ಬ್ಯಾಂಕಿಗೆ ದುಡ್ಡು ಹಾಕಲು ಹೋಗುವವರೇ , ಇದನ್ನು ಓದಿಕೊಳ್ಳಿ
ಎಷ್ಟು ಹಣಕ್ಕೆ ತೆರಿಗೆ, ಎಷ್ಟಕ್ಕೆ ದಂಡ ?

ಹೊಸದಿಲ್ಲಿ,ನ.9: 1,000 ರೂ. ಹಾಗೂ 500 ರೂ. ನೋಟುಗಳ ಬದಲಾವಣೆಗೆ ವಿಧಿಸಲಾಗಿರುವ 50 ದಿನಗಳ ಕಾಲಾವಧಿಯಲ್ಲಿ 2.5 ಲಕ್ಷ ರೂ.ಗಿಂತ ಹೆಚ್ಚು ನಗದನ್ನು ಠೇವಣಿಯಿಡುವವರ ಘೋಷಿತ ಆದಾಯದಲ್ಲಿ ಸಾಮ್ಯತೆ ಕಂಡುಬರದೆ ಇದ್ದಲ್ಲಿ, ಆ ಹಣದ ಮೇಲೆ ತೆರಿಗೆ ಹಾಗೂ ಶೇ.200ರಷ್ಟು ದಂಡ ವಿಧಿಸಲಾಗುವುದೆಂದು ಕೇಂದ್ರ ಸರಕಾರ ಬುಧವಾರ ಎಚ್ಚರಿಕೆ ನೀಡಿದೆ.
‘‘2016ರ ನವೆಂಬರ್ 10ರಿಂದ 2016ರ ಡಿಸೆಂಬರ್ 30ರ ಅವಧಿಯಲ್ಲಿ ಬ್ಯಾಂಕ್ಗಳಲ್ಲಿ 2.5 ಲಕ್ಷ ರೂ.ಗಳಿಗಿಂತ ಹೆಚ್ಚು ಹಣವನ್ನು ಠೇವಣಿಯಿಡುವ ಎಲ್ಲಾ ಖಾತೆಗಳ ಬಗ್ಗೆ ನಾವು ವಿವರಗಳನ್ನು ನಾವು ಪಡೆದುಕೊಳ್ಳಲಿದ್ದೇವೆ’’ ಎಂದು ಕಂದಾಯ ಇಲಾಖೆಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ತಿಳಿಸಿದ್ದಾರೆ.
‘‘ಈ ಹಣವನ್ನು ಆದಾಯ ತೆರಿಗೆ ಇಲಾಖೆಯು ಠೇವಣಿದಾರರು ಸಲ್ಲಿಸಿದ ಆದಾಯ ರಿಟರ್ನ್ಗಳನ್ನು ಹೋಲಿಕೆ ಮಾಡಲಿದೆ ಹಾಗೂ ಆನಂತರ ಸೂಕ್ತವಾದ ಕ್ರಮವನ್ನು ಕೈಗೊಳ್ಳಬಹುದಾಗಿದೆ’’ ಎಂದವರು ಹೇಳಿದ್ದಾರೆ.
ಖಾತೆದಾರನು ಘೋಷಿಸಿದ ಆದಾಯದಲ್ಲಿ ಯಾವುದೇ ಸಾಮ್ಯತೆ ಕಂಡುಬಾರದೆ ಇದ್ದಲ್ಲಿ ಇದನ್ನು ತೆರಿಗೆ ವಂಚನೆಯ ಪ್ರಕರಣವೆಂದು ಪರಿಗಣಿಸಲಾಗುವುದು ಹಾಗೂ ಅದರ ಮೇಲೆ ಆದಾಉ ತೆರಿಗೆ ಇಲಾಖೆಯ ಕಾಯ್ದೆಯ ಸೆಕ್ಷನ್ 270 (ಎ) ಅನ್ವಯ ತೆರಿಗೆ ಮತ್ತು ಶೇ.200ರಷ್ಟು ದಂಡವನ್ನು ವಿಧಿಸಲಾಗುವುದು ಎಂದವರು ಹೇಳಿದರು.
ಕಪ್ಪುಹಣದ ವಿರುದ್ಧ ಸಾರಲಾದ ಅತಿ ದೊಡ್ಡ ಸಮರವೆಂದು ಹೇಳಿಕೊಂಡಿರುವ ಕೇಂದ್ರ ಸರಕಾರವುನಾಗರಿಕರು ತಮ್ಮ ಬ್ಯಾಂಕ್ ಖಾತೆಗಳಲ್ಲಿ 500 ರೂ. ಹಾಗೂ 1 ಸಾವಿರ ರೂ. ಮುಖಬೆಲೆಯ ಕರೆನ್ಸಿಗಳನ್ನು ಅಪವೌಲ್ಯಗೊಳಿಸಿದ್ದು, ಅವುಗಳನ್ನು ಬ್ಯಾಂಕ್ಗಳಲ್ಲಿ ನವೆಂಬರ್ 10ರಿಂದ ಡಿಸೆಂಬರ್ 30ರೊಳಗೆ ಬದಲಾಯಿಸಿಕೊಳ್ಳುವಂತೆ ಸೂಚಿಸಿದೆ.
ಆದರೆ ಮನೆಗಳಲ್ಲಿ 1.5 ಲಕ್ಷ ರೂ. ಅಥವಾ 2 ಲಕ್ಷ ರೂ.ವರೆಗೆ ತಮ್ಮ ಉಳಿತಾಯದ ಹಣವನ್ನು ಇರಿಸಿಕೊಂಡಿರುವ ಸಣ್ಣ ಉದ್ಯಮಿಗಳು, ಗೃಹಿಣಿಯರು, ಕಲಾವಿದರು ಹಾಗೂ ಕಾರ್ಮಿಕರು, ಆದಾಯ ತೆರಿಗೆಯ ಪರಿಶೀಲನೆಗೊಳಗಾಗುವ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲವೆಂದು ಹೇಳಿದ್ದಾರೆ.ಆ ಮೊತ್ತವು ತೆರಿಗೆಯೋಗ್ಯ ಆದಾಯದ ವ್ಯಾಪ್ತಿಗೆ ಬರುವುದಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.
ಗಣನೀಯ ಸಂಖ್ಯೆಯ ಜನರು ಚಿನ್ನ, ಬೆಳ್ಳಿ ಆಭರಣಗಳ ಖರೀದಿಯಲ್ಲಿ ತೊಡಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಹಸ್ಮುಖ್ ‘‘ಚಿನ್ನಾಭರಣ ಖರೀದಿಸುವವರು ಪಾನ್ ಸಂಖ್ಯೆಯನ್ನು ಒದಗಿಸಬೇಕೆಂದು ಸೂಚಿಸಿದರು. ಆಭರಣಗಳನ್ನು ಖರೀದಿಸುವ ಗ್ರಾಹಕರ ಪಾನ್ ಸಂಖ್ಯೆಯನ್ನು ಒದಗಿಸಲು ವಿಫಲರಾದ ಜ್ಯುವೆಲ್ಲರಿ ಮಾಲಕರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಅವರು ಎಚ್ಚರಿಕೆ ನೀಡಿದರು.
‘‘2016ರ ನವೆಂಬರ್ 10ರಿಂದ 2016ರ ಡಿಸೆಂಬರ್ 30ರ ಅವಧಿಯಲ್ಲಿ ಬ್ಯಾಂಕ್ಗಳಲ್ಲಿ 2.5 ಲಕ್ಷ ರೂ.ಗಿಂತ ಹೆಚ್ಚು ಹಣವನ್ನು ಠೇವಣಿಯಿಡುವ ಎಲ್ಲಾ ಖಾತೆಗಳ ವಿವರಗಳನ್ನು ನಾವು ಪಡೆದುಕೊಳ್ಳಲಿದ್ದೇವೆ’. ಖಾತೆದಾರನು ಘೋಷಿಸಿದ ಆದಾಯದಲ್ಲಿ ಯಾವುದೇ ಸಾಮ್ಯತೆ ಕಂಡುಬಾರದೆ ಇದ್ದಲ್ಲಿ ಇದನ್ನು ತೆರಿಗೆ ವಂಚನೆಯ ಪ್ರಕರಣವೆಂದು ಪರಿಗಣಿಸಿ, ಆದಾಯ ತೆರಿಗೆ ಇಲಾಖೆ ಕಾಯ್ದೆಯ ಸೆಕ್ಷನ್ 270 (ಎ) ಅನ್ವಯ ತೆರಿಗೆ ಮತ್ತು ಶೇ.200ರಷ್ಟು ದಂಡವನ್ನು ವಿಧಿಸಲಾಗುವುದು.
- ಹಸ್ಮುಖ್ ಅಧಿಯಾ, ಕಂದಾಯ ಇಲಾಖೆಯ ಕಾರ್ಯದರ್ಶಿ







