Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಇಲ್ಲಿವೆ ನಿಮ್ಮ ಎಲ್ಲ ಪ್ರಶ್ನೆಗಳಿಗೆ...

ಇಲ್ಲಿವೆ ನಿಮ್ಮ ಎಲ್ಲ ಪ್ರಶ್ನೆಗಳಿಗೆ ರಿಸರ್ವ್ ಬ್ಯಾಂಕ್ ಉತ್ತರ

500 ಹಾಗೂ 1000 ರೂ. ನೋಟು ಚಲಾವಣೆ ಸ್ಥಗಿತ

ವಾರ್ತಾಭಾರತಿವಾರ್ತಾಭಾರತಿ9 Nov 2016 11:54 PM IST
share
ಇಲ್ಲಿವೆ ನಿಮ್ಮ ಎಲ್ಲ ಪ್ರಶ್ನೆಗಳಿಗೆ ರಿಸರ್ವ್ ಬ್ಯಾಂಕ್ ಉತ್ತರ

♦ ಯೋಜನೆ ಏಕೆ?

ದೇಶದಲ್ಲಿ ಅಧಿಕ ವೌಲ್ಯದ ನೋಟುಗಳನ್ನು ಹೋಲುವ ಕಳ್ಳನೋಟು ಚಲಾವಣೆ ಮಿತಿಮೀರಿದೆ. ಕಳ್ಳನೋಟುಗಳು ಯಾವುದೇ ಭದ್ರತಾ ಲಕ್ಷಣಗಳನ್ನು ಅನುಕರಿಸದಿದ್ದರೂ, ಜನಸಾಮಾನ್ಯರಿಗೆ ಕಳ್ಳನೋಟುಗಳು ಕೂಡಾ ನೈಜ ಕರೆನ್ಸಿ ನೋಟುಗಳಂತೆ ಕಾಣುತ್ತವೆ. ಕಳ್ಳನೋಟುಗಳನ್ನು ದೇಶವಿರೋಧಿ ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ಅಧಿಕ ವೌಲ್ಯದ ನೋಟುಗಳನ್ನು ಭಯೋತ್ಪಾದಕರು ಹಾಗೂ ಕಪ್ಪುಹಣ ಹೊಂದಿರುವವರು ದುರುಪಯೋಗ ಮಾಡಿಕೊಳ್ಳುತ್ತಾರೆ. ಭಾರತ ಇಂದಿಗೂ ನಗದು ವಹಿವಾಟಿನ ಆರ್ಥಿಕತೆಯಾಗಿ ಉಳಿದಿರುವುದರಿಂದ ಇಂಥ ಕಳ್ಳನೋಟು ಚಲಾವಣೆ ದಂಧೆ ಹೆಚ್ಚುತ್ತಿದೆ. ಕಾಳಧನ ತಡೆ ಮತ್ತು ಕಳ್ಳನೋಟು ದಂಧೆಗೆ ಕಡಿವಾಣ ಹಾಕುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ.

♦ ಯೋಜನೆ ಏನು?

500 ಹಾಗೂ 1000 ರೂಪಾಯಿ ವೌಲ್ಯದ ನೋಟುಗಳನ್ನು ಕಾನೂನುಬದ್ಧ ಚಲಾವಣೆಯಿಂದ ಹಿಂದಕ್ಕೆ ಪಡೆಯಲಾಗಿದೆ. ಇದರ ಪರಿಣಾಮವಾಗಿ ಹಳೆಯ ಅಧಿಕ ವೌಲ್ಯದ ನೋಟುಗಳನ್ನು ಯಾವುದೇ ವಹಿವಾಟಿಗೆ ಬಳಸುವಂತಿಲ್ಲ. ಇದನ್ನು ಸಂಗ್ರಹಿಸಿ ಇಟ್ಟರೂ ಇದಕ್ಕೆ ಯಾವ ವೌಲ್ಯವೂ ಇಲ್ಲ. ಈ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕಿನ ಯಾವುದೇ 19 ಕಚೇರಿಗಳಲ್ಲಿ ಅಥವಾ ಯಾವುದೇ ಬ್ಯಾಂಕ್ ಶಾಖೆಗಳಲ್ಲಿ ಇಲ್ಲವೇ ಮುಖ್ಯ ಅಂಚೆ ಕಚೇರಿ ಅಥವಾ ಉಪ ಅಂಚೆ ಕಚೇರಿಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದಾಗಿದೆ.

 ♦ ಎಷ್ಟು ವೌಲ್ಯ ಸಿಗುತ್ತದೆ?

 ಬ್ಯಾಂಕ್ ಶಾಖೆ ಅಥವಾ ಆರ್‌ಬಿಐ ಕಚೇರಿಗಳಲ್ಲಿ ಇವುಗಳನ್ನು ನೀಡಿದರೆ ನಿಮಗೆ ಸಂಪೂರ್ಣ ವೌಲ್ಯ ಸಿಗುತ್ತದೆ.

♦ ನಗದುರೂಪದಲ್ಲಿ ಪಡೆಯಬಹುದೇ?

ಇಲ್ಲ. ಎಷ್ಟೇ ವೌಲ್ಯದ ನೋಟು ವಿನಿಮಯ ಮಾಡಿದರೂ, 4,000 ರೂಪಾಯಿ ಮಾತ್ರ ನಗದು ರೂಪದಲ್ಲಿ ಸಿಗುತ್ತದೆ. ಉಳಿದ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

♦  ನಾನು ಬ್ಯಾಂಕಿನಲ್ಲಿ ನೀಡಿದ ಸಂಪೂರ್ಣ ಮೊತ್ತಕ್ಕೆ ಪ್ರತಿಯಾಗಿ ನನಗೆ ಸಂಪೂರ್ಣ ನಗದು ಏಕೆ ಸಿಗುವುದಿಲ್ಲ?

ಈ ಯೋಜನೆಯ ಉದ್ದೇಶದ ಹಿನ್ನೆಲೆಯಲ್ಲಿ ಸಂಪೂರ್ಣ ವಾಗಿ ನಗದು ರೂಪದಲ್ಲಿ ಪಡೆಯಲು ಅವಕಾಶ ಇಲ್ಲ.

♦ ನನ್ನ ಅಗತ್ಯತೆಗೆ 4 ಸಾವಿರ ರೂ.ಸಾಲದು. ನಾನೇನು ಮಾಡಬೇಕು?

ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಇತರ ಪಾವತಿಗೆ ಬಳಸಿಕೊಳ್ಳಬಹುದು. ಇದನ್ನು ಚೆಕ್ ರೂಪದಲ್ಲಿ ಇಲ್ಲವೇ ಇಲೆಕ್ಟ್ರಾನಿಕ್ ವರ್ಗಾವಣೆ ವಿಧಾನಗಳಾದ ಇಂಟರ್‌ನೆಟ್ ಬ್ಯಾಂಕಿಂಗ್, ಮೊಬೈಲ್ ವ್ಯಾಲೆಟ್, ಐಎಂಪಿಎಸ್, ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಸಬಹುದಾಗಿದೆ.

♦  ನಾನು ಬ್ಯಾಂಕ್ ಖಾತೆ ಹೊಂದಿಲ್ಲದಿದ್ದರೆ?

ನೀವು ತಕ್ಷಣ ಪಕ್ಕದ ಬ್ಯಾಂಕಿಗೆ ತೆರಳಿ, ಕೆವೈಸಿ ಅಗತ್ಯತೆಗಳಿಗೆ ಬೇಕಾದ ದಾಖಲೆಗಳನ್ನು ಸಲ್ಲಿಸಿ ಬ್ಯಾಂಕ್ ಖಾತೆ ಆರಂಭಿಸಲೇಬೇಕು.

♦  ನಾನು ಕೇವಲ ಜನಧನ್ ಯೋಜನೆ ಖಾತೆಯನ್ನು ಮಾತ್ರ ಹೊಂದಿದ್ದರೆ?

ಜೆಡಿವೈ ಖಾತೆದಾರರು ಕೂಡಾ ನಿಗದಿತ ಮಿತಿಗೆ ಅನುಗುಣವಾಗಿ ಹಾಗೂ ವಿಧಿವಿಧಾನಗಳ ಅನುಸಾರ ವಿನಿಮಯ ಸೌಲಭ್ಯವನ್ನು ಪಡೆಯಬಹುದು.

♦  ನೋಟುಗಳ ವಿನಿಮಯಕ್ಕೆ ನಾನು ಎಲ್ಲಿ ಹೋಗಬಹುದು?

ಈ ವಿನಿಮಯ ಸೌಲಭ್ಯವು ಎಲ್ಲ ಆರ್‌ಬಿಐ ಕಚೇರಿಗಳಲ್ಲಿ, ವಾಣಿಜ್ಯ ಬ್ಯಾಂಕ್ ಶಾಖೆಗಳಲ್ಲಿ, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ಅರ್ಬನ್ ಕೋ ಆಪರೇಟಿವ್ ಬ್ಯಾಂಕ್, ರಾಜ್ಯ ಸಹಕಾರ ಬ್ಯಾಂಕ್ ಅಥವಾ ಮುಖ್ಯ ಅಂಚೆ ಕಚೇರಿ, ಉಪ ಅಂಚೆ ಕಚೇರಿಗಳಲ್ಲಿ ಲಭ್ಯವಿದೆ.

♦  ನಾನು ನನ್ನ ಬ್ಯಾಂಕ್ ಶಾಖೆಗೇ ಹೋಗಬೇಕೇ?

4,000 ರೂಪಾಯಿವರೆಗಿನ ವಿನಿಮಯಕ್ಕೆ ಯಾವುದೇ ಬ್ಯಾಂಕ್ ಶಾಖೆಗೆ ಹೋಗಿ ಅಧಿಕೃತ ಗುರುತಿನ ಚೀಟಿ ತೋರಿಸಿ ವಿನಿಮಯ ಮಾಡಿಕೊಳ್ಳಬಹುದು.

4,000 ರೂಪಾಯಿಗಿಂತ ಹೆಚ್ಚಿನ ವಿನಿಮಯದಲ್ಲಿ, ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗುತ್ತದೆ. ನೀವು ಖಾತೆ ಹೊಂದಿರುವ ಶಾಖೆಗೇ ತೆರಳಬೇಕು ಅಥವಾ ಅದೇ ಬ್ಯಾಂಕಿನ ಇತರ ಶಾಖೆಗಳಲ್ಲೂ ಈ ಸೌಲಭ್ಯ ಇದೆ.
ಒಂದು ವೇಳೆ ನೀವು ಖಾತೆ ಹೊಂದಿಲ್ಲದ ಇತರ ಬ್ಯಾಂಕಿನ ಶಾಖೆಗಳಿಗೆ ತೆರಳಿದರೆ, ನೀವು ಅಧಿಕೃತ ಗುರುತುಪತ್ರ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ಆಗ ಇಲೆಕ್ಟ್ರಾನಿಕ್ ನಿಧಿ ವರ್ಗಾವಣೆ ಮೂಲಕ ನಿಮ್ಮ ಖಾತೆಗೆ ಹಣ ವರ್ಗಾಯಿಸಲಾಗುತ್ತದೆ.

♦  ನನ್ನ ಬ್ಯಾಂಕಿನ ಇತರ ಶಾಖೆಗಳಿಗೂ ನಾನು ಹೋಗಬಹುದೇ?

ಹೌದು. ನಿಮ್ಮ ಖಾತೆ ಇರುವ ಬ್ಯಾಂಕಿನ ಇತರ ಯಾವುದೇ ಶಾಖೆಗಳಲ್ಲೂ ನೀವು ವಿನಿಮಯ ಮಾಡಿಕೊಳ್ಳಬಹುದು.

♦ ನಾನು ಇತರ ಯಾವುದೇ ಬ್ಯಾಂಕಿನ ಶಾಖೆಗಳಿಗೆ ಹೋಗಬಹುದೇ?

ಹೌದು. ನೀವು ಇತರ ಯಾವುದೇ ಬ್ಯಾಂಕಿನ ಶಾಖೆಗಳಿಗೂ ಹೋಗಬಹುದು. ಅಂಥ ಪ್ರಕರಣದಲ್ಲಿ ನೀವು ಅಧಿಕೃತ ಗುರುತುಪತ್ರವನ್ನು ನಗದು ವಿನಿಮಯಕ್ಕೆ ನೀಡಬೇಕಾಗುತ್ತದೆ. 4,000 ರೂಪಾಯಿಗಿಂತ ಹೆಚ್ಚಿನ ಇಲೆಕ್ಟ್ರಾನಿಕ್ ನಿಧಿ ವರ್ಗಾವಣೆಯಾಗಬೇಕಿದ್ದರೆ, ಅಧಿಕೃತ ಗುರುತುಚೀಟಿಯ ಜತೆಗೆ, ಬ್ಯಾಂಕ್ ಖಾತೆ ವಿವರಗಳನ್ನೂ ನೀಡಬೇಕಾಗುತ್ತದೆ.

♦  ನನ್ನ ಖಾತೆ ಇಲ್ಲ. ಆದರೆ ನನ್ನ ಸಂಬಂಧಿಕರ/ ಸ್ನೇಹಿತರ ಖಾತೆ ಇದ್ದು, ಅಂಥ ಖಾತೆಗಳಿಗೆ ನಾನು ನನ್ನ ಹಣವನ್ನು ವಿನಿಮಯ ಮಾಡಬಹುದೇ?

ಹೌದು. ನಿಮ್ಮ ಸಂಬಂಧಿ ಅಥವಾ ಸ್ನೇಹಿತ ಅಂಥ ವರ್ಗಾವಣೆಗೆ ಲಿಖಿತ ಅನುಮತಿ ನೀಡಬೇಕಾಗುತ್ತದೆ. ನೀವು ಹೀಗೆ ವಿನಿಮಯ ಮಾಡುವಾಗ, ನೀವು ಬ್ಯಾಂಕಿಗೆ ಖಾತೆದಾರ ನೀಡಿರುವ ಅನುಮತಿಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಜತೆಗೆ ನಿಮ್ಮ ಅಧಿಕೃತ ಗುರುತಿನಪತ್ರವೂ ಕಡ್ಡಾಯ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X