ಮಾಡಿರುವ ಹೊಸ ಇಮೇಲ್‌ಗಳು ತಿಳಿಸಿವೆ.

ಅದಾನಿಯ ಯೋಜನೆಯನ್ನು ನಿಲ್ಲಿಸಲು ಈ ಗುಂಪು ಸಾಂಪ್ರದಾಯಿಕ ಭೂಮಾಲೀಕರ ಮೇಲೆ ಪ್ರಭಾವ ಬೀರುತ್ತಿದೆ ಎಂದು ಹೇಳಲಾಗಿದೆ.

ಅಮೆರಿಕದ ‘ಸ್ಯಾಂಡ್ಲರ್ ಫೌಂಡೇಶನ್’ ಎಂಬ ಸಂಸ್ಥೆ ಆಸ್ಟ್ರೇಲಿಯದ ಪರಿಸರ ಗುಂಪು ‘ಸನ್‌ರೈಸ್ ಪ್ರಾಜೆಕ್ಟ್’ಗೆ ನಿಧಿ ಒದಗಿಸುತ್ತಿರುವುದನ್ನು ಸರಣಿ ಇಮೇಲ್‌ಗಳು ಬಹಿರಂಗಪಡಿಸಿವೆ. ಇದಕ್ಕೆ ಪ್ರತಿಯಾಗಿ, ಅದಾನಿಯ ಕಲ್ಲಿದ್ದಲು ಯೋಜನೆಯನ್ನು ವಿರೋಧಿಸಿದರೆ ‘‘ವಾಂಗನ್ ಮತ್ತು ಜಾಗಲಿಂಗೊ’’ ಬುಡಕಟ್ಟಿನ ಜನರಿಗೆ ಆರ್ಥಿಕ ನೆರವು ಮತ್ತು ಸ್ಕಾಲರ್‌ಶಿಪ್‌ಗಳನ್ನು ನೀಡುವ ಕೊಡುಗೆಯನ್ನು ಸನ್‌ರೈಸ್ ಪ್ರಾಜೆಕ್ಟ್ ನೀಡಿದೆ.

ಅದೂ ಅಲ್ಲದೆ, ತನ್ನ ವಿದೇಶ ನಿಧಿ ಮೂಲವನ್ನು ಆಸ್ಟ್ರೇಲಿಯದ ಸಂಸತ್ತಿನಿಂದ ಅಡಗಿಸಿಡುವಲ್ಲಿ ಯಶಸ್ವಿಯಾಗಿರುವ ಬಗ್ಗೆ ಸನ್‌ರೈಸ್ ಪ್ರಾಜೆಕ್ಟ್ ಜಂಭ ಕೊಚ್ಚಿಕೊಂಡಿರುವ ಇಮೇಲ್‌ಗಳೂ ಬಹಿರಂಗವಾಗಿವೆ ಎಂದು ‘ದಿ ಆಸ್ಟ್ರೇಲಿಯನ್’ ಪತ್ರಿಕೆ ಶನಿವಾರ ವರದಿ ಮಾಡಿದೆ.

ಉತ್ತರ ಕ್ವೀನ್ಸ್‌ಲ್ಯಾಂಡ್‌ನ ಬುಡಕಟ್ಟು ಪಂಗಡಗಳಿಗೆ ಹೊಂದುವ ಸಲಹೆಗಳನ್ನು ಸನ್‌ರೈಸ್ ನೀಡಿದೆ ಹಾಗೂ ‘‘ಇಡೀ ಗಲಿಲೀ ಬೇಸಿನ್ ತೈಲ ಕೈಗಾರಿಕಾ ಸಂಕೀರ್ಣ ತನ್ನ ಅಂತಿಮ ಕ್ಷಣಗಳನ್ನು ಎದುರು ನೋಡುತ್ತಿದೆ ಎಂಬುದಾಗಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ರ ಪ್ರಚಾರ ತಂಡದ ಅಧ್ಯಕ್ಷ ಜಾನ್ ಪೊಡೆಸ್ಟ ಅವರ ಇಮೇಲ್ ಸಂದೇಶಗಳು ತಿಳಿಸಿವೆ ಎಂದು ವರದಿ ಹೇಳಿದೆ.

ಸನ್‌ರೈಸ್ ಪ್ರಾಜೆಕ್ಟ್‌ನ ‘ತೆರಿಗೆ ವಿನಾಯಿತಿ ಪಡೆದ ದತ್ತಿ ಸಂಸ್ಥೆ’ಯ ಸ್ಥಾನಮಾನವನ್ನು ಉಳಿಸಿಕೊಳ್ಳಲು ‘ಹ್ಯೂಮನ್ ರೈಟ್ಸ್ ವಾಚ್’ ಎಂಬ ಇನ್ನೊಂದು ಗುಂಪು ಅದಕ್ಕೆ ಸಹಾಯ ಮಾಡಿದೆ. ‘‘ಯಾಕೆಂದರೆ, ಗಣಿ ಕಂಪೆನಿಗಳು ಲಿಬರಲ್ ರಾಜಕೀಯ ನಾಯಕರನ್ನು ಕೈವಶಮಾಡಿಕೊಂಡು ವಂಚನೆಯ ಆಟ ಆಡುತ್ತಿವೆ’’ ಎಂದು ಒಂದು ಇಮೇಲ್ ಹೇಳಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X