ಸಂಘಪರಿವಾರದವರೇ ಉತ್ತರಿಸಿ...
ಮಾನ್ಯರೆ,
ಮಂಗಳೂರಿನ ಎಂಎಲ್ಸಿ ಐವನ್ ಡಿಸೋಜಾ ಇವರಿಗೆ ಕದ್ರಿ ದೇವಸ್ಥಾನದಲ್ಲಿ ದೀಪಾವಳಿ ಆಚರಿಸಬೇಕೆಂಬ ಇಚ್ಛೆ ಇದ್ದಲ್ಲಿ ಅವರು ಹಿಂದೂ ಧರ್ಮಕ್ಕೆ ಮತಾಂತರ ಆಗಲಿ ಎಂದು ಸಂಘ ಪರಿವಾರದವರು ಶರತ್ತು ಹಾಕಿದ ಹಿನ್ನೆಲೆಯಲ್ಲಿ ಐವನ್ ಅವರು ದೀಪಾವಳಿ ಆಚರಣೆಯನ್ನು ಬೇರೆಡೆ ಸ್ಥಳಾಂತರಿಸಿದ್ದಾರೆ. ಇನ್ನೊಂದೆಡೆ ಅಮೆರಿಕದಲ್ಲಿ ರಾಷ್ಟ್ರಪತಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಲಾರಾ ಟ್ರಂಪ್ ಈಗಾಗಲೇ ಅಲ್ಲಿಯ ಒಂದು ಹಿಂದೂ ದೇವಸ್ಥಾನದಲ್ಲಿ ದೀಪಾವಳಿ ಆಚರಿಸಿದರು. ಇವರು ಹಿಂದೂ ಧರ್ಮಕ್ಕೆ ಮತಾಂತರ ಆಗದೆಯೇ ಹಿಂದೂ ದೇವಸ್ಥಾನದಲ್ಲಿ ದೀಪಾವಳಿ ಆಚರಿಸಲು ಹೇಗೆ ಅನುಮತಿ ಕೊಡಲಾಯಿತು ಎಂದು ಅಮೆರಿಕದ ಹಿಂದೂ ಸಂಘಟನೆಗಳು ಮಂಗಳೂರಿನ ಸಂಘ ಪರಿವಾರದವರಿಗೆ ವಿವರಿಸಬೇಕಿದೆ!
Next Story





