Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಒಟ್ಟು ಎಷ್ಟು 500 ಹಾಗೂ 1000 ರೂ....

ಒಟ್ಟು ಎಷ್ಟು 500 ಹಾಗೂ 1000 ರೂ. ನೋಟುಗಳು ಚಲಾವಣೆಯಲ್ಲಿದ್ದವು ಗೊತ್ತೇ ?

ವಾರ್ತಾಭಾರತಿವಾರ್ತಾಭಾರತಿ9 Nov 2016 4:15 PM IST
share
ಒಟ್ಟು ಎಷ್ಟು 500 ಹಾಗೂ 1000 ರೂ. ನೋಟುಗಳು ಚಲಾವಣೆಯಲ್ಲಿದ್ದವು ಗೊತ್ತೇ  ?

ಹೊಸದಿಲ್ಲಿ,ನ. 9: ಸರಕಾರ 500 ಹಾಗೂ 1000 ರೂ. ನೋಟುಗಳ ಚಲಾವಣೆಯನ್ನು ಸ್ಥಗಿತಗೊಳಿಸಿರುವುದರಿಂದ ಆಗುವ ಪರಿಣಾಮ ಊಹಿಸಲಸಾಧ್ಯ. ಒಟ್ಟು 17,000 ಲಕ್ಷ ಕೋಟಿ ಮೌಲ್ಯದ ನೋಟುಗಳು ಭಾರತದಲ್ಲಿ ಸದ್ಯ ಚಲಾವಣೆಯಾಗುತ್ತಿದ್ದು ಇವುಗಳಲ್ಲಿ ಶೇ 80 ರಷ್ಟು 500 ಹಾಗೂ 1000 ರೂ ನೋಟುಗಳಾಗಿರುವುದರಿಂದ ಬ್ಯಾಂಕುಗಳು ರೂ 13.6 ಲಕ್ಷ ಕೋಟಿ ಮೌಲ್ಯದ ಕರೆನ್ಸಿಗಳನ್ನು ಹಿಂದಕ್ಕೆ ಪಡೆಯಬೇಕಾಗುತ್ತದೆ.

ಇಷ್ಟೊಂದು ದೊಡ್ಡ ಮೌಲ್ಯದ 500 ಹಾಗೂ 1000 ಕರೆನ್ಸಿ ನೋಟುಗಳ ಪ್ರವಾಹವನ್ನು ಹೇಗೆ ನಿಭಾಯಿಸುವುದೆಂಬುದೇ ಬ್ಯಾಂಕುಗಳಿಗೆ ದೊಡ್ಡ ತಲೆನೋವಿನ ಸಂಗತಿಯಾಗಿ ಬಿಟ್ಟಿದೆ. ಹಲವು ಬ್ಯಾಂಕುಗಳು ಈಗಾಗಲೇ ನೋಟು ಲೆಕ್ಕ ಮಾಡುವ ಮೆಶಿನುಗಳಿಗೆ ಆರ್ಡರ್ ಮಾಡಿವೆ. ಎಸ್ ಬಿ ಐ ಈಗಾಗಲೇ ತನ್ನ ದೊಡ್ಡ ಸಂಖ್ಯೆಯ ಕ್ಯಾಶ್ ಡೆಪಾಸಿಟ್ ಮೆಶಿನುಗಳನ್ನು ಪೂರ್ಣ ಸಾಮರ್ಥ್ಯದಲ್ಲಿ ಉಪಯೋಗಿಸಲು ನಿರ್ಧರಿಸಿದೆ.

ದಿನವೊಂದಕ್ಕೆ 150 ಕ್ಕೂ ಕಡಿಮೆ ಜನರು ಉಪಯೋಗಿಸುವ ಎ ಟಿ ಎಂ ಕೇಂದ್ರಗಳಿಗೂ ಜನರು ಕ್ಯೂ ನಿಲ್ಲುವ ಸಾಧ್ಯತೆಯಿದೆ ದೇಶದಲ್ಲಿ 2.15 ಲಕ್ಷ ಎ ಟಿ ಎಂ ಗಳಿದ್ದರೆ, ಇಲ್ಲಿಗೆ ನಗದು ಸಾಗಿಸಬೇಕಾದ ಶಸ್ತ್ರಸಜ್ಜಿತ ಗಾರ್ಡ್ ಗಳಿರುವ ವ್ಯಾನುಗಳ ಸಂಖ್ಯೆ 10,000 ಕ್ಕೂ ಕಡಿಮೆಯಿದೆ. ಇದರಿಂದಾಗಿ ಎ ಟಿ ಎಂ ಗಳಿಗೆ ಹಣ ತುಂಬಿಸುವುದು ಸವಾಲಿನ ಕೆಲಸವಾಗಲಿದೆ. ಮೇಲಾಗಿ ಈಗ ಕೇವಲ 100 ಹಾಗೂ 50 ರೂ ನೋಟುಗಳನ್ನು ಎಟಿಎಂ ಗಳಿಗೆ ತುಂಬಿಸಬೇಕಾಗುವುದರಿಂದ ಈ ನೋಟುಗಳಿಗೆ ಎ ಟಿ ಎಂ ಮೆಶಿನುಗಳಲ್ಲಿ ಅಧಿಕ ಜಾಗದ ಅಗತ್ಯವೂ ಇದೆ.

ಐಸಿಐಸಿಐ, ಎಚ್ ಡಿ ಎಫ್ ಸಿ ಹಾಗೂ ಆಕ್ಸಿಸ್ ಬ್ಯಾಂಕ್ ಅಧಿಕಾರಿಗಳ ಪ್ರಕಾರ ಅವರು ತಮ್ಮ ಎ ಟಿ ಎಂ ನೆಟ್ ವರ್ಕನ್ನು ಇಂದು ರಾತ್ರಿ 11.55 ಕ್ಕೆ ಫ್ರೀರ್ ಮಾಡಲಿದ್ದಾರೆ. ಎ ಟಿ ಎಂ ಗಳಿಗೆ ನಗದು ಲೋಡ್ ಮಾಡುವ ಕ್ಯಾಶ್ ಫಿಲ್ಲಿಂಗ್ ಕಂಪೆನಿಗಳಿಗೆ ಹಣವನ್ನು ಕೆಲ ಬ್ಯಾಂಕುಗಳ ಶಾಖೆಗಳಿಗೇ ತರಲು ಹೇಳಲಾಗಿದೆ.

ಭಾರತದ ಎ ಟಿ ಎಂ ಜಾಲದಲ್ಲಿರುವ ರೂ 25,000 ಕೋಟಿ ಹಣದಲ್ಲಿ ಇಲ್ಲಿಯ ತನಕ ಕೇವಲ ಶೇ 30 ರಷ್ಟು ಮಾತ್ರ 100 ರೂ ನೋಟುಗಳಾಗಿವೆ. ಶೇ 50 ರಷ್ಟು ನಗದು ರೂ 500 ಹಾಗೂ ರೂ 1000 ನೋಟುಗಳದ್ದಾಗಿವೆ.

ಕನಿಷ್ಠ ಕೆಲ ದಿನಗಳ ತನಕ ಎ ಟಿ ಎಂ ಗಳಲ್ಲಿ ಅಗತ್ಯವಾದ ಹಣ ತುಂಬಿಸುವುದು ಬ್ಯಾಂಕುಗಳಿಗೆ ಸವಾಲಿನ ಕೆಲಸವಾಗುತ್ತದೆ, ಎಂದು ಹಿರಿಯ ಬ್ಯಾಂಕ್ ಅಧಿಕಾರಿಯೊಬ್ಬರು ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X