Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರದ್ದಾದ ನೋಟು ಭರ್ತಿ ಮಾಡಲು 50...

ರದ್ದಾದ ನೋಟು ಭರ್ತಿ ಮಾಡಲು 50 ದಿನಗಳಲ್ಲಿ ನಿಜವಾಗಿ ಸಾಧ್ಯವೇ? ಇಲ್ಲವೇ?

ಇಲ್ಲಿದೆ ಉತ್ತರ ಹಾಗೂ ಕಾರಣ

ವಾರ್ತಾಭಾರತಿವಾರ್ತಾಭಾರತಿ15 Nov 2016 9:13 AM IST
share
ರದ್ದಾದ ನೋಟು ಭರ್ತಿ ಮಾಡಲು 50 ದಿನಗಳಲ್ಲಿ ನಿಜವಾಗಿ ಸಾಧ್ಯವೇ? ಇಲ್ಲವೇ?

ಹೊಸದಿಲ್ಲಿ,ನ.15: ನೋಟು ಚಲಾವಣೆ ರದ್ದತಿ ನಿರ್ಧಾರದ 50 ದಿನಗಳ ನೋವು ಸಹಿಸಿಕೊಳ್ಳುವಂತೆ ಮೋದಿ ಕೋರಿದ್ದಾರೆ. ಆದರೆ ಪ್ರಸ್ತುತ ವೇಗದಲ್ಲಿ ನೋಟುಗಳ ಬದಲಾವಣೆಯಾದರೆ, ಈ ಅವಧಿಯಲ್ಲಿ ಖಂಡಿತವಾಗಿಯಯೂ ನಗದು ವ್ಯವಸ್ಥೆ ಮಾಮೂಲಿ ಸ್ಥಿತಿಗೆ ಬರುವುದು ಸಾಧ್ಯವೇ ಇಲ್ಲ.

ಏಕೆಂದರೆ, ಹಣಕಾಸು ಸಚಿವಾಲಯ ಪ್ರಕಟಿಸಿದ ಅಂಕಿ ಅಂಶಗಳ ಪ್ರಕಾರ, ಅಕ್ಟೋಬರ್ ಕೊನೆಯ ವೇಳೆಗೆ ದೇಶದಲ್ಲಿ 17.50 ಲಕ್ಷ ಕೋಟಿ ಮೌಲ್ಯದ ಕರೆನ್ಸಿ ನೋಟುಗಳು ಚಲಾವಣೆಯಲ್ಲಿದ್ದವು. ಈ ಪೈಕಿ ಶೇಕಡ 84ರಷ್ಟು ಅಂದರೆ 14.50 ಲಕ್ಷ ಕೋಟಿ ನೋಟುಗಳು ಇದೀಗ ರದ್ದಿಯಾಗಿರುವ 500 ಹಾಗೂ 1000 ರೂಪಾಯಿ ನೋಟುಗಳು.

ರವಿವಾರ ಬಿಡುಗಡೆ ಮಾಡಿರುವ ಇನ್ನೊಂದು ಅಂಕಿ ಅಂಶಗಳ ಪ್ರಕಾರ, ನವೆಂಬರ್ 10ರಿಂದ 13ರ ನಡುವೆ ಅಂದರೆ ಮೊದಲ ನಾಲ್ಕು ದಿನಗಳಲ್ಲಿ 50 ಸಾವಿರ ಕೋಟಿ ರೂಪಾಯಿ ಮೌಲ್ಯದ 100 ರೂಪಾಯಿ ಹಾಗೂ 2000 ರೂಪಾಯಿ ನೋಟುಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. ಗ್ರಾಹಕರು ಇದನ್ನು ಬ್ಯಾಂಕ್ ಖಾತೆಯಿಂದ ಹಣ ಪಡೆಯುವ ಮೂಲಕ, ಎಟಿಎಂ ಮೂಲಕ ಅಥವಾ ಬ್ಯಾಂಕ್ ಹಾಗೂ ಅಂಚೆ ಕಚೇರಿ ಕೌಂಟರ್‌ಗಳ ಮೂಲಕ ವಿನಿಮಯ ಮಾಡಿಕೊಂಡಿದ್ದಾರೆ. 18 ಕೋಟಿ ವಹಿವಾಟುಗಳು ನಡೆದಿದ್ದು, ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಬಹುತೇಕ ಎಟಿಎಂಗಳಲ್ಲಿ ಬೆಳಗ್ಗೆ ನಿಲ್ಲುವ ಸರದಿ ಸಾಲು ಮುಗಿಯುವ ಮುನ್ನವೇ ನಗದು ಖಾಲಿಯಾಗುತ್ತದೆ.

ಬ್ಯಾಂಕುಗಳಿಗೆ ಸಾಕಷ್ಟು ನೋಟುಗಳನ್ನು ಸರಬರಾಜು ಮಾಡಲಾಗುತ್ತದೆ ಎಂಬ ಆರ್‌ಬಿಐ ಭರವಸೆಗೆ ಅನುಗುಣವಾಗಿ ವಹಿವಾಟು ಸಾಧ್ಯವಾಗುತ್ತಿಲ್ಲ. ಆರ್‌ಬಿಐ ಮುದ್ರಣಾಲಯಗಳು ಸಾಕಷ್ಟು ಮುಂಚಿತವಾಗಿಯೇ ನೋಟುಗಳ ಮುದ್ರಣ ಆರಂಭಿಸಿ, ದಾಸ್ತಾನು ಮಾಡಿಕೊಂಡಿದ್ದರೂ ವ್ಯವಸ್ಥೆ ಸರಿಹೋಗುತ್ತಿಲ್ಲ.

ದಿನಕ್ಕೆ 12500 ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ನೋಟುಗಳನ್ನು ಪ್ರತಿದಿನ ಸರಬರಾಜು ಮಾಡುತ್ತಿದ್ದರೂ, ಈಗ ರದ್ದಾಗಿರುವ ನೋಟುಗಳಷ್ಟು ಪ್ರಮಾಣದ ಹೊಸ ನೋಟುಗಳನ್ನು ವ್ಯವಸ್ಥೆಗೆ ಸರಬರಾಜು ಮಾಡಲು 116 ದಿನ ಬೇಕಾಗುತ್ತದೆ.

ನೋಟು ಚಲಾವಣೆ ರದ್ದತಿಯ ದುಷ್ಪರಿಣಾಮ ಹಾಗೂ ವ್ಯರ್ಥ ಪ್ರಯತ್ನದ ವಿರುದ್ಧ ನೇರ ತೆರಿಗೆ ವ್ಯವಸ್ಥೆ ನಾಲ್ಕು ದಿನಗಳ ಹಿಂದೆ ನೀಡಿರುವ ಎಚ್ಚರಿಕೆ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಕಾದು ನೊಡಬೇಕಾಗಿದೆ.

"ಕೇಂದ್ರೀಯ ನೇರ ತೆರಿಗೆ ಮಂಡಳಿಯ ಅಧ್ಯಕ್ಷ 2012ರಲ್ಲಿ ನೀಡಿದ್ದ, "ಭಾರತ ಹಾಗೂ ವಿದೇಶದಲ್ಲಿರುವ ಕಪ್ಪುಹಣ ತಡೆ ಕ್ರಮಗಳು" ಎಂಬ ವರದಿಯಲ್ಲಿ ಉಲ್ಲೇಖಿಸಿರುವ ಅಂಶವೆಂದರೆ, "ಎಲ್ಲ ಜನರ ಒಂದು ಸಾಮಾನ್ಯ ಆಗ್ರಹವೆಂದರೆ, ಕಪ್ಪುಹಣ ತಡೆಯಬೇಕಾದರೆ ಅಧಿಕ ಮೌಲ್ಯದ ಅಂದರೆ 1000 ರೂಪಾಯಿ 500 ರೂಪಾಯಿ ನೋಟುಗಳ ಚಲಾವಣೆ ರದ್ದುಪಡಿಸಬೇಕು"

"ಈ ಹಿನ್ನೆಲೆಯಲ್ಲಿ ನೋಟು ಚಲಾವಣೆ ರದ್ದತಿ ಕಪ್ಪುಹಣ ತಡೆಗೆ ಪರಿಹಾರವಾಗದು. ಏಕೆಂದರೆ ಇದರಲ್ಲಿ ಬಹುಪಾಲು ಬೇನಾಮಿ ಆಸ್ತಿ, ಚಿನ್ನ ಹಾಗೂ ಆಭರಣ ರೂಪದಲ್ಲಿದೆ" ಎಂದು 109 ಪುಟಗಳ ವರದಿಯಲ್ಲಿ ಸ್ಪಷ್ಟಪಡಿಸಲಾಗಿತ್ತು.

ಇದಕ್ಕಿಂತ ಹೆಚ್ಚಾಗಿ, ಇಂಥ ನಡೆ ಅಧಿಕ ಕರೆನ್ಸಿ ನೋಟುಗಳ ಮುದ್ರಣ ವೆಚ್ಚದ ಹೊರೆಯನ್ನೂ ಹೆಚ್ಚಿಸುತ್ತದೆ. ಇದು ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಅದರಲ್ಲೂ ಮುಖ್ಯವಾಗಿ ಸಾಗಾಣಿಕೆ ವಿಷಯದಲ್ಲಿ, ನಗದು ಸಾಗಾಣಿಕೆಯಲ್ಲಿ ವ್ಯತ್ಯಯ, ಜನರಿಗೆ ಅನನುಕೂಲ ಹಾಗೂ ವೇತನ ನೀಡಿಕೆಯಲ್ಲಿ ಏರುಪೇರಿಗೆ ಇದು ಕಾರಣವಾಗಲಿದೆ ಎಂದು ವರದಿ ಹೇಳಿತ್ತು.

"1946 ಹಾಗೂ 1978ರಲ್ಲಿ ಎರಡು ಬಾರಿ ನೋಟು ಚಲಾವಣೆ ರದ್ದು ಮಾಡಲಾಗಿತ್ತು. ಆದರೆ ಇವೆರಡೂ ವಿಫಲವಾಗಿವೆ. ಆಗ ಕೇವಲ ಶೇಕಡ 15ರಷ್ಟು ಮಾತ್ರ ಅಧಿಕ ಮೌಲ್ಯದ ನೋಟುಗಳು ವಿನಿಮಯವಾಗಿವೆ. ಶೇಕಡ 85ರಷ್ಟು ನೋಟುಗಳು ಬೆಳಕಿಗೇ ಬರಲಿಲ್ಲ. ಸರ್ಕಾರಿ ಏಜೆನ್ಸಿಗಳ ಕಾನೂನು ಕ್ರಮದ ಭೀತಿಯಿಂದ ಮಾಲಕರು ಇದನ್ನು ಬೆಳಕಿಗೇ ತರಲಿಲ್ಲ"

share
ವಾರ್ತಾಭಾರತಿ
ವಾರ್ತಾಭಾರತಿ
Next Story
X