Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನಗದಿಲ್ಲದೆ ನಗದ ಗ್ರಾಮೀಣ ಭಾರತ!

ನಗದಿಲ್ಲದೆ ನಗದ ಗ್ರಾಮೀಣ ಭಾರತ!

ವಾರ್ತಾಭಾರತಿವಾರ್ತಾಭಾರತಿ14 Nov 2016 11:20 PM IST
share

ಪಚ್ಗಾಂವ್(ಹರ್ಯಾಣ), ನ.14: ಕಪ್ಪು ಹಣವನ್ನು ಮಟ್ಟ ಹಾಕಲು ರೂ. 500 ಹಾಗೂ 1000ದ ನೋಟು ರದ್ದತಿಯ ಸರಕಾರದ ನಿರ್ಧಾರದಿಂದ ನಗದಿನ ಮೂಲಕವೇ ಹೆಚ್ಚು ವ್ಯವಹಾರ ನಡೆಯುವ ಗ್ರಾಮೀಣ ಭಾರತದ ಜನರಿಗೆ ಅತ್ಯಂತ ಬಾಧೆಯಾಗಿದೆ. ಅವರಲ್ಲಿ ಕೆಲವರಿಗೆ ಬ್ಯಾಂಕ್ ಖಾತೆಯೂ ಇಲ್ಲ. ದೈನಂದಿನ ಅಗತ್ಯ ಪೂರೈಸಿಕೊಳ್ಳಲು ನಗದು ಹಣ ಪಡೆಯುವುದಕ್ಕಾಗಿ ಅವರು ಹೆಣಗಾಡಬೇಕಾಗಿ ಬಂದಿದೆ.

ರಾಷ್ಟ್ರ ರಾಜಧಾನಿಯಿಂದ ಕೇವಲ 2 ತಾಸು ದೂರದ, ಹರ್ಯಾಣದ ಪಚ್ಗಾಂವ್‌ನಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿರುವ 18ರ ಹರೆಯದ ರಿಂಕು ಯಾದವ್‌ನಿಗೆ ಬ್ಯಾಂಕ್ ಖಾತೆಯಿಲ್ಲ. ತನ್ನೆಲ್ಲ ವ್ಯವಹಾರ ನಗದಿನಿಂದಲೇ ನಡೆಯುವುದರಿಂದ ಬ್ಯಾಂಕ್ ಖಾತೆ ತೆರೆದಿಲ್ಲ. ಆದರೆ, ನಗದು ಹಣ ಇಲ್ಲದೆ ತಾನು ಊಟ ಮಾಡುವುದಾದರೂ ಹೇಗೆ ಎಂದಾತ ಪ್ರಶ್ನಿಸಿದ್ದಾನೆ.
ತಮ್ಮ ಗ್ರಾಮಗಳಲ್ಲಿ ಸುಮಾರು 35 ಸಾವಿರ ಜನರಿದ್ದು, 4 ಬ್ಯಾಂಕುಗಳು ಹಾಗೂ 4 ಎಟಿಎಂಗಳಿವೆ. ಎಟಿಎಂಗಳೆಲ್ಲ ಮುಚ್ಚಿದ್ದರೆ, ಬ್ಯಾಂಕುಗಳಿಗೆ ದಿನಕ್ಕೆ ಕೇವಲ 2-5 ಲಕ್ಷ ಮಾತ್ರ ಬರುತ್ತಿದೆ. ಇತರ ನಗರಗಳಿಗೆ ಹೋಲಿಸಿದರೆ ಪಚ್ಗಾಂವ್‌ನ ಬ್ಯಾಂಕ್‌ಗಳಿಗೆ ಬರುವ ಹಣ ತೀರಾ ಕಡಿಮೆ. ಪ್ರತಿ ಬ್ಯಾಂಕ್‌ಗೆ ಕನಿಷ್ಠ 20ರಿಂದ 30 ಲಕ್ಷ ರೂ.ಗಳಾದರೂ ಬರಬೇಕು. ಆದರೆ, ಇಲ್ಲಿನ ಹರ್ಯಾಣ ಗ್ರಾಮೀಣ ಬ್ಯಾಂಕ್‌ಗೆ ಕೇವಲ 2 ಲಕ್ಷ ಬರುತ್ತದೆ. ಅದು ತಲಾ 10 ಅಥವಾ 5 ಸಾವಿರದಂತೆ 20-30 ಮಂದಿ ಪಡೆದರೆ ಮುಗಿಯುತ್ತದೆಂದು ಸರಪಂಚ ಕ್ಯಾಪ್ಟನ್ ಸುಬೆ ಸಿಂಗ್ ವಿವರಿಸಿದ್ದಾರೆ.
ತಮಗೆ ನಿನ್ನೆ ರೂ. 5 ಲಕ್ಷ ಹಾಗೂ ಇಂದು ರೂ. 2 ಲಕ್ಷ ಬಂದಿದೆ. ಅಗತ್ಯಕ್ಕೆ ತಕ್ಕಷ್ಟು ನಗದು ಪೂರೈಕೆಯಿಲ್ಲ. ತಮಗೆ ಹೆಚ್ಚು ಹಣ ಅಗತ್ಯವಿದೆಯೆಂದು ಬ್ಯಾಂಕ್‌ನ ಮ್ಯಾನೇಜರ್ ಅರುಣ್ ಯಾದವ್ ಒಪ್ಪಿಕೊಳ್ಳುತ್ತಾರೆ.
ತಮಗೆ ರಸಗೊಬ್ಬರದ ಅಂಗಡಿಯಿದೆ. ತಮಗೆ ಪರಿಚಯದ ಜಮೀನ್ದಾರರು ಬಂದರೆ ಸಾಲ ಕೊಡುತ್ತೇವೆಂದು ಅಶೋಕ್ ಕುಮಾರ್ ಎಂಬವರು ತಿಳಿಸಿದ್ದಾರೆ. ಆದರೆ, ಅಂಗಡಿಕಾರರಿಗೆ ಪರಿಚಯವಿಲ್ಲದ ರೈತರಿಗೆ ದಿನವಹಿ ವ್ಯವಹಾರಕ್ಕೆ ನಗದಿನ ಏರ್ಪಾಟು ಮಾಡಿಕೊಳ್ಳದೆ ಬೇರೆ ದಾರಿಯಿರುವುದಿಲ್ಲ. ಇಲ್ಲಿ ಒಂದು 4-5 ಮಂದಿಯಲ್ಲಿ ಕ್ರೆಡಿಟ್ ಕಾರ್ಡ್‌ಗಳಿದ್ದರೂ, ಉಪಯೋಗಿಸುವ ಸೌಲಭ್ಯವಿಲ್ಲ. ಹಣವಿಲ್ಲದೆ ಬದುಕುವುದು ಹೇಗೆಂದು ಹವಾಲ್ದಾರ್ ರಾಜಾ ರಾವತ್ ಎಂಬ್ರು ಪ್ರಶ್ನಿಸುತ್ತಾರೆ.
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X