ಗಾಂಧಿನಗರದಲ್ಲಿ ಎಸ್ಇಡಿಸಿ ಸ್ಫಟಿಕ ಸಂಭ್ರಮದ ರೇಂಜ್ ಕಾನ್ಫರೆನ್ಸ್
ಸುಳ್ಯ, ಅ.30: ಸುಳ್ಯ ಗಾಂಧಿನಗರ ಎಸ್ಜೆಎಂ ಸುಳ್ಯ ರೇಂಜ್ ವತಿಯಿಂದ ಎಸ್ಇಡಿಸಿ ಸ್ಫಟಿಕ ಸಂಭ್ರಮದ ಪ್ರಯುಕ್ತ ರೇಂಜ್ ಕಾನ್ಫರೆನ್ಸ್ ಗಾಂಧಿನಗರ ಮದ್ರಸ ಮೈದಾನದ ನೂರುಲ್ ಉಲಾಮ ವೇದಿಕೆಯಲ್ಲಿ ನಡೆಯಿತು.
ಸುಳ್ಯ ತಾಲೂಕು ಎಸ್ಜಿಎಂ ರೇಂಜ್ನ ಅಧ್ಯಕ್ಷ ಇಬ್ರಾಹೀಂ ಸಖಾಫಿ ಪುಂಡೂರು ಅಧ್ಯಕ್ಷತೆ ವಹಿಸಿದ್ದರು. ನ.12ರಂದು ಮಂಗಳೂರಿನಲ್ಲಿ ನಡೆಯುವ ಎಸ್ಇಡಿಸಿ ಸ್ಫಟಿಕ ಸಂಭ್ರಮದ ಸಮಾರೋಪ ಮಹಾ ಸಮ್ಮೇಳನದ ಪ್ರಚಾರಾರ್ಥ ಈ ಕಾರ್ಯಕ್ರಮ ನಡೆಸಲಾಯಿತು. ಗಾಂಧಿನಗರ ಮಸೀದಿ ಅಧ್ಯಕ್ಷ ಹಾಜಿ ಎಸ್. ಅಬ್ದುಲ್ಲ ಮಲ್ನಾಡು ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ಇಡಿಸಿ ಟ್ರೈನರ್ ಮತ್ತಲಿಬ್ ಸಖಾಫಿಯವರ ನೇತೃತ್ವದಲ್ಲಿ ಮುಅಲ್ಲಿಂ ಸಂಗಮ ನಡೆಯಿತು.
ಕೇರಳದ ಕಾಸರಗೋಡು ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಸುಲೈಮಾನ್ ಮಾಸ್ಟರ್ರ ನೇತೃತ್ವದಲ್ಲಿ ಉಮರಾ ಸಮಾವೇಶ ನಡೆಯಿತು. ಮೊಗರ್ಪಣೆ ಮಸೀದಿ ಮುದರ್ರಿಸ್ ಅಬ್ದುರ್ರವೂಫ್ ಸಖಾಫಿ ದುಆ ನೇತೃತ್ವದಲ್ಲಿ ದರ್ಗಾ ಝಿಯಾರತ್ ನಂತರ ಗಾಂಧಿನಗರ ಮದರಸ ವಠಾರದವರೆಗೆ ಸುಳ್ಯ ತಾಲೂಕು ಎಸ್ಬಿಎಸ್ ವಿದ್ಯಾರ್ಥಿ ಸಂಘಟನೆ ವತಿಯಿಂದ ಬೃಹತ್ ಜಾಥಾ ನಡೆಯಿತು.
ಸಂಜೆ ಸಮಾರೋಪ ಸಮಾರಂಭದಲ್ಲಿ ಕುಂಞಿಕೋಯ ತಂಙಳ್ ಸಅದಿ ದುಆ ನೆರವೇರಿಸಿದರು. ಕಾರ್ಯಕ್ರಮವನ್ನು ರವೂಫ್ ಸಖಾಫಿ ಉದ್ಘಾಟಿಸಿದರು. ಉಮ್ಮರ್ ಸಖಾಫಿ ಕಾಜೂರು, ಉಮ್ಮರ್ ಮುಸ್ಲಿಯಾರ್ ಮರ್ಧಾಳ, ಅಬೂಬಕರ್ ಪೈಝಿ ಕಂಬಡಾಜೆ, ಸಯ್ಯದ್ ಖಾಸಿಂ ತಂಙಳ್, ಸಯ್ಯದ್ ಜೈನುಲ್ ಅಬಿದೀನ್ ತಂಙಳ್ ಜಯನಗರ, ಹುಸೈನ್ ತಂಙಳ್ ಆದೂರು, ಎ.ಬಿ.ಅಶ್ರಫ್ ಸಅದಿ, ಅಬ್ದುಲ್ಲತೀಪ್ ಸಖಾಫಿ, ಇಸ್ಮಾಯೀಲ್ ಸಖಾಫಿ, ಮುಹಮ್ಮದ್ ಕುಂಞಿ ಗೂನಡ್ಕ, ಹಾಜಿ ಅಬ್ಬಾಸ್ ಕಟ್ಟೆಕಾರ್ಸ್, ಅಬ್ದುರ್ರಶೀದ್ ಕಮ್ಮಾಡಿ, ಇಬ್ರಾಹೀಂ ಹಾಜಿ ಕತರ್, ಮುಹಮ್ಮದ್ ಹಾಜಿ, ಮೂಸಹಾಜಿ, ಹಾಜಿ ಅಬ್ದುಲ್ ಮಜೀದ್ ಜನತಾ, ಹಸೈನಾರ್ ಅಜ್ಮೀರಿಯ ಸ್ಟೋರ್, ಹಾಜಿ ಮುಸ್ತಫಾ ಕೆ.ಎಂ., ಹಾಜಿ ಅಬ್ದುಲ್ ಖಾದರ್ ಪಾರೆ, ಅಬ್ದುಲ್ ಹಮೀದ್ ಬೀಜಕೊಚ್ಚಿ, ಬಶೀರ್ ಗಾಂಧಿನಗರ, ಅಬ್ದುಲ್ಲತೀಫ್ ಸಖಾಫಿ ಗೂನಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನಿಝಾರ್ ಸಖಾಫಿ ಮುಡೂರು ಸ್ವಾಗತಿಸಿ, ಅಬ್ದುಲ್ ಹಮೀದ್ ಸುಣ್ಣಮೂಲೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.