Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. "ಸರಿಯಾಗಿ ಈಜಲು ಗೊತ್ತಿಲ್ಲ, ಎಲ್ಲ ದೇವರ...

"ಸರಿಯಾಗಿ ಈಜಲು ಗೊತ್ತಿಲ್ಲ, ಎಲ್ಲ ದೇವರ ಕೈಯಲ್ಲಿದೆ" ಎಂದೇ ಹಾರಿದ್ದರು ಇಬ್ಬರು ನಟರು !

ನಿರ್ಲಕ್ಷ್ಯದಿಂದಲೇ ಬಲಿಯಾಯಿತು ಎರಡು ಜೀವಗಳು

ವಾರ್ತಾಭಾರತಿವಾರ್ತಾಭಾರತಿ7 Nov 2016 8:18 PM IST
share
ಸರಿಯಾಗಿ ಈಜಲು ಗೊತ್ತಿಲ್ಲ, ಎಲ್ಲ ದೇವರ ಕೈಯಲ್ಲಿದೆ ಎಂದೇ ಹಾರಿದ್ದರು ಇಬ್ಬರು ನಟರು !

ಬೆಂಗಳೂರು, ನ.7 : ಮಾಸ್ತಿ ಗುಡಿ ಚಿತ್ರದ ಕ್ಲೈಮ್ಯಾಕ್ಸ್ ನ ಸ್ಟಂಟ್ ಚಿತ್ರೀಕರಣದ ವೇಳೆ ನೀರು ಪಾಲಾಗಿರುವ ನಟರಾದ ಉದಯ್ ಹಾಗು ಅನಿಲ್ ದುರಂತ ನಡೆಯುವ  ಕೆಲವೇ ಕ್ಷಣಗಳ ಮೊದಲು ನಮಗೆ ಸರಿಯಾಗಿ ಈಜಲು ಬರುವುದಿಲ್ಲ ಎಂದು ಸಂದರ್ಶನದಲ್ಲಿ ಹೇಳಿದ್ದರು! . 

ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ " ನನಗೆ ಈಜಲು ಗೊತ್ತಿದೆ. ಆದರೆ ಇಷ್ಟು ಎತ್ತರದಿಂದ ಇದೇ ಮೊದಲ ಬಾರಿ ಹಾರುತ್ತಿದ್ದೇನೆ. ಹಾಗಾಗಿ ನರ್ವಸ್ ಆಗಿದ್ದೇನೆ. ಏನಾಗುತ್ತೆ ಗೊತ್ತಿಲ್ಲ. ನನಗೆ ಸ್ವಲ್ಪ ಮಾತ್ರ ಈಜಲು ಗೊತ್ತು. ಎರಡು ಮೂರು ಸ್ಟ್ರೋಕ್ ಗಳಲ್ಲಿ ದಡ ಸೇರುವಂತ ಬಾವಿಯಲ್ಲಿ ಮಾತ್ರ ಈವರೆಗೆ ಈಜಿದ್ದೇನೆ. ಅಷ್ಟೇ ಈಜು ನನಗೆ ಗೊತ್ತಿರುವುದು.  30 / 60 ಅಡಿ ದೂರ ಈಜಿ ನನಗೆ ಅಭ್ಯಾಸವಿಲ್ಲ " ಎಂದು ಅನಿಲ್ ಹೇಳಿದ್ದರು. 

ಉದಯ್ ಮಾತನಾಡಿ " ಈ ದೃಶ್ಯಕ್ಕಾಗಿ ಯಾವುದೇ ನಿರ್ದಿಷ್ಟ ಪ್ರಾಕ್ಟೀಸ್ ಮಾಡಿಲ್ಲ. ನಾನು ಈಗ ಬಂದಿದ್ದೇನೆ. ಇಲ್ಲಿ ಪರಿಣಿತರು ಇದ್ದಾರೆ. ವಿಜಯ್ ಇದ್ದಾರೆ. ನಾವು ಮೂವರು ನೀರಿಗೆ ಹಾರುತ್ತೇವೆ. ನನಗೆ ಅಷ್ಟೇ ಗೊತ್ತು. ಉಳಿದದ್ದು ದೇವರಿಗೆ ಬಿಟ್ಟಿದ್ದು " ಎಂದು ಹೇಳಿದ್ದರು.  ಜೊತೆಗೆ ನನಗೆ " ಎತ್ತರದ ಭಯ ಇದೆ. ಒಂದನೇ ಮಹಡಿಯಿಂದ ಕೆಳಗೆ ನೋಡಿದರೇ ನನಗೆ ಭಯವಾಗುತ್ತೆ. ದೇವರ ದಯೆಯಿಂದ ಎಲ್ಲ ಸರಿಯಾಗಬಹುದು " ಎಂದೂ ಅವರು ಹೇಳಿದ್ದರು. 

ದುನಿಯಾ ವಿಜಯ್, ಉದಯ್ ಮತ್ತು ಅನಿಲ್  - ಹೆಲಿಕಾಪ್ಟರ್ ನಿಂದ 100 ಅಡಿ ಎತ್ತರದಿಂದ ನೀರಿಗೆ ಹಾರುವ ಕ್ಲೈಮ್ಯಾಕ್ಸ್ ದೃಶ್ಯ ಚಿತ್ರೀಕರಿಸುವಾಗ ಈ ದುರಂತ ಸಂಭವಿಸಿದೆ. ಬೆಂಗಳೂರಿನಿಂದ 35 ಕಿಮಿ ದೂರದಲ್ಲಿ ಮಾಗಡಿ ರಸ್ತೆಯಲ್ಲಿರುವ  ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಈ ಘಟನೆ ನಡೆದಿದೆ. ಹಾರಿದ ಮೇಲೆ ವಿಜಯ್ ಮಾತ್ರ ಬದುಕುಳಿದಿದ್ದು ಉಳಿದಿಬ್ಬರು ನೀರು ಪಾಲಾಗಿದ್ದಾರೆ. ದೃಶ್ಯದ ಚಿತ್ರೀಕರಣದ ಮೊದಲು ವಿಜಯ್ ಸುರಕ್ಷತಾ ಕವಚಗಳನ್ನು ಹಾಕಿಕೊಳ್ಳುವುದನ್ನು ನೋಡಲಾಗಿದೆ. ಆದರೆ ಉದಯ್ ಹಾಗು ಅನಿಲ್ ಅಂತಹ ಯಾವುದೇ ಕವಚ ಧರಿಸಿದ್ದು ಕಂಡು ಬಂದಿಲ್ಲ. 

ದುಬಾರಿ ವೆಚ್ಚದಲ್ಲಿ ನಡೆಸಲಾಗುತ್ತಿದ್ದ ಈ ಸ್ಟಂಟ್ ನ ಚಿತ್ರೀಕರಣವನ್ನು ರೆಕಾರ್ಡ್ ಮಾಡಲು ಹಲವು ಸುದ್ದಿ ವಾಹಿನಿಗಳ ವರದಿಗಾರರು, ಕ್ಯಾಮರಾಮೆನ್ ಗಳು ಬಂದಿದ್ದರು. ಆದರೆ ಆಂಬುಲೆನ್ಸ್ ಹಾಗು ಸುರಕ್ಷತಾ ತಂಡಗಳು ಮಾತ್ರ ಇರಲಿಲ್ಲ ಎಂದು ಹೇಳಲಾಗಿದೆ. ಚಿತ್ರ ತಂಡದ ವಿರುದ್ಧ ನಿರ್ಲಕ್ಷ್ಯದ ಪ್ರಕರಣ ದಾಖಲಾಗಿದೆ. 


 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X