ಎಸ್ಸೆಸ್ಸೆಫ್: ಜಿಲ್ಲಾ ಮಟ್ಟದ ಕ್ಯಾಂಪಸ್ ಪ್ರತಿಭೋತ್ಸವ
![ಎಸ್ಸೆಸ್ಸೆಫ್: ಜಿಲ್ಲಾ ಮಟ್ಟದ ಕ್ಯಾಂಪಸ್ ಪ್ರತಿಭೋತ್ಸವ ಎಸ್ಸೆಸ್ಸೆಫ್: ಜಿಲ್ಲಾ ಮಟ್ಟದ ಕ್ಯಾಂಪಸ್ ಪ್ರತಿಭೋತ್ಸವ](https://www.varthabharati.in/sites/default/files/images/articles/2016/10/22/IMG_20161009_174239.jpg)
ಉಡುಪಿ, ಅ.22: ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಉಡುಪಿ ಜಿಲ್ಲಾ ಮಟ್ಟದ ಕ್ಯಾಂಪಸ್ ವಿದ್ಯಾರ್ಥಿಗಳ ಪ್ರತಿಭೋತ್ಸವವು ಇತ್ತೀಚೆಗೆ ಅಜ್ಜರ ಕಾಡು-ಬಹ್ಮಗಿರಿ ಲಯನ್ಸ್ ಭವನದಲ್ಲಿ ನಡೆಯಿತು.
ಪ್ರತಿಭೋತ್ಸವ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಹಂಝತ್ ಉಡುಪಿ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ.ಎಂ. ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು ಪ್ರತಿಭೋತ್ಸವ ಉದ್ಘಾಟಿಸಿದರು.
ಜಿಲ್ಲಾ ಕಾರ್ಯದರ್ಶಿ ಅಬ್ದುರ್ರವೂಫ್ ಖಾನ್ ಸ್ವಾಗತಿಸಿದರು. ಟಿಸಿಬಿಎ ಕೋಶಾಧಿಕಾರಿ ಎಂ.ಕೆ. ಅಬ್ದುರ್ರಶೀದ್ ಸಖಾಫಿ ಮಜೂರು, ಅಸ್ಸುಫ್ಫ ತರಬೇತುದಾರ ನಝೀರ್ ಅಹ್ಸನಿ ಉಚ್ಚಿಲ ಮಾತನಾಡಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷ ಪಿ.ಎಂ.ಎ. ಅಶ್ರಫ್ ರಝಾ ಅಮ್ಜದಿ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಮೌಲಾನ ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಕಲ್ಲಟ್ಟ ಸಮಾರೋಪ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಪ್ರೊ. ಮೇಟಿ ಮುದಿಯಪ್ಪ, ಲಯನ್ ರಂಜನ್ ಎಂಜಿಎಫ್, ಜಿ.ಎಂ. ಸಿರಾಜುದ್ದೀನ್ ಸಖಾಫಿ, ಹಾಜಿ ಅಬ್ದುರ್ರಹ್ಮಾನ್ ಪ್ರಿಂಟೆಕ್, ನ್ಯಾಯವಾದಿ ಇಲ್ಯಾಸ್ ನಾವುಂದ, ಅಬೂಬಕರ್ ಆತ್ರಾಡಿ (ವೆನಿಲ್ಲಾ), ಮುಹಿಯುದ್ದೀನ್ ಹಾಜಿ ಗುಡ್ವಿಲ್, ಅಬ್ದುರ್ರಹ್ಮಾನ್ ಮೊಗರ್ಪಣೆ, ಅಬ್ದುರ್ರಝಾಕ್ ಮದನಿ ನಿಟ್ಟೆ, ಇಬ್ರಾಹೀಂ ಮಾಣಿಕೊಳಲು ಉಪಸ್ಥಿತರಿದ್ಧರು. ಕ್ಯಾಂಪಸ್ ಪ್ರತಿಭೋತ್ಸವ ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ನಡೆದ 25 ವಿವಿಧ ಸ್ಪರ್ಧೆಗಳಲ್ಲಿ ಕಾಪು ಡಿವಿಜನ್ ಚಾಂಪಿಯನ್ ಹಾಗೂ ಉಡುಪಿ ಡಿವಿಜನ್ ರನ್ನರ್ ಆಪ್ ಪಡೆದುಕೊಂಡಿತು. ವೈಯಕ್ತಿಕ ಜೂನಿಯರ್ ವಿಭಾಗದಲ್ಲಿ ಇರ್ಶಾದ್ ಮೂಳೂರು, ಸೈಂಟ್ ಮೇರಿಸ್ ಕಾಲೇಜು ಶಿರ್ವ, ಸೀನಿಯರ್ ವಿಭಾಗದಲ್ಲಿ ಅನೀಸ್ ತೈಬಾ ಗಾರ್ಡನ್ ಬಂಗ್ಲೆಗುಡ್ಡೆ ಚಾಂಪಿಯನ್ ತನ್ನದಾಗಿಸಿದರು. ಕ್ಯಾಂಪಸ್ ಕಾರ್ಯದರ್ಶಿ ಸರ್ಫರಾಝ್ ಮೂಳೂರು ಸ್ವಾಗತಿಸಿದರು. ಪ್ರತಿಭೋತ್ಸವ ಸಮಿತಿಯ ಸಂಚಾಲಕ ಎಂ.ಕೆ. ಇಬ್ರಾಹೀಂ ಮಜೂರು ಕಾರ್ಯಕ್ರಮ ನಿರೂಪಿಸಿದರು.