Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 500, 1000 ರೂ. ನೋಟುಗಳು ಮತ್ತೆ...

500, 1000 ರೂ. ನೋಟುಗಳು ಮತ್ತೆ ಚಲಾವಣೆಗೆ ಬರಲಿವೆಯೇ ?

ವಾರ್ತಾಭಾರತಿವಾರ್ತಾಭಾರತಿ9 Nov 2016 12:57 PM IST
share
500, 1000 ರೂ. ನೋಟುಗಳು ಮತ್ತೆ ಚಲಾವಣೆಗೆ ಬರಲಿವೆಯೇ ?


500, 1000 ರೂ. ನೋಟುಗಳು ಮತ್ತೆ ಚಲಾವಣೆಗೆ ಬರಲಿವೆಯೇ ?

ಹೊಸದಿಲ್ಲಿ, ನ.9: ಐನೂರು ಹಾಗೂ ಒಂದು ಸಾವಿರ ರೂಪಾಯಿಗಳ ನೋಟುಗಳನ್ನು ಕೇಂದ್ರ ಸರಕಾರ ಚಲಾವಣೆಯಿಂದ ಹಿಂದೆಗೆದುಕೊಳ್ಳುವುದಾಗಿ ಮಂಗಳವಾರ ಪ್ರಕಟಿಸಿರುವುದು ಬಹಳಷ್ಟು ಆಶ್ಚರ್ಯ ಹುಟ್ಟಿಸುವಂತಹದ್ದಾಗಿದ್ದರೂ, ಇಂತಹ ಒಂದು ಕ್ರಮ ಭಾರತದಲ್ಲಿ ಇದೇ ಮೊದಲಲ್ಲ. ಫೋರ್ಜರಿ ಹಾಗೂ ಕಪ್ಪುಹಣ ಚಲಾವಣೆ ತಡೆಗಟ್ಟಲು ಸರಕಾರ ಇಂತಹ ಒಂದು ಕ್ರಮವನ್ನು ಕೊನೆಯ ಅಸ್ತ್ರವಾಗಿ ಬಳಸುತ್ತದೆ. ಭಾರತದ ಇತಿಹಾಸದಲ್ಲಿ ಕನಿಷ್ಠ ಎರಡು ಬಾರಿ ಈ ಹಿಂದೆ ಇಂತಹ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ಕಪ್ಪುಹಣವನ್ನು ಗುರಿಯಾಗಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಜನವರಿ 1946ರಲ್ಲಿ ರೂ.1,000 ಹಾಗೂ ರೂ.10,000 ಕರೆನ್ಸಿ ನೋಟುಗಳನ್ನು ಹಿಂಪಡೆಯಲಾಗಿದ್ದ. 1956 ರಲ್ಲಿ ರೂ 1000, ರೂ 5000 ಹಾಗೂ ರೂ 10,000 ಮೌಲ್ಯದ ನೋಟುಗಳನ್ನು ಮತ್ತೆ ಚಲಾವಣೆಗೆ ತರಲಾಯಿತಾದರೂ ಜನವರಿ 1978ರಲ್ಲಿ ಅವುಗಳನ್ನು ಮತ್ತೆ ರದ್ದುಪಡಿಸಲಾಗಿತ್ತು. ಆಗ ಜನತಾ ಪಾರ್ಟಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿತ್ತು ಹಾಗೂ ಮೇಲೆ ತಿಳಿಸಿದ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿತ್ತು. ಈ ಪ್ರಕ್ರಿಯೆಯನ್ನ ಆರ್ ಬಿಐ ಇತಿಹಾಸ (ಮೂರನೇ ಸಂಚಿಕೆ) ಇದರಲ್ಲಿ ವಿವರಿಸಲಾಗಿದೆ.
ಜನವರಿ 14, 1978ರಲ್ಲಿ ಆರ್ ಬಿಐ ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯ ಹಿರಿಯ ಅಧಿಕಾರಿಯಾಗಿದ್ದ ಆರ್.ಜಾನಕಿ ರಾಮನ್ ಅವರಿಗೆ ದಿಲ್ಲಿಗೆ ಹೋಗಿ ಕೆಲ ಪ್ರಮುಖ ವಿಚಾರಗಳನ್ನು ಚರ್ಚಿಸಲು ಹೇಳಲಾಗಿತ್ತು. ದಿಲ್ಲಿಗೆ ತಲುಪಿದಾಗ ರಾಮನ್ ಅವರಿಗೆ ದೊಡ್ಡ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ನಿರ್ಧಾರದ ಬಗ್ಗೆ ತಿಳಿಸಲಾಗಿತ್ತು ಹಾಗೂ ಒಂದು ದಿನದೊಳಗೆ ಕರಡು ಅಧಿಸೂಚನೆಯನ್ನು ಸಿದ್ಧಪಡಿಸಲು ಹೇಳಲಾಗಿತ್ತು.
ಮುಂಬೈಯ್ಯಲ್ಲಿರುವ ರಿಸರ್ವ್ ಬ್ಯಾಂಕಿನ ಕೇಂದ್ರ ಕಚೇರಿಯೊಂದಿಗೆ ಯಾವುದೇ ರೀತಿಯ ಸಂವಹನವನ್ನು ನಡೆಸಲು ಬಿಡಲಾಗಿರಲಿಲ್ಲ. ಕರಡು ಅಧಿಸೂಚನೆ ತಯಾರುಗೊಂಡ ಬಳಿಕ ಅದನ್ನು ಆಗಿನ ರಾಷ್ಟ್ರಪತಿ ಎನ್.ಸಂಜೀವ ರೆಡ್ಡಿಯವರ ಅಂಕಿತಕ್ಕಾಗಿ ಜನವರಿ 16ರಂದು ಕಳುಹಿಸಲಾಯಿತು. ಅದೇ ದಿನ ಬೆಳಿಗ್ಗೆ 9 ಗಂಟೆಗೆ ಈ ಬಗೆಗಿನ ಸುದ್ದಿಯನ್ನು ಆಲ್ ಇಂಡಿಯಾ ರೇಡಿಯೋದಲ್ಲಿ ಘೋಷಿಸಲಾಯಿತು. ಜನವರಿ 17ರಂದು ಎಲ್ಲಾ ಬ್ಯಾಂಕುಗಳು ಹಾಗೂ ಟ್ರೆಶರಿಗಳು ಮುಚ್ಚಲಾಗುವುದೆಂದು ಹೇಳಲಾಯಿತು.
ಆದರೆ ಅಂದಿನ ಆರ್ ಬಿಐ ಗವರ್ನರ್ ಐ.ಜಿ.ಪಟೇಲ್ ಈ ಪ್ರಕ್ರಿಯೆಯ ಪರವಾಗಿರಲಿಲ್ಲ. ಆಗಿನ ವಿತ್ತ ಸಚಿವ ಎಚ್.ಎಂ.ಪಟೇಲ್ ತಮಗೆ ಈ ವಿಚಾರ ತಿಳಿಸಿದಾಗ ತಾನು ಅವರಿಗೆ ಇಂತಹ ಪ್ರಕ್ರಿಯೆಗಳು ಉತ್ತಮ ಫಲಿತಾಂಶ ನೀಡದು ಎಂದು ಮನದಟ್ಟು ಮಾಡಿದ್ದೆ ಎಂದು ಪಟೇಲ್ ತಮ್ಮ ಕೃತಿ ‘ಗ್ಲಿಂಪ್ಸಸ್ ಆಫ್ ಇಂಡಿಯನ್ ಇಕನಾಮಿಕ್ ಪಾಲಿಸಿ-ಎನ್ ಇನ್ಸೈಡರ್ಸ್ ವೀವ್’ ನಲ್ಲಿ ಬರೆದಿದ್ದಾರೆ.
ಕಪ್ಪುಹಣವಿರುವವರು ಅದನ್ನು ನಗದು ರೂಪದಲ್ಲಿ ಹೆಚ್ಚು ಕಾಲ ಇಡುವುದಿಲ್ಲವೆಂಬುದು ಪಟೇಲ್ ಅಭಿಪ್ರಾಯವಾಗಿದೆ.
ಕಪ್ಪುಹಣದ ರಾಶಿಯನ್ನು ಸೂಟ್ ಕೇಸುಗಳಲ್ಲಿ ಅಥವಾ ತಲೆದಿಂಬುಗಳಲ್ಲಿ ತುಂಬಿಸಿಡಲಾಗುತ್ತದೆ ಎಂಬ ಭಾವನೆ ಹಳೆಯದು ಎಂದು ಅವರು ಹೇಳಿದ್ದರು. ಸಣ್ಣ ಪ್ರಮಾಣದ 500 ಹಾಗೂ 1,000 ಮುಖಬೆಲೆಯ ನೋಟುಗಳನ್ನು ವಿನಿಮಯಗೊಳಿಸಲು ಅವಕಾಶ ನೀಡಿರುವುದರಿಂದ ಕಪ್ಪುಹಣ ಹೊಂದಿರುವವರು ತಮ್ಮ ಏಜಂಟರ ಮುಖಾಂತರ ತಮ್ಮ ಕಾರ್ಯ ಸಾಧಿಸಿಕೊಳ್ಳಬಹುದು ಎಂದು ಪಟೇಲ್ ಹೇಳುತ್ತಾರೆ.
ಇತಿಹಾಸ ಮರುಕಳಿಸುವುದು ಎಂಬುದು ನಿಜವಾದರೆ 500 ಹಾಗೂ 1,000 ಮುಖಬೆಲೆಯ ನೋಟುಗಳು ಮತ್ತೆ ಚಲಾವಣೆಗೆ ಬರಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X