ಕಾರ್ಕಳ: ಬೈಕ್ನಿಂದ ಬಿದ್ದು ಸವಾರ ಮೃತ್ಯು
![ಕಾರ್ಕಳ: ಬೈಕ್ನಿಂದ ಬಿದ್ದು ಸವಾರ ಮೃತ್ಯು ಕಾರ್ಕಳ: ಬೈಕ್ನಿಂದ ಬಿದ್ದು ಸವಾರ ಮೃತ್ಯು](https://www.varthabharati.in/sites/default/files/images/articles/2016/11/13/accident-graphic-Medium.jpg)
ಅಜೆಕಾರು, ನ.13: ಶುಕ್ರವಾರ ರಾತ್ರಿ ತನ್ನ ದ್ವಿಚಕ್ರ ವಾಹನದಲ್ಲಿ ಅಜೆಕಾರಿನತ್ತ ಬರುತಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ವಾಹನ ಸಮೇತ ರಸ್ತೆಯಲ್ಲಿ ಬಿದ್ದು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರನ್ನು ಶಶಿಕಾಂತ ಇಂದ್ರ (64) ಎಂದು ಗುರುತಿಸಲಾಗಿದೆ. ಇವರು ಅಜೆಕಾರು ಕುಂದಬೆಟ್ಟು ಬಸದಿಯಲ್ಲಿ ನಡೆಯುವ ವಜ್ರಪಂಜರ ಪೂಜಾ ಆರಾಧನೆಯ ಪೌರೋಹಿತ್ಯ ಉಸ್ತುವಾರಿಗಾಗಿ ತನ್ನ ಹೋಂಡಾ ಆ್ಯಕ್ಟಿವಾ ದ್ವಿಚಕ್ರ ವಾಹನದಲ್ಲಿ ಪಡಂಗಡಿಯಿಂದ ಬಜಗೋಳಿ ಶಿರ್ಲಾಲು ಮಾರ್ಗವಾಗಿ ಅಜೆಕಾರಿನಲ್ಲಿ ನ.11ರ ರಾತ್ರಿ 8:30ರ ಸುಮಾರಿಗೆ ಬರುತ್ತಿರುವಾಗ ಶಿರ್ಲಾಲು ಗ್ರಾ33ಮದ ಹಾಡಿಯಂಗಡಿ ಬಳಿ ಶಿರ್ಲಾಲು-ಅಜೆಕಾರು ರಸ್ತೆಯಲ್ಲಿ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ದ್ವಿಚಕ್ರ ರಸ್ತೆಯಲ್ಲಿ ಮಗುಚಿ ಬಿದ್ದಿತ್ತು.
ತೀವ್ರವಾಗಿ ಗಾಯಗೊಂಡ ಇಂದ್ರರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅವರು ಶನಿವಾರ ಬೆಳಗ್ಗೆ 10:30ಕ್ಕೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.