Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ದಿನಕ್ಕೊಂದು ಏಕೆ, ಎರಡು ಮೊಟ್ಟೆ ತಿನ್ನಲು...

ದಿನಕ್ಕೊಂದು ಏಕೆ, ಎರಡು ಮೊಟ್ಟೆ ತಿನ್ನಲು ಇಲ್ಲಿವೆ 6 ಕಾರಣಗಳು

ವಾರ್ತಾಭಾರತಿವಾರ್ತಾಭಾರತಿ23 Oct 2016 11:30 PM IST
share
ದಿನಕ್ಕೊಂದು ಏಕೆ, ಎರಡು ಮೊಟ್ಟೆ ತಿನ್ನಲು ಇಲ್ಲಿವೆ 6 ಕಾರಣಗಳು

ಬಹಳಷ್ಟು ಮಂದಿಗೆ ಮೊಟ್ಟೆಗಳು ಕುತೂಹಲಕರ ಮತ್ತು ಹಿತಕರವಾಗಿರುವ ಸಸ್ಯಾಹಾರಿ ಮತ್ತು ಮಾಂಸಾಹಾರದ ನಡುವಿನ ಪದಾರ್ಥವಾಗಿದೆ. ಸೂಕ್ತ ಪ್ರೊಟೀನ್ ಪಡೆಯುವ ಬಗ್ಗೆ ಯೋಚಿಸುವವರು ಸಸ್ಯಾಹಾರಿಗಳಾಗಿದ್ದರೂ ಇದನ್ನು ಸೇವಿಸುತ್ತಾರೆ. ಮೊಟ್ಟೆಯಲ್ಲಿ ಪೌಷ್ಠಿಕಾಂಶಗಳು, ಲವಣಗಳು ಮತ್ತು ವಿಟಮಿನ್‌ಗಳು ಭರಪೂರ ತುಂಬಿಕೊಂಡಿರುವ ಕಾರಣ ವೈದ್ಯರು ಮತ್ತು ಆಹಾರ ತಜ್ಞರು ಇದರ ಸೇವನೆಗೆ ಹೆಚ್ಚು ಸಲಹೆ ನೀಡುತ್ತಾರೆ. ಕನಿಷ್ಠ ದಿನಕ್ಕೆ ಎರಡು ಮೊಟ್ಟೆ ತಿನ್ನಬೇಕು ಎನ್ನುತ್ತಾರೆ.

ಸುಲಭವಾಗಿ ಸಿಗುವ ಮತ್ತು ಸುಲಭವಾಗಿ ಬೇಯಿಸಬಹುದಾದ ಪ್ರೊಟೀನ್ ಶ್ರೀಮಂತ ಆಹಾರವಿದು. ವಾರಕ್ಕೆ ಆರರಿಂದ ಎಂಟು ಮೊಟ್ಟೆ ಸೇವಿಸಬೇಕು ಎನ್ನುತ್ತಾರೆ ಆಕ್ಟಿವ್ ಆರ್ತೋದ ಹಿರಿಯ ಆಹಾರ ತಜ್ಞೆ ತರನ್ಜೀತ್ ಕೌರ್. "ಮೊಟ್ಟೆ ತಿನ್ನುವಾಗ ಯೋಕ್ ಬಿಡಬಾರದು. ಅದರಲ್ಲೇ ಪೌಷ್ಠಿಕಾಂಶ ಹೆಚ್ಚಾಗಿರುತ್ತದೆ. ಮೊಟ್ಟೆಯನ್ನು ತಲೆ ಮತ್ತು ಕೂದಲಿಗೆ ಹಾಕುವುದು ಉತ್ತಮ. ಅದರ ಬಿಳಿ ರಸ ಚರ್ಮದ ಸುಕ್ಕುಗಳನ್ನು ನಿವಾರಿಸುತ್ತದೆ" ಎನ್ನುತ್ತಾರೆ ಕೌರ್. ವಿಶ್ವ ಮೊಟ್ಟೆ ದಿನವನ್ನು ಪ್ರತೀ ವರ್ಷ ಅಕ್ಟೋಬರ್‌ನ ಎರಡನೇ ಶುಕ್ರವಾರ ಆಚರಿಸಲಾಗುತ್ತದೆ. ಈ ವರ್ಷ ಅಕ್ಟೋಬರ್ 14ರಂದು ಮೊಟ್ಟೆ ದಿನ ಆಚರಿಸಲಾಗಿದೆ. ಮೊಟ್ಟೆ ತಿನ್ನಲು ಆರು ಉತ್ತಮ ಕಾರಣಗಳನ್ನು ನಾವು ಇಲ್ಲಿ ನಿಮಗೆ ಕೊಟ್ಟಿದ್ದೇವೆ.

1. ಮೊಟ್ಟೆಗಳು ಅತಿಯಾಗಿ ಪೌಷ್ಠಿಕಾಂಶ ಹೊಂದಿವೆ

 

ಪ್ರೊಟೀನ್, ವಿಟಮಿನ್ (ವಿಟಮಿನ್ ಎ,ಬಿ, ಬಿ5, ಬಿ12, ಡಿ) ಮತ್ತು ಲವಣಗಳು (ಪೊಟಾಶಿಯಂ, ಜಿಂಕ್, ಕ್ಯಾಲ್ಸಿಯಂ ಮತ್ತು ಸೆಲೆನಿಯಂ) ಇತ್ಯಾದಿಯನ್ನು ಹೊಂದಿವೆ. ಅವುಗಳು ದೇಹ ಮತ್ತು ಚಯಾಪಚಯಕ್ಕೆ ಉತ್ತಮ.

2. ಮೊಟ್ಟೆಗಳಲ್ಲಿ ಎಚ್‌ಡಿಎಲ್ ಕೊಲೆಸ್ಟರಾಲ್ ಅಂದರೆ ಉತ್ತಮ ಕೊಬ್ಬು ಹೆಚ್ಚಾಗಿದೆ 

ನಮ್ಮ ದೇಹದಲ್ಲಿ ಉತ್ತಮ ಮತ್ತು ಕೆಟ್ಟ ಕೊಬ್ಬುಗಳು ಅಥವಾ ಎಚ್‌ಡಿಎಲ್ ಮತ್ತು ಎಲ್‌ಡಿಎಲ್‌ಗಳಿರುತ್ತವೆ. ಮೊಟ್ಟೆಗಳು ಉತ್ತಮ ಕೊಬ್ಬನ್ನು ವೃದ್ಧಿಸುತ್ತವೆ. ಹೆಚ್ಚುವರಿಯಾಗಿ ಹೃದಯ ರೋಗದ ಸಾಧ್ಯತೆಯನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ.

3. ಕೊಲೈನ್ ಇರುವ ಕಾರಣ ಮೊಟ್ಟೆಗಳು ಮೆದುಳಿನ ಬೆಳವಣಿಗೆಗೆ ಉತ್ತಮ

ಕೊಲೈನ್ ಮೆದುಳಿನ ಅಭಿವೃದ್ಧಿ ಮತ್ತು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಕಾರಿ. ಒಂದು ಮೊಟ್ಟೆಯಲ್ಲಿ 100 ಗ್ರಾಂಗೂ ಅಧಿಕ ಕೊಲೈನ್ ಇರುತ್ತದೆ. ಇದು ಮೆದುಳನ್ನು ತೀಕ್ಷ್ಣಗೊಳಿಸಲು ನೆರವಾಗುತ್ತದೆ. ಅದೇ ಕಾರಣಕ್ಕೆ ಮಕ್ಕಳಿಗೆ ಬೆಳಗಿನ ಉಪಹಾರಕ್ಕೆ ಮೊಟ್ಟೆ ಕೊಡಬೇಕು ಎನ್ನುವುದು.

4. ಮೊಟ್ಟೆಗಳು ಆಂಟಿ ಆಕ್ಸಿಡಂಟ್ ಹೊಂದಿರುತ್ತವೆ

ಲ್ಯುಟಿನ್ ಮತ್ತು ಖೀಕ್ಸಾಂತಿನ್ ಹೆಚ್ಚಾಗಿರುವ ಕಾರಣ ಕಣ್ಣಿಗೆ ಉತ್ತಮ. ಸೋಂಕು ರೋಗಕ್ಕೆ ಇದು ತಡೆಯೊಡ್ಡುತ್ತದೆ. ವಯಸ್ಸು ಆಧಾರಿತ ರೋಗಗಳನ್ನು ಕಡಿಮೆ ಮಾಡುತ್ತದೆ. ಯೋಕ್‌ನಲ್ಲಿ ವಿಟಮಿನ್ ಎ ಹೆಚ್ಚಾಗಿರುವ ಕಾರಣ ಕುರುಡುತನ ರೋಗದ ಸಾಧ್ಯತೆ ಕಡಿಮೆ ಮಾಡುತ್ತದೆ.

5. ಮೊಟ್ಟೆಯಿಂದ ಬೇಗನೇ ಹೊಟ್ಟೆ ತುಂಬುವ ಕಾರಣ ಹೆಚ್ಚುವರಿ ಆಹಾರ ಸೇವನೆಯ ಅಗತ್ಯ ಕಾಣುವುದಿಲ್ಲ

ಉಪಾಹಾರಕ್ಕೆ ಇದು ಉತ್ತಮ. ಉಪಾಹಾರಕ್ಕೆ ಮೊಟ್ಟೆ ಸೇವಿಸಿದರೆ ಮತ್ತೆ ಆಹಾರ ಸೇವಿಸುವ ಅನಿವಾರ್ಯತೆ ಕಾಣುವುದಿಲ್ಲ. ಮಧ್ಯಾಹ್ನದ ಊಟದವರೆಗೆ ಹೊಟ್ಟೆಗೆ ಸಂಸ್ಕರಿತ ಆಹಾರದ ಅಗತ್ಯವಿರುವುದಿಲ್ಲ.

6. ಮೊಟ್ಟೆಗಳು ಉಗುರು ಮತ್ತು ಕೂದಲಿಗೆ ಉತ್ತಮ

ಸಲ್ಫರ್ ಇರುವ ಅಮಿನೋ ಆಸಿಡ್‌ಗಳು ಹಲವು ವಿಟಮಿನ್ ಮತ್ತು ಲವಣಗಳ ಜೊತೆಗೂಡಿ ಕೂದಲು ಮತ್ತು ಉಗುರುಗಳನ್ನು ಆರೋಗ್ಯವಾಗಿಡುತ್ತದೆ. ಹೀಗಾಗಿ ಉತ್ತಮ ಕೂದಲು ಮತ್ತು ಉಗುರು ಬೇಕಿದ್ದಲ್ಲಿ ಮೊಟ್ಟೆ ಸೇವಿಸಿ.

ಕೃಪೆ: http://indianexpress.com/

share
ವಾರ್ತಾಭಾರತಿ
ವಾರ್ತಾಭಾರತಿ
Next Story
X