ನ.19: ಸುರತ್ಕಲ್ನಲ್ಲಿ 900 ಮನೆಗಳ ಒಪ್ಪಿಗೆ ಪತ್ರ ಹಸ್ತಾಂತರ
![ನ.19: ಸುರತ್ಕಲ್ನಲ್ಲಿ 900 ಮನೆಗಳ ಒಪ್ಪಿಗೆ ಪತ್ರ ಹಸ್ತಾಂತರ ನ.19: ಸುರತ್ಕಲ್ನಲ್ಲಿ 900 ಮನೆಗಳ ಒಪ್ಪಿಗೆ ಪತ್ರ ಹಸ್ತಾಂತರ](https://www.varthabharati.in/sites/default/files/images/articles/2016/11/10/Moideen-Bava-Mangalore-North-Constituency-Congress-Candidate.jpg)
ಸುರತ್ಕಲ್,ನ.10:ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 900 ಲಾನುಭವಿಗಳನ್ನು ಆಶ್ರಯ ಮನೆಗಳಿಗಾಗಿ ಗುರುತಿಸಲಾಗಿದ್ದು, ನ.19ರಂದು ಸುರತ್ಕಲ್ನಲ್ಲಿ ನಡೆಯಲಿರುವ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯ ಜನ್ಮದಿನದ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಗುವುದು ಎಂದು ಶಾಸಕ ಮೊಯ್ದಿನ್ ಬಾವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ 3,000 ಅರ್ಜಿಗಳಲ್ಲಿ 900 ಲಾನುಭವಿಗಳ ಅಂತಿಮ ಪಟ್ಟಿ ತಯಾರಾಗಿದೆ. ಇಂದಿರಾಗಾಂಧಿಯವರ ಕನಸಿನಂತೆ ಪ್ರತೀ ಬಡವರ್ಗವೂ ತನ್ನದೇ ಸೂರು ಹೊಂದಿರಬೇಕು ಎಂಬ ಯೋಜನೆಯಡಿ ಸರಕಾರ 1 ಮತ್ತು 2 ಅಂತಸ್ತಿನ ವಸತಿ ಸಮುಚ್ಚಯ ನಿರ್ಮಿಸಿ ವಸತಿ ಸಮಸ್ಯೆ ನಿವಾರಣೆಗೆ ಮುಂದಾಗಿದೆ ಎಂದು ಅವರು ನುಡಿದರು.
ಪಾಲಿಕೆಯ ಘನ ತ್ಯಾಜ್ಯ ಕರದಲ್ಲಿ ಇಳಿಕೆ
ರಾಜ್ಯ ಸರಕಾರ ಪಾಲಿಕೆ ವ್ಯಾಪ್ತಿಯಲ್ಲಿ ವಸೂಲಿ ಮಾಡುತ್ತಿರುವ ಘನ ತ್ಯಾಜ್ಯ ಉಪಕರದಲ್ಲಿ ಗಣನೀಯ ಇಳಿಕೆ ಮಾಡಲಾಗಿದೆ. 500 ಚದರಡಿಯ ಕಟ್ಟಡಕ್ಕೆ 240 ರೂ.ನಿಂದ 180 ರೂ.ಗೆ ಇಳಿಕೆ, 1000.ಚದರಡಿಗೆ 480 ರೂ.ನಿಂದ 360 ರೂ.ಗೆ ಇಳಿಕೆ ಮಾಡಲಾಗಿದೆ ಎಂದರು.
ಒಳಚರಂಡಿ ದುರಸ್ತಿ
ಎಡಿಬಿ ನೀಡಿದ 90 ಕೋ. ರೂ. ಅನುದಾನದಲ್ಲಿ 30 ಕೋ. ರೂ. ಬಳಕೆ ಮಾಡಿ ಮಾಡಿರುವ ಒಳಚರಂಡಿ ವ್ಯವಸ್ಥೆಯನ್ನು ಸಂಪೂರ್ಣ ದುರಸ್ತಿ ಮಾಡಲಾಗುವುದು. ಬಳಿಕ ಹೊಸ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಮೊಯ್ದೀನ್ ಬಾವ ಹೇಳಿದರು.
ಮನಪಾ ಸದಸ್ಯ ಕುಮಾರ್ ಮೆಂಡನ್, ಮುಡಾ ಸದಸ್ಯ ಕೇಶವ ಸನಿಲ್, ಪುರುಷೋತ್ತಮ್ ದೇವಾಡಿಗ ಮುಕ್ಕ, ಜಲೀಲ್, ಶೇಖರ ಪೂಜಾರಿ ಮುಂಡ್ಕೂರು, ವಿಜಯ್ ಆರ್ಹಾನ, ಮಧುಸೂದನ್ ಕುಂದರ್, ಲೀಲಾಧರ್ ತಣ್ಣೀರುಬಾವಿ, ನವೀನ್ ಕೋಟ್ಯಾನ್, ರವಿರಾಜ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.