Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ರಣಜಿ ಟ್ರೋಫಿ: ವೇಗದ ಶತಕ ಬಾರಿಸಿದ ರಿಷಬ್...

ರಣಜಿ ಟ್ರೋಫಿ: ವೇಗದ ಶತಕ ಬಾರಿಸಿದ ರಿಷಬ್ ಪಂತ್

ಐತಿಹಾಸಿಕ ಸಾಧನೆ ಮಾಡಿದ ದಿಲ್ಲಿಯ ಯುವ ಆಟಗಾರ

ವಾರ್ತಾಭಾರತಿವಾರ್ತಾಭಾರತಿ8 Nov 2016 11:18 PM IST
share
ರಣಜಿ ಟ್ರೋಫಿ: ವೇಗದ ಶತಕ ಬಾರಿಸಿದ ರಿಷಬ್ ಪಂತ್

ತಿರುವನಂತಪುರ, ನ.8: ದಿಲ್ಲಿಯ ಯುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ ರಣಜಿ ಟ್ರೋಫಿಯಲ್ಲಿ ವೇಗದ ಶತಕವನ್ನು ಬಾರಿಸುವ ಮೂಲಕ ಇತಿಹಾಸದ ಪುಟದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಇಲ್ಲಿನ ಕೆಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಜಾರ್ಖಂಡ್ ವಿರುದ್ಧದ ರಣಜಿ ಟ್ರೋಫಿಯ ನಾಲ್ಕನೆ ದಿನದಾಟದಲ್ಲಿ ದಿಲ್ಲಿಯ ಪರ ಎರಡನೆ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಪಂತ್ ಕೇವಲ 48 ಎಸೆತಗಳಲ್ಲಿ ಶತಕ ಪೂರೈಸಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವೇಗದ ಶತಕ ಬಾರಿಸಿದರು. 19ರ ಹರೆಯದ ಪಂತ್ ಈ ಋತುವಿನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದು, ಆರು ಇನಿಂಗ್ಸ್‌ಗಳಲ್ಲಿ 799 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕಗಳಿವೆ. ಈಗಾಗಲೇ 5 ಪಂದ್ಯಗಳಲ್ಲಿ 44 ಸಿಕ್ಸರ್‌ಗಳನ್ನು ಬಾರಿಸಿ ಗಮನ ಸೆಳೆದಿದ್ದಾರೆ.

  48 ಎಸೆತಗಳಲ್ಲಿ ಶತಕ ಪೂರೈಸಿದ ಪಂತ್ ತಮಿಳುನಾಡಿನ ಮಾಜಿ ಆರಂಭಿಕ ಆಟಗಾರ ಚಂದ್ರಶೇಖರ್ ಹಾಗೂ ಒಡಿಶಾದ ನಮನ್ ಓಜಾ ದಾಖಲೆಯನ್ನು ಮುರಿದರು. 1988-89ರ ಆವೃತ್ತಿಯಲ್ಲಿ ಚಂದ್ರಶೇಖರ್ ಶೇಷ ಭಾರತದ ವಿರುದ್ಧ 56 ಎಸೆತಗಳಲ್ಲಿ ಶತಕ ಪೂರೈಸಿದ್ದರು. 2015ರಲ್ಲಿ ನಮನ್ ಓಜಾ ರಣಜಿ ಟ್ರೋಫಿಯಲ್ಲಿ 69 ಎಸೆತಗಳಲ್ಲಿ ಶತಕ ಪೂರೈಸಿದ್ದರು.

ಪಂತ್ ಜಾರ್ಖಂಡ್ ವಿರುದ್ಧದ ಮೊದಲ ಇನಿಂಗ್ಸ್‌ನಲ್ಲಿ 106 ಎಸೆತಗಳಲ್ಲಿ 117 ರನ್ ಗಳಿಸಿದ್ದರು. 82 ಎಸೆತಗಳಲ್ಲಿ ಶತಕ ಬಾರಿಸಿದ್ದ ಪಂತ್ ರಣಜಿ ಟ್ರೋಫಿಯಲ್ಲಿ 3ನೆ ವೇಗದ ಶತಕ ಬಾರಿಸಿದ್ದರು. ಪಂದ್ಯದ ಎರಡನೆ ಇನಿಂಗ್ಸ್‌ನಲ್ಲೂ ಶತಕ ಬಾರಿಸಿದ ಪಂತ್ ಜಾರ್ಖಂಡ್ ಮೇಲೆ ಸವಾರಿ ಮಾಡಿದರು. 67 ಎಸೆತಗಳನ್ನು ಎದುರಿಸಿದ್ದ ಪಂತ್ 13 ಸಿಕ್ಸರ್ ಹಾಗೂ 8 ಬೌಂಡರಿ ಬಾರಿಸಿದರು. 135 ರನ್‌ಗೆ ಆಶೀಷ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು.

 ಪಂತ್ ಕೆಲವೇ ದಿನಗಳ ಹಿಂದೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಎರಡನೆ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಭಾಜನರಾಗಿದ್ದರು. ಬಿ ಗುಂಪಿನ ಪಂದ್ಯದಲ್ಲಿ ಮಹಾರಾಷ್ಟ್ರದ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ಪಂತ್ ಈ ಐತಿಹಾಸಿಕ ಸಾಧನೆ ಮಾಡಿದ್ದರು. ಆ ಪಂದ್ಯದಲ್ಲಿ ಪಂತ್ 326 ಎಸೆತಗಳಲ್ಲಿ 308 ರನ್ ಗಳಿಸಿದ್ದರು.

ಪಂತ್ ಐತಿಹಾಸಿಕ ಸಾಧನೆ: ದಿಲ್ಲಿ-ಜಾರ್ಖಂಡ್ ಪಂದ್ಯ ಡ್ರಾ

ತಿರುವನಂತಪುರ,ನ.8: ರಿಷಬ್ ಪಂತ್ ರಣಜಿ ಚರಿತ್ರೆಯಲ್ಲಿ ಸಿಡಿಸಿದ ವೇಗದ ಶತಕದ ನೆರವಿನಿಂದ ದಿಲ್ಲಿ ತಂಡ ಜಾರ್ಖಂಡ್ ವಿರುದ್ಧದ ರಣಜಿ ಪಂದ್ಯವನ್ನು ಡ್ರಾ ಗೊಳಿಸಿದೆ.

2015ರ ಅಕ್ಟೋಬರ್‌ನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಾಲಿಟ್ಟಿರುವ ಪಂತ್ 81.87ರ ಸರಾಸರಿಯಲ್ಲಿ 96.75ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ 117 ರನ್ ಗಳಿಸಿದ್ದ ಪಂತ್ 2ನೆ ಇನಿಂಗ್ಸ್‌ನಲ್ಲೂ 135 ರನ್ ಗಳಿಸಿದರು. ಈ ಮೂಲಕ ಫಾಲೋಆನ್‌ಗೆ ಸಿಲುಕಿದ್ದ ದಿಲ್ಲಿಗೆ ಒಂದು ಅಂಕ ತಂದುಕೊಟ್ಟರು. ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿದ್ದ ಜಾರ್ಖಂಡ್ 3 ಅಂಕ ಗಳಿಸಿತು.

ಏಳು ಶೂನ್ಯ ಸುತ್ತಿದ ಛತ್ತೀಸ್‌ಗಢ: ಗೋವಾದ ಸ್ಪಿನ್ನರ್‌ಗಳಾದ ಶಹಾದಾಬ್ ಜಕಾತಿ(4-41) ಹಾಗೂ ದರ್ಶನ್(3-24) ದಾಳಿಗೆ ತತ್ತರಿಸಿದ ಛತ್ತೀಸ್‌ಗಢ 8 ವಿಕೆಟ್‌ಗಳ ಸೋಲನುಭವಿಸಿದೆ. ಎರಡನೆ ಇನಿಂಗ್ಸ್‌ನಲ್ಲಿ ಛತ್ತೀಸ್‌ಗಢದ 7 ಆಟಗಾರರು ಶೂನ್ಯ ಸುತ್ತಿದರು. ಇದು ರಣಜಿ ಇನಿಂಗ್ಸ್‌ವೊಂದರಲ್ಲಿ ದಾಖಲಾದ ಕಳಪೆ ಬ್ಯಾಟಿಂಗ್. ಒಂದು ಹಂತದಲ್ಲಿ 3 ವಿಕೆಟ್‌ಗೆ 148 ರನ್ ಗಳಿಸಿದ್ದ ಛತ್ತೀಸ್‌ಗಢ 162 ರನ್‌ಗೆ ಆಲೌಟಾಯಿತು.

ಸಾಹಿಲ್ ಗುಪ್ತಾ(82) ಸರ್ವಾಧಿಕ ರನ್ ಬಾರಿಸಿದರು.

ಮೈಸೂರಿನಲ್ಲಿ ಮುಂಬೈಗೆ ಜಯ: ರೈಲ್ವೇಸ್ ವಿರುದ್ಧ ಮೈಸೂರಿನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಮುಂಬೈ ತಂಡ ರೈಲ್ವೇಸ್‌ನ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಗೆಲ್ಲಲು 24 ರನ್ ಗುರಿ ಪಡೆದಿದ್ದ ಮುಂಬೈ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು. ಈ ಮೂಲಕ ಬೋನಸ್ ಅಂಕ ಗಳಿಸಿತು. 4 ವಿಕೆಟ್‌ಗೆ 135 ರನ್‌ನಿಂದ ಬ್ಯಾಟಿಂಗ್ ಆರಂಭಿಸಿದ ರೈಲ್ವೇಸ್ 208 ರನ್‌ಗೆ ಆಲೌಟಾಯಿತು. ಮುಂಬೈ ಪರ ತುಷಾರ್ ದೇಶಪಾಂಡೆ ಮೊದಲ ಬಾರಿ 5 ವಿಕೆಟ್ ಕಬಳಿಸಿದರು.

ರಣಜಿ ಟ್ರೋಫಿ: ಅಂತಿಮ ದಿನದ ಫಲಿತಾಂಶ

ಇಂದೋರ್: ಆಂಧ್ರ 341, ಸರ್ವಿಸಸ್ 446, 27/0

ಪಂದ್ಯ ಡ್ರಾ

ಕೋಲ್ಕತಾ: ಅಸ್ಸಾಂ 171,66/1, ಸೌರಾಷ್ಟ್ರ 153, 81

ಅಸ್ಸಾಂಗೆ 9 ವಿಕೆಟ್‌ಗಳ ಜಯ

ಕಟಕ್: ಗೋವಾ 270, 94/2, ಛತ್ತೀಸ್‌ಗಢ 198, 162

ಗೋವಾಕ್ಕೆ 8 ವಿಕೆಟ್‌ಗಳ ಗೆಲುವು

ತಿರುವನಂತಪುರ: ದಿಲ್ಲಿ 334, 480/6, ಜಾರ್ಖಂಡ್ 493

ಪಂದ್ಯ ಡ್ರಾ

  ರಾಂಚಿ: ಜಮ್ಮು-ಕಾಶ್ಮೀರ 162, 417, ಹಿಮಾಚಲ ಪ್ರದೇಶ 370, 210/5

ಹಿಮಾಚಲ ಪ್ರದೇಶಕ್ಕೆ 5 ವಿಕೆಟ್‌ಗಳ ಜಯ

ಜೈಪುರ: ಕೇರಳ 404/9 ಡಿಕ್ಲೇರ್, ಹರ್ಯಾಣ 303, 315/3

ಪಂದ್ಯ ಡ್ರಾ

ಮೈಸೂರು: ರೈಲ್ವೇಸ್ 160,208 ಮುಂಬೈ 345, 24/0

ಮುಂಬೈಗೆ 10 ವಿಕೆಟ್‌ಗಳ ಜಯ

ಹೈದರಾಬಾದ್: ಪಂಜಾಬ್ 319,112/3, ಉತ್ತರ ಪ್ರದೇಶ 335, 95

ಪಂಜಾಬ್‌ಗೆ 7 ವಿಕೆಟ್‌ಗಳ ಜಯ

ಪಟಿಯಾಲ: ಒಡಿಶಾ 172, 508/6 ಡಿಕ್ಲೇರ್, ರಾಜಸ್ಥಾನ 323

ಪಂದ್ಯ ಡ್ರಾ.

 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X