Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪ್ರತಿಭಟನೆಯಿಂದ ಮದ್ಯದಂಗಡಿ ಮುಚ್ಚಿದರೆ...

ಪ್ರತಿಭಟನೆಯಿಂದ ಮದ್ಯದಂಗಡಿ ಮುಚ್ಚಿದರೆ ಅಧಿಕಾರಿಗಳು ನಷ್ಟಭರಿಸಬೇಕು: ಕೇರಳ ಬೆವ್‌ಕೊ ಆದೇಶ

ವಾರ್ತಾಭಾರತಿವಾರ್ತಾಭಾರತಿ31 Oct 2016 4:26 PM IST
share
ಪ್ರತಿಭಟನೆಯಿಂದ ಮದ್ಯದಂಗಡಿ ಮುಚ್ಚಿದರೆ ಅಧಿಕಾರಿಗಳು ನಷ್ಟಭರಿಸಬೇಕು: ಕೇರಳ ಬೆವ್‌ಕೊ ಆದೇಶ

ಕೋಝಿಕ್ಕೋಡ್,ಅ. 31: ಸಾರ್ವಜನಿಕಪ್ರತಿಭಟನೆಯಿಂದ ಮದ್ಯದಂಗಡಿಗಳನ್ನು ಮುಚ್ಚಿಸಲಾಗಿದ್ದರೆ ಅದನ್ನು ಕೂಡಲೇ ತೆರೆಯದಿದ್ದರೆ ಅದರಿಂದಾಗಿ ಆಗುವ ನಷ್ಟವನ್ನು ಸಂಬಂಧಿಸಿದ ಅಧಿಕಾರಿಗಳು ಭರಿಸಬೇಕೆಂದು ಬಿವರೇಜಸ್ ಕಾರ್ಪೊರೇಶನ್(ಬೆವ್‌ಕೊ) ಹೇಳಿದೆ. ಕೋಝಿಕ್ಕೋಡ್ ಸಿವಿಲ್ ಠಾಣೆ ಸಮೀಪ ಆರಂಭಿಸಿದ್ದ ಮದ್ಯದಂಗಡಿಯನ್ನು ಜನತಾ ಹೋರಾಟದಿಂದಾಗಿ ಮೂರು ವಾರಗಳಿಂದ ಮುಚ್ಚಿಡಲಾಗಿದೆ.

ಇದರಿಂದಾಗಿ ಕಾರ್ಪೊರೇಶನ್‌ಗೆ ದಿನವಹಿ ಭಾರೀ ನಷ್ಟ ಆಗುತ್ತಿದೆ ಎಂಬುದನ್ನು ಬೆಟ್ಟು ಮಾಡಿ ಬೆವ್‌ಕೊ ಕೋಝಿಕ್ಕೋಡ್ ರೀಜನಲ್ ಮ್ಯಾನೇಜರ್ ಮತ್ತು ವೇರ್‌ಹೌಸ್ ಮ್ಯಾನೇಜರ್‌ರಿಂದ ಬೆವ್‌ಕೊ ವಿವರಣೆ ಕೇಳಿದೆ. ಕೇರಳದಾದ್ಯಂತ 270 ವಿದೇಶಿ ಮದ್ಯದಂಗಡಿಗಳನ್ನು ಬೆವರೇಜ್ ಕಾರ್ಪೊರೇಶನ್ ನಡೆಸುತ್ತಿದೆ. ಇವುಗಳಲ್ಲಿ ಪ್ರತಿದಿನ 11.28 ಲಕ್ಷರೂಪಾಯಿ ಮಾರಾಟ ನಡೆಯುತ್ತಿದೆ. 9.48ಲಕ್ಷ ರೂಪಾಯಿ ಸರಕಾರಕ್ಕೆ ಹೋಗುತ್ತದೆ. ವಾರಗಳವರೆಗೆ ಒಂದು ಮದ್ಯದಂಗಡಿ ಮುಚ್ಚುವ ಸ್ಥಿತಿಯಾದರೆ ಸರಕಾರಕ್ಕೆ ಬಹುದೊಡ್ಡ ಆರ್ಥಿಕ ನಷ್ಟ ಆಗುತ್ತದೆ ಎಂದು ಬೆವರೇಜ್ ಕಾರ್ಪೊರೇಷನ್ ಹೇಳಿದೆ.

ಮುಚ್ಚಲಾದ ಮದ್ಯಮಾರಾಟದಂಗಡಿಗಳನ್ನು ತುರ್ತಾಗಿ ತೆರೆಯಲು ಕಾರ್ಪೊರೇಶನ್ ಮ್ಯಾನೆಜಿಂಗ್ ಡೈರೆಕ್ಟರ್ ಸಂಬಂಧಿಸಿದ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಕೋರ್ಟು ಆದೇಶ, ಸಾರ್ವಜನಿಕರ ಪ್ರತಿಭಟನೆಮೂಲಕ ಮುಚ್ಚಲಾಗಿದ್ದರೆ ಗರಿಷ್ಠ ಹದಿನೈದು ದಿವಸಗಳೊಳಗೆ ಅಂಗಡಿಗಳಲ್ಲಿ ಮದ್ಯಮಾರಾಟವನ್ನು ಪುನರಾರಂಭಿಸಬೇಕು. ಕಟ್ಟಡಕ್ಕೆ ದೊಡ್ಡ ಮೊತ್ತದ ಬಾಡಿಗೆ ನೀಡಲಾಗುತ್ತಿದೆ. ಇದಕ್ಕೆ ಅಧಿಕಾರಿಗಳಿಗೆಸಾಧ್ಯವಾಗದಿದ್ದರೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕೈಗೊಳ್ಳಲಾಗುವುದು ಅಲ್ಲದೆ ನಷ್ಟ ಭರ್ತಿ ಮಾಡಬೇಕಾಗಬಹುದು ಎಂದು ಬೆವರೇಜ್‌ನ ಆದೇಶದಲ್ಲಿ ತಿಳಿಸಲಾಗಿದೆ.

ಮ್ಯಾನೇಜಿಂಗ್ ಡೈರೆಕ್ಟರ್‌ರ ಆದೇಶ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.ಕೋಝಿಕ್ಕೋಡ್ ಸಿವಿಲ್‌ಠಾಣೆ ಪಕ್ಕದಲ್ಲಿಮತ್ತು ಕಾಸರಗೋಡು ಅನಂಗೂರಿನಲ್ಲಿ ಮದ್ಯದಂಗಡಿಗಳು ವಾರಗಳಿಂದ ಮುಚ್ಚಿಡಲಾಗಿದೆ.ಇದರಿಂದಾಗುವ ನಷ್ಟವನ್ನು ಅಧಿಕಾರಿಗಳ ಮೇಲೆ ಹೇರಲು ಯತ್ನಿಸುವುದು ಸರಿಯಲ್ಲ ಎಂದು ಉದ್ಯೋಗಿಗಳು ಹೇಳುತ್ತಾರೆ. ಸಿವಿಲ್ ಸ್ಟೇಶನ್ ಪಕ್ಕದ ಜನವಾಸ ಪ್ರದೇಶದಲ್ಲಿ ಮದ್ಯಮಾರುವ ಅಂಗಡಿ ಆರಂಭಿಸಿದ್ದು ಕೋಝಿಕ್ಕೋಡ್‌ನ ಜನರು ಪ್ರತಿಭಟಿಸಲು ಕಾರಣವಾಗಿದೆ. ನಂತರ ಸಿಟಿ ಕಾಪೊರೇಶನ್ ಲೈಸನ್ಸ್ ರದ್ದುಪಡಿಸಿತು. ಈಗ ಇನ್ನೊಂದು ಸ್ಥಳದಲ್ಲಿ ಮದ್ಯದಂಗಡಿ ತೆರೆಯಲು ನಿರ್ಧರಿಸಲಾಗಿದೆ. ಜನರ ವಿರೋಧ ಇಲ್ಲದ ಸ್ಥಳಗಳಲ್ಲಿ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಮಾತ್ರವೇ ಮದ್ಯಮಾರಾಟ ಕೇಂದ್ರವನ್ನುಪ್ರಾರಂಭಿಸಬೇಕಿದೆ ಎಂದು ಬೆವರೇಜ್ ಕಾರ್ಪೊರೇಷನ್ ನೌಕರರು ಅಭಿಪ್ರಾಯಪಟ್ಟಿದ್ದಾರೆಂದುವರದಿ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X