Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 6ನೆ ವಾರ್ಷಿಕ ಭಾರತೀಯ ಭಾಷಾ ಉತ್ಸವ ಆರಂಭ

6ನೆ ವಾರ್ಷಿಕ ಭಾರತೀಯ ಭಾಷಾ ಉತ್ಸವ ಆರಂಭ

ವಾರ್ತಾಭಾರತಿವಾರ್ತಾಭಾರತಿ5 Nov 2016 7:45 PM IST
share

ಹೊಸದಿಲ್ಲಿ, ನ.5: ‘ಸಾರ್ವಜನಿಕ ಕ್ರಮವಾಗಿ ಭಾಷೆ’ ಎಂಬ ಸಿದ್ಧಾಂತದ ಮೇಲೆ ಬೆಳಕು ಚೆಲ್ಲುವ 6ನೆಯ ಭಾರತೀಯ ಭಾಷೆಗಳ ಉತ್ಸವ (ಐಎಲ್‌ಎಫ್) ‘ಸಮನ್ವಯ’ ಇಂದಿಲ್ಲಿ ಆರಂಭಗೊಂಡಿದೆ. ಖ್ಯಾತ ಗಾಂಧಿವಾದಿ ಇಳಾ ಭಟ್ ಉದ್ಘಾಟನಾ ಭಾಷಣದೊಂದಿಗೆ ಉತ್ಸವಕ್ಕೆ ಚಾಲನೆ ನೀಡಿದ್ದಾರೆ.

ಇಂಡಿಯಾ ಹೆರಿಟೇಜ್ ಸೆಂಟರ್‌ನಲ್ಲಿ ಮೂರು ದಿನಗಳ ಕಾಲ ನಡೆಯುವ ಈ ವಾರ್ಷಿಕ ಕಾರ್ಯಕ್ರಮವು ‘ಸಂಭಾಷಣೆಯ ಮಾಧ್ಯಮ ನೆಲೆಯನ್ನು ಸೃಷ್ಟಿಸಲು ಬಯಸಿದೆ’ ಹಾಗೂ ಉರ್ದು, ತೆಲುಗು, ಗುಜರಾತಿ, ಸಂತಾಲಿ ಹಾಗೂ ಖಾಸಿಗಳಂತಹ ವಿವಿಧ ಭಾಷೆಗಳ ಮೇಲೆ ಬೆಳಕು ಚೆಲ್ಲಲಿದೆ.

ಐಎಲ್‌ಎಫ್ ಸಮನ್ವಯವು, ಮಾತು ಹಾಗೂ ಅಕ್ಷರಗಳಿಂದಾಚೆಗೆ ಭಾಷೆಗಳ ಶೋಧನೆಯನ್ನು ಚಿತ್ರಿಸುತ್ತದೆ. ಅದು ಸೃಜನಶೀಲತೆಗಳ ರೋಮಾಂಚಕಾರಿ ಛೇದನವಾಗಿರುವ ಸಂಭಾಷಣೆಯ ಮಧ್ಯಮ ನೆಲೆಯೊಂದನ್ನು ಸೃಷ್ಟಿಸಬಯಸಿದೆ.

‘‘ಹೌದು! ಈ ಉತ್ಸವವು ಭಾಷೆಗಳ ಪ್ರಜಾಪ್ರಭುತ್ವಕ್ಕೆ ಒಂದು ಕರೆಯಾಗಿದೆ. ಆದರೆ, ಅದಕ್ಕೂ ಹೆಚ್ಚಾಗಿ ಅದು, ಕಲಾವಿದ ಹಾಗೂ ವಿಜ್ಞಾನಿಯಲ್ಲಿ ಹರಿಯುತ್ತಿರುವ ಸೃಜನಶೀಲತೆಯೆಂಬ ಒಂದೇ ನದಿಯ ನೆನಪಿಸುವಿಕೆಯೂ ಆಗಿದೆಯೆಂದು ಉತ್ಸವದ ಸೃಜನಶೀಲ ನಿರ್ದೇಶಕ ರಿಝಿಯೊ ಯೋಹಾನನ್ ರಾಜ್ ಹೇಳಿದ್ದಾರೆ.

40ಕ್ಕೂ ಹೆಚ್ಚು ಕಲಾವಿದರು, ಚಿಂತಕರು ಹಾಗೂ ನಟರು ಭಾಗವಹಿಸುತ್ತಿರುವ ಈ ಉತ್ಸವದಲ್ಲಿ ಭಾಷೆಯ ವಿವಿಧ ವಸ್ತುಗಳು ಹಾಗೂ ಭಾಗಗಳ ಕುರಿತು ಚರ್ಚೆಗಳು ನಡೆಯಲಿವೆ.

ಭಾಷೆಗಳ ಕುರಿತು ಉಪನ್ಯಾಸಗಳು ಅವಶ್ಯವಾಗಿವೆ ಹಾಗೂ ನಡೆಯಲೇಬೇಕಾಗಿದೆ. ಇಲ್ಲದಿದ್ದಲ್ಲಿ ‘ಮಾತೃಭಾಷೆ’ ಎಂಬ ಪದವು ಶೀಘ್ರವೇ ‘ಅಜ್ಜಿ ಭಾಷೆ’ ಎಂದು ಬದಲಾಗಬಹುದು. ಈ ಇಂಗ್ಲಿಷನ್ನು ವಟಗುಟ್ಟುವ ಮಧ್ಯಮ ವರ್ಗವು ತಮ್ಮ ಮಾತೃಭಾಷೆಯನ್ನು ಹೆಚ್ಚು ಬಳಸುವುದಿಲ್ಲ. ಈಗ, ಅತ್ಯಲ್ಪ ಸಂಖ್ಯೆಯ ತಾಯಂದಿರು ಅವರ ಭಾಷೆಯನ್ನು ಉಪಯೋಗಿಸುತ್ತಿರುವುದನ್ನು ಕಾಣುವಾಗ ತನಗೆ ಚಿಂತೆಯಾಗುತ್ತದೆ.

ಅಮೆರಿಕನ್ ಕನಸು ಕಾಣುವುದರಲ್ಲಿ ಮಗ್ನರಾಗಿರುವ ಅವರು, ಈ ಬಗ್ಗೆ ಚಿಂತಿಸುವುದೇ ಇಲ್ಲ. ಈ ಉತ್ಸವವು ಭಾಷೆಯೊಂದಿಗೆ ಬರುವ ಶಕ್ತಿ, ಅಧಿಕಾರ ಹಾಗೂ ಸೃಜನಶೀಲತೆಗಳನ್ನು ಜನರಿಗೆ ಜ್ಞಾಪಿಸುವುದರಿಂದ ಮಹತ್ವದ್ದಾಗಿದೆಯೆಂದು ಆರಂಭದಿಂದಲೇ ಉತ್ಸವವನ್ನು ಬೆಂಬಲಿಸುತ್ತಿರುವ, ರಝಾ ಫೌಂಡೇಶನ್‌ನ ಅಶೋಕ್ ವಾಜಪೇಯಿ ಹೇಳಿದ್ದಾರೆ.

ಎಲ್ಲರಿಗೂ ಮುಕ್ತವಾಗಿರುವ ಈ ಉತ್ಸವ ನ.7ರಂದು ಸಮಾರೋಪಗೊಳ್ಳಲಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X