ಭಾರತಕ್ಕೆ ನೇಪಾಳದ ರಾಯಭಾರಿಯಾಗಿ ಉಪಾಧ್ಯಾಯ ಮರುನೇಮಕ
ಕಠ್ಮಂಡು,ಅ.30: ಭಾರತಕ್ಕೆ ನೇಪಾಳದ ರಾಯಭಾರಿಯಾಗಿ ದೀಪ್ ಕುಮಾರ್ ಉಪಾಧ್ಯಾಯ ಮರು ನೇಮಕಗೊಂಡಿದ್ದಾರೆ. ಅಸಹಕಾರದ ನಡವಳಿಕೆ ಹಾಗೂ ‘ಸರಕಾರಿ ವಿರೋಧಿ’ ಚಟುವಟಿಕೆಗಳಲ್ಲಿ ನಿರತರಾಗಿದ್ದರೆಂದು ಆರೋಪಿಸಿ ಹಿಂದಿನ ಕೆ.ಪಿ.ಓಲಿ ನೇತೃತ್ವದ ಸರಕಾರವು ಅವರನ್ನು ಭಾರತದಿಂದ ಹಿಂದಕ್ಕೆ ಕರೆಸಿಕೊಂಡಿತ್ತು.
ನೇಪಾಳ ಸರಕಾರದ ಹೇಳಿಕೆಯ ಪ್ರಕಾರ ಉಪಾಧ್ಯಾಯ ಅವರಿಗೆ ಸಂಪುಟದರ್ಜೆ ಸಚಿವರ ಸ್ಥಾನಮಾನ ದೊರೆಯಲಿದೆ.
Next Story





