ಬಸ್-ಜೀಪ್ ಢಿಕ್ಕಿ: ವಿದ್ಯಾರ್ಥಿಗೆ ಗಾಯ
ಉಪ್ಪಿನಂಗಡಿ, ಅ.25: ಕೆಎಸ್ಸಾರ್ಟಿಸಿ ಬಸ್ ಹಾಗೂ ಜೀಪ್ ಮಧ್ಯೆ ಢಿಕ್ಕಿ ಸಂಭವಿಸಿ ವಿದ್ಯಾರ್ಥಿಯೊಬ್ಬನ ಕೈ ಮುರಿದ ಘಟನೆ ಉಪ್ಪಿನಂಗಡಿ ಬಳಿಯ ಪಂಜಳ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.
ಮೂಲತಃ ಬಿಳಿನೆಲೆ ನಿವಾಸಿ ಅಜಿತ್ ಜೋಸೆಫ್ ಗಾಯಗೊಂಡ ವಿದ್ಯಾರ್ಥಿ. ನೆಲ್ಯಾಡಿಯ ಸಂಬಂಧಿಕರ ಮನೆ ಯಲ್ಲಿದ್ದುಕೊಂಡು ಪುತ್ತೂರಿನ ಖಾಸಗಿ ಕಾಲೇಜಿಗೆ ಹೋಗುತ್ತಿರುವ ಅವರು ಮಂಗಳವಾರ ಸಂಜೆ ಉಪ್ಪಿನಂಗಡಿಯಲ್ಲಿ ಬೆಂಗಳೂರು ತೆರಳುವ ಬಸ್ಸಿಗೆ ಹತ್ತಿದ್ದಾರೆ. ಬಸ್ ಪಂಜಳ ಬಳಿ ಓವರ್ಟೇಕ್ ಮಾಡುವ ಭರದಲ್ಲಿ ನೆಲ್ಯಾಡಿ ಕಡೆಯಿಂದ ಬರುತ್ತಿದ್ದ ಜೀಪಿಗೆ ಢಿಕ್ಕಿ ಹೊಡೆದಿದೆ. ಈ ಸಂದರ್ಭ ಒಮ್ಮೆಲೆ ಬಸ್ ನಿಂತಾಗ ಅವರಿಗೆ ಬಸ್ನ ರಾಡ್ ಗುದ್ದಿ ಕೈಮುರಿತಕ್ಕೊಳಗಾಗಿದೆ. ಗಾಯಾಳುವನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪುತ್ತೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story