ಪಂಚಾಯತ್ರಾಜ್ ಕಾಯ್ದೆಯಿಂದ ಅಧಿಕಾರ ವಿಕೇಂದ್ರಿಕರಣ: ಕೋಟ ಶ್ರೀನಿವಾಸ ಪೂಜಾರಿ
![ಪಂಚಾಯತ್ರಾಜ್ ಕಾಯ್ದೆಯಿಂದ ಅಧಿಕಾರ ವಿಕೇಂದ್ರಿಕರಣ: ಕೋಟ ಶ್ರೀನಿವಾಸ ಪೂಜಾರಿ ಪಂಚಾಯತ್ರಾಜ್ ಕಾಯ್ದೆಯಿಂದ ಅಧಿಕಾರ ವಿಕೇಂದ್ರಿಕರಣ: ಕೋಟ ಶ್ರೀನಿವಾಸ ಪೂಜಾರಿ](https://www.varthabharati.in/sites/default/files/images/articles/2016/11/15/UD-N15-KOTA.jpg)
ಉಡುಪಿ, ನ.15: ಅಧಿಕಾರ ವಿಕೇಂದ್ರೀಕರಣದ ಮೊದಲ ಹೆಜ್ಜೆ ಪಂಚಾಯತ್ ಸಬಲೀಕರಣದಿಂದ ಸಾಧ್ಯವಾಗಿದೆ. ಪಂಚಾಯತ್ರಾಜ್ ಕಾಯ್ದೆ ಜಾರಿ ಬಳಿಕ ನಾವು ಈ ನಿಟ್ಟಿನಲ್ಲಿ ಬಹಳಷ್ಟು ಮುಂದೆ ಸಾಗಿದ್ದೇವೆ ಎಂದು ವಿಧಾನಪರಿಷತ್ ಶಾಸಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯ ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮೋದ್ಯೋಗ ತರಬೇತಿ ಸಂಸ್ಥೆಯಲ್ಲಿ ಜನಶಿಕ್ಷಣ ಟ್ರಸ್ಟ್ ಆಯೋಜಿಸಿದ್ದ ಸುಗ್ರಾಮ- ಗ್ರಾಪಂ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘ- ಶಾಸಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಇಂದು ಮಾತನಾಡುತ್ತಿದ್ದರು.
ಪಂಚಾಯತ್ರಾಜ್ ಕಾಯ್ದೆಯಲ್ಲಿ ಮೀಸಲಾತಿ ಬಂದುದರಿಂದ ಮಹಿಳೆಯರು ಮತ್ತು ಹಿಂದುಳಿದವರು ಹತ್ತು ಹೆಜ್ಜೆಯಾದರೂ ಮುನ್ನಡೆಯಲು ಸಾಧ್ಯವಾಯಿತು ಎಂಬ ತಮ್ಮ ಅನುಭವವನ್ನು ಹಂಚಿಕೊಂಡರು. ವ್ಯವಸ್ಥೆಯಲ್ಲಿರುವ ಲೋಪಗಳ ಬಗ್ಗೆ ಸಾಕಷ್ಟು ದೂರುಗಳಿದ್ದರೂ ವ್ಯವಸ್ಥೆ ಮುಂದೆ ಸಾಗುತ್ತಿರುವುದು, ಅದರಲ್ಲೂ ದಕ್ಷಿಣ ಕನ್ನಡ, ಉಡುಪಿ ಇತರೆಡೆಗಳಿಗೆ ಹೋಲಿಸಿದರೆ ಉತ್ತಮವಾಗಿದೆ ಎಂದೂ ಅವರು ನುಡಿದರು.
ಪಂಚಾಯತ್ ವ್ಯವಸ್ಥೆಯಲ್ಲಿ ಮಹಿಳೆಯರು ಹೇಗೆ ತಮ್ಮ ಕಾರ್ಯ ನಿರ್ವಹಣೆಯನ್ನು ಉತ್ತಮ ಪಡಿಸಿಕೊಳ್ಳಬಹುದು ಎಂಬುದನ್ನು ವಿವರಿಸಿದ ಅವರು, ಚುನಾಯಿತ ಮಹಿಳಾ ಪ್ರತಿನಿಧಿಗಳ ಹಲವು ಸಮಸ್ಯೆಗಳಿಗೆ ಉತ್ತರಿಸಿದರು. ಜನಶಿಕ್ಷಣ ಸಂಸ್ಥೆ ನಿರ್ದೇಶಕ ಶೀನಶೆಟ್ಟಿ ಹಾಗೂ ಕೃಷ್ಣ ಮೂಲ್ಯ ಸಂವಾದದಲ್ಲಿ ಉಡುಪಿ ಸೋಲಾರ್ ಗ್ರಾಮ, ಘನತ್ಯಾಜ್ಯವಿಲೇ, ಎನ್ಆರ್ಇಜಿಗೆ ಉತ್ತಮ ಮಾದರಿ ನೀಡುವಲ್ಲಿ ಸುಗ್ರಾಮ ತನ್ನ ಕೊಡುಗೆ ನೀಡಬೇಕೆಂದು ಹೇಳಿದರು.