Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನೋಟು ನಿಷೇಧ ತಂದ ಆತಂಕ: ನಮ್ಮ...

ನೋಟು ನಿಷೇಧ ತಂದ ಆತಂಕ: ನಮ್ಮ ಹೊಣೆಗಾರಿಕೆಯನ್ನು ನಿಭಾಯಿಸೋಣ

ವಾರ್ತಾಭಾರತಿವಾರ್ತಾಭಾರತಿ15 Nov 2016 12:07 AM IST
share

ಸರಕಾರದ ತರಾತುರಿಯ ನೋಟು ನಿಷೇಧ ನಿರ್ಧಾರದಿಂದ ದೇಶ ಬಿಕ್ಕಟ್ಟಿನಲ್ಲಿದೆ. ಸರಕಾರದ ಆದೇಶದ ಮೊದಲ ಬಲಿ ಶ್ರೀಸಾಮಾನ್ಯನೇ ಆಗಿರುವುದು ಸದ್ಯದ ವಿಪರ್ಯಾಸ. ಮಧ್ಯಮ ವರ್ಗ ಮತ್ತು ಬಡವರ್ಗ ಕೈಯಲ್ಲಿ ಹಣವಿಲ್ಲದೆ ಅಕ್ಷರಶಃ ಬೀದಿಗೆ ಬಿದ್ದಿವೆ. ಈ ಸಂದರ್ಭದಲ್ಲಿ ಸರಕಾರದ ನಿರ್ಧಾರವನ್ನು ವಿಮರ್ಶಿಸುತ್ತ, ಟೀಕಿಸುತ್ತಲೇ ನಾವೆಲ್ಲರೂ ನಮ್ಮ ಹೊಣೆಗಾರಿಕೆಗಳನ್ನು ಹೊತ್ತುಕೊಳ್ಳಬೇಕಾಗಿದೆ. ದೇಶಸೇವೆಯ ಭಾಗ ಇದು ಎನ್ನುವುದನ್ನು ಅರ್ಥ ಮಾಡಿಕೊಂಡು ಈ ಬಿಕ್ಕಟ್ಟಿನ ಸಂದರ್ಭದಲ್ಲಿ ತಕ್ಷಣದ ನೆರವಿಗೆ ಬೀದಿಗಿಳಿಯಬೇಕಾಗಿದೆ. ದೇಶದ ಹಿತಾಸಕ್ತಿಯನ್ನು ಕಾಪಾಡುವುದಕ್ಕಾಗಿ ಕನಿಷ್ಠ ಕೆಲವು ಸಣ್ಣ ಸಣ್ಣ ಜವಾಬ್ದಾರಿಗಳನ್ನು ವಹಿಸಿಕೊಂಡರೂ ಅದು ಮಾಡುವ ಪರಿಣಾಮ ಬಹು ದೊಡ್ಡದು. ಆದುದರಿಂದ, ಮೋದಿಯ ನೋಟು ನಿಷೇಧದ ದೂರಗಾಮಿ ಪರಿಣಾಮಗಳು ಏನೇ ಇರಲಿ, ತಕ್ಷಣದ ಸಮಸ್ಯೆಗಳಿಗೆ ನಾವು ಏನು ಮಾಡಬಹುದು ಎಂಬ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿದೆ. ಹನಿ ಹನಿಕೂಡಿದರೆ ಹಳ್ಳ ಎಂಬ ಗಾದೆಯಂತೆ ನಮ್ಮ ನಮ್ಮ ಸಣ್ಣ ಸಣ್ಣ ಸೇವೆಗಳೂ ಒಟ್ಟಂದದಲ್ಲಿ ಬಹುದೊಡ್ಡ ಪರಿಣಾಮವನ್ನು ಬೀರಬಹುದು. ದೇಶದ ಪರಿಸ್ಥಿತಿ ಸಂಪೂರ್ಣ ಹದಗೆಡದಂತೆ ಕಾಪಾಡಬಹುದು. ನಾವು ಮಾಡಬೇಕಾದುದು ಇಷ್ಟು .
1. 

ಬ್ಯಾಂಕ್, ಎಟಿಎಂ ಮುಂದೆ ಸಾಲು ನಿಂತಿರುವ ಸಂದರ್ಭದಲ್ಲಿ ನಮ್ಮ ಹಿಂದಕ್ಕೊಮ್ಮೆ ಕಣ್ಣು ಹೊರಳಿಸೋಣ. ನಮ್ಮ ಹಿಂದುಗಡೆಯಲ್ಲಿ ವೃದ್ಧರು, ಅಶಕ್ತ ಮಹಿಳೆಯರು ಅಥವಾ ಅಂಗವಿಕಲರು ಇದ್ದರೆ ತಕ್ಷಣ ಅವರನ್ನು ಸಾಲಲ್ಲಿ ನಮಗಿಂತ ಮುಂದೆ ನಿಲ್ಲಿಸೋಣ. ನಮಗೆ ಸಾಧ್ಯವಾಗುವ ರೀತಿಯಲ್ಲಿ ಅವರಿಗೆ ನೆರವಾಗೋಣ. 2. ಅಮಾಯಕರು, ಅನಕ್ಷರಸ್ಥರು ನಿಷೇಧಗೊಂಡ ಹಣ ಹಿಡಿದು ಕೊಂಡು ಬ್ಯಾಂಕ್ ಮುಂದೆ ನಿಂತರೆ ಅವರ ಮಾತನ್ನು ತಿರಸ್ಕರಿಸದೆ ಅದಕ್ಕೆ ಕಿವಿಯಾಗೋಣ. ಮಾಹಿತಿಗಳನ್ನು ಕೇಳಿದರೆ ತಕ್ಷಣ ಅವರಿಗೆ ವಿವರಗಳನ್ನು ನೀಡೋಣ. ವಿನಿಮಯ ವಿಧಾನಗಳನ್ನು ತಿಳಿಸಿಕೊಡೋಣ. 3. 
ಅಗತ್ಯವಿಲ್ಲದಿದ್ದರೂ ಪ್ರತಿ ದಿನ ನೂರರ ನೋಟುಗಳನ್ನು ಡ್ರಾ ಮಾಡಿ ಮನೆಯಲ್ಲಿ ಸಂಗ್ರಹ ಮಾಡುವ ಪ್ರವೃತ್ತಿಯನ್ನು ನಿಲ್ಲಿಸೋಣ. ಇನ್ನೊಬ್ಬರಿಗೂ ಅದನ್ನು ತಿಳಿಸೋಣ. 4.  
ಹಣ ವಿನಿಮಯಕ್ಕೆ ಸಾಲಿನಲ್ಲಿ ನಿಂತು ಸುಸ್ತಾಗಿರುವ ಜನರಲ್ಲಿ ಬ್ಯಾಂಕ್ ಅಧಿಕಾರಿಗಳು ಸಿಬ್ಬಂದಿ ಉದ್ಧಟವಾಗಿ, ಸರ್ವಾಧಿಕಾರಿಗಳಂತೆ ವರ್ತಿಸಿದರೆ ಅಥವಾ ಯಾವುದೇ ಕಾರಣವಿಲ್ಲದೆ ಹಣ ನೀಡಲು ನಿರಾಕರಿಸಿದರೆ ಅದರ ವಿರುದ್ಧ ಎಲ್ಲರೂ ಒಟ್ಟಾಗಿ ಮಾತನಾಡೋಣ. ಸಂತ್ರಸ್ತನನ್ನು ಒಬ್ಬಂಟಿಯಾಗದಂತೆ ನೋಡಿ ಕೊಳ್ಳೋಣ. 5. 
ಕಂಗಾಲಾಗಿರುವ ಪ್ರವಾಸಿಗರಿಗೆ ನಮ್ಮಲ್ಲಿರುವ ಒಂದೆರಡು ನೂರರ ನೋಟುಗಳನ್ನು ನೀಡಿ ಸಹಕರಿಸೋಣ. ಅಥವಾ ನಮಗೆ ಸಾಧ್ಯವಿದ್ದರೆ ಅವರಿಗೆ ನಮ್ಮ ನಮ್ಮ ಮನೆಯಲ್ಲಿ ಊಟ ವಸತಿ ಒದಗಿಸಿ ಕೊಡೋಣ. ಅವರ ಮುಂದಿನ ದಾರಿ ಸುಗಮವಾಗುವಂತೆ ನಮಗೆ ಸಾಧ್ಯವಾದ ನೆರವನ್ನು ನೀಡೋಣ. 6. ಬ್ಯಾಂಕ್ ಸಿಬ್ಬಂದಿಯೂ ನಮ್ಮಂತೆಯೇ ಮನುಷ್ಯರು ಎಂಬ ಪ್ರಜ್ಞೆಯನ್ನು ಇಟ್ಟುಕೊಂಡು ಅವರಲ್ಲಿ ವ್ಯವಹರಿಸೋಣ. ಅವರ ಸ್ಥಾನದಲ್ಲಿ ನಿಂತು ಕೆಲ ಹೊತ್ತು ಆಲೋಚಿಸೋಣ.
7. 
ನಮ್ಮ ಸ್ನೇಹಿತನ ಕಿಸೆಯಲ್ಲಿ ನೂರರ ನೋಟುಗಳು ಇವೆಯೇ ಎಂದು ವಿಚಾರಿಸೋಣ. ಕೆಲವೊಮ್ಮೆ ಅವರು ನೋಟುಗಳಿಲ್ಲದೆ ತೀರಾ ಸಂಕಷ್ಟಕ್ಕೆ ಸಿಲುಕಿರ ಬಹುದು. ಊಟ ಮಾಡದೇ ಇದ್ದಿರಬಹುದು. ಸಂಕೋಚದಿಂದ ನಮ್ಮೆಂದಿಗೆ ಹೇಳದೆ ಇದ್ದಿರಬಹುದು. 8.  
ದಿನ ಕೂಲಿ ನೌಕರರ ಸಂಕಟ ಹೇಳ ತೀರಲಾಗದಷ್ಟಿವೆ. ನಿಮ್ಮ ಅಕ್ಕ ಪಕ್ಕದ ದಿನ ಕೂಲಿ ನೌಕರರ ಮನೆಯ ಕಷ್ಟ ಸುಖ ವಿಚಾರಿಸುತ್ತಿರೋಣ. ಸಾಧ್ಯವಾದರೆ ಅವರಿಗೆ ಕೆಲವು ನೂರರ ನೋಟುಗಳನ್ನು ಸಾಲ ನೀಡೋಣ. ನಮ್ಮ ಮನೆಯಲ್ಲಿರುವ ಕೆಲವು ಆಹಾರ ಪದಾರ್ಥಗಳನ್ನೂ ಅವರ ಜೊತೆಗೆ ಹಂಚಿಕೊಳ್ಳಬಹುದು. 9. 
ಕಾರ್ಡ್ ಬಳಸುವ ಸಾಧ್ಯತೆಗಳಿರುವಲ್ಲಿ ವಿಲಾಸಿ ವಿಷಯಗಳಿಗಾಗಿ ನೂರರ ನೋಟುಗಳನ್ನು ಬಳಸದೆ ಇರೋಣ. ಮುಖ್ಯವಾಗಿ ಕುಡಿತದಂತಹ ದುಶ್ಚಟಗಳಿಗೆ ಈ ನೂರರ ನೋಟುಗಳನ್ನು ಬಳಸುವುದಿಲ್ಲ ಎಂಬ ಶಪಥ ಮಾಡೋಣ. ನೋಟುಗಳೇ ಇಲ್ಲದೆ ದಿನಸಿ ಕೊಳ್ಳಲಾಗದ ಸಹಸ್ರಾರು ಜನರನ್ನು ನಾವು ಒಂದು ಕ್ಷಣ ನೆನೆಯೋಣ. 10. 
ನಮ್ಮ ನೆರೆ ಹೊರೆಯ, ಬಂಧುಗಳ ಕಷ್ಟ ಸುಖಗಳನ್ನು ವಿಚಾರಿಸುತ್ತಾ ಇರೋಣ. ಒಂದಿಷ್ಟು ಬಿಡುವು ಮಾಡಿಕೊಂಡು ಹಣ ಡ್ರಾ ಮಾಡಲು ಸಾಧ್ಯವಾಗದವರಿಗೆ ನಾವು ನಮ್ಮ ಸಮಯವನ್ನು ನೀಡಬಹುದು. 11.  
ಸದ್ಯದ ಹಣ ವಿನಿಮಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಅಮಾಯಕರಿಗೆ ತಿಳಿಸೋಣ. ಬೇರೆಯವರಿಂದ ಮೋಸ ಹೋಗದಂತೆ ಅವರನ್ನು ರಕ್ಷಿಸೋಣ. 12.   
ನೂರರ ನೋಟುಗಳಿಂದ ನಾವು ದಿನ ನಿತ್ಯದ ವಸ್ತುಗಳನ್ನು ಕೊಳ್ಳುವವರಾದರೆ, ದಯವಿಟ್ಟು ಮಾಲ್ ಗಳಿಗೆ ಹೋಗೋದು ಬೇಡ. ಬದಲಿಗೆ ಸಣ್ಣ ಪುಟ್ಟ ತರಕಾರಿ ಅಂಗಡಿಗಳಿಗೇ ಹೋಗೋಣ. ಆ ಮೂಲಕ ಅವರ ತರಕಾರಿಯೂ ಕೆಡದೇ ಉಪಯೋಗಿಸಲ್ಪಡುತ್ತದೆ. ಜೊತೆಗೆ ಅವರ ಕುಟುಂಬಗಳಿಗೂ ಒಂದಿಷ್ಟು ನೂರರ ನೋಟುಗಳು ಸಿಕ್ಕಿದಂತಾಗುತ್ತದೆ. 13. 
ಹಳೆಯ ಐನೂರರ, ಸಾವಿರದ ನೋಟುಗಳನ್ನು ತೋರಿಸಿ ಮೀನು ಮಾರುವವರನ್ನು, ತರಕಾರಿ ಮಾರುವ ಹೆಂಗಸರನ್ನು ಬ್ಲಾಕ್ ಮೇಲ್ ಮಾಡದಿರೋಣ. ಪಾಪ, ಅವರು ತಮ್ಮ ಉಳಿದ ಮೀನು ಮುಗಿದು ಹೋಗಲಿ ಎಂದು ಅನಿವಾರ್ಯವಾಗಿ ಅದನ್ನು ತೆಗೆದು ಕೊಳ್ಳಬಹುದು. ಆದರೆ ಮರು ದಿನ ಅದನ್ನು ವಿನಿಮಯ ಮಾಡಬೇಕಾದರೆ ತಮ್ಮ ಅಂಗಡಿ ಮುಚ್ಚಿ ಬ್ಯಾಂಕಿನ ಮುಂದೆ ಅವರು ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. 14. ಸದ್ಯದ ವರ್ತಮಾನ ನಮ್ಮಿಂದ ಗರಿಷ್ಠ ಸಹನೆ, ತಾಳ್ಮೆ, ಕರುಣೆ ಮತ್ತು ಮಾನವೀಯತೆಯನ್ನು ಬೇಡುತ್ತಿದೆ. ನಮ್ಮಿಳಗಿನ ಮನುಷ್ಯತ್ವವನ್ನು ಉಜ್ಜಿ ನೋಡೋದಕ್ಕೆ ನಮಗಿದು ಸರಿಯಾದ ಸಮಯವಾಗಿದೆ. ದೇಶ ಎಂದರೆ ಜನ. ಜನರ ಸೇವೆಯೇ ದೇಶ ಸೇವೆ. ಅದನ್ನು ಒಬ್ಬ ಯೋಧನಂತೆ ನಿರ್ವಹಿಸುವ ಸಂದರ್ಭ ನಮಗೆ ಒದಗಿದೆ. ನಾವದನ್ನು ಪ್ರಾಮಾಣಿಕ ಮನಸ್ಸಿನಿಂದ ನಿರ್ವಹಿಸೋಣ.
   ಜೈ ಹಿಂದ್...

share
ವಾರ್ತಾಭಾರತಿ
ವಾರ್ತಾಭಾರತಿ
Next Story
X