ವಿಎಸ್ ಅಚ್ಯುತಾನಂದನ್ರನ್ನು ಭೇಟಿಯಾದ ಸರಿತಾ ಎಸ್.ನಾಯರ್
ತಿರುವನಂತಪುರಂ,ಅ. 26: ಸೋಲಾರ್ ಪ್ರಕರಣಕ್ಕೆ ಸಂಬಂಧಿಸಿ ತಾನು ನೀಡಿದ ದೂರಿನಲ್ಲಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ಸರಿತಾ ಎಸ್.ನಾಯರ್ ವಿ.ಎಸ್. ಅಚ್ಯುತಾನಂದನ್ರನ್ನು ಭೇಟಿಯಾಗಿದ್ದಾರೆಂದು ವರದಿಯಾಗಿದೆ. ಮಾಜಿಮುಖ್ಯಮಂತ್ರಿ ಉಮ್ಮನ್ ಚಾಂಡಿ ಸಹಿತ ಇತರರು ಶಾರೀರಿಕ ಮತ್ತು ಮಾನಸಿಕವಾಗಿ ತನಗೆ ಕಿರುಕುಳ ನೀಡಿದ್ದಾರೆ ಎಂದು ತಾನು ನೀಡಿರುವ ದೂರಿನಲ್ಲಿ ನ್ಯಾಯ ಒದಗಿಸಿಕೊಡಬೇಕು ಎಂದು ಸರಿತಾ ವಿಎಸ್ರನ್ನು ಅವರ ಅಧಿಕೃತ ವಸತಿಯಲ್ಲಿ ಭೇಟಿಯಾಗಿ ವಿನಂತಿಸಿದ್ದಾರೆ. ತಾನು ಎತ್ತಿರುವ ಆರೋಪಗಳು ಸರಿಯಾಗಿವೆ ಎಂದು ಬೆಂಗಳೂರು ಕೋರ್ಟು ತೀರ್ಪಿನಿಂದ ಸ್ಪಷ್ಟವಾಗುತ್ತಿದೆ. ಸತ್ಯವನ್ನು ಅಡಗಿಸಿಡಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಿಲ್ಲ. ಎಲ್ಲ ಸಾಕ್ಷ್ಯಗಳಿಗೂ ದೇವರ ಕೃಪೆ ಇದೆ ಎಂದು ಸರಿತಾ ಮಾಧ್ಯದವರೊಂದಿಗೆ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
Next Story