Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪ.ಬಂಗಾಲದ ಅತ್ಯಂತ ದೊಡ್ಡ ಹಣ್ಣುಹಂಪಲು...

ಪ.ಬಂಗಾಲದ ಅತ್ಯಂತ ದೊಡ್ಡ ಹಣ್ಣುಹಂಪಲು ಮಾರುಕಟ್ಟೆಯಲ್ಲಿ ದಿನದ ಕೂಳಿಗಾಗಿ ಪರದಾಡುತ್ತಿರುವ 15,000 ವಲಸಿಗ ಕಾರ್ಮಿಕರು

ವಾರ್ತಾಭಾರತಿವಾರ್ತಾಭಾರತಿ16 Nov 2016 4:34 PM IST
share
ಪ.ಬಂಗಾಲದ ಅತ್ಯಂತ ದೊಡ್ಡ ಹಣ್ಣುಹಂಪಲು ಮಾರುಕಟ್ಟೆಯಲ್ಲಿ ದಿನದ ಕೂಳಿಗಾಗಿ ಪರದಾಡುತ್ತಿರುವ 15,000 ವಲಸಿಗ ಕಾರ್ಮಿಕರು

 ಕೋಲ್ಕತಾ,ನ.16: ಪಶ್ಚಿಮ ಬಂಗಾಲದಲ್ಲಿಯೇ ಅತ್ಯಂತ ದೊಡ್ಡ ಹಣ್ಣುಹಂಪಲು ಮಾರುಕಟ್ಟೆಯಾಗಿರುವ ಇಲ್ಲಿಯ ಮೆಚುವಾ ಬಾಝಾರ್ ಫಲ್ ಮಂಡಿಯಲ್ಲಿ ಸಾಮಾನ್ಯ ದಿನಗಳಂದು ಹೆಚ್ಚಿನವರು ಬಿಹಾರಿಗಳೇ ಆಗಿರುವ ಸುಮಾರು 15,000 ದಿನಗೂಲಿ ಕಾರ್ಮಿಕರು 150ಕ್ಕೂ ಅಧಿಕ ಲಾರಿಗಳಿಗೆ ಹಣ್ಣುಗಳನ್ನು ತುಂಬಿಸುವ ಮೂಲಕ ದಿನದ ಕೂಳು ದುಡಿದುಕೊಳ್ಳುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ನೋಟು ನಿಷೇಧ ಕ್ರಮವನ್ನು ಘೋಷಿಸಿದಾಗಿನಿಂದ ಸದಾ ಗಿಜಿಗುಡುತ್ತಿರುವ ಈ ಮಾರುಕಟ್ಟೆಯನ್ನು ವಿಲಕ್ಷಣ ವೌನವು ಆವರಿಸಿಕೊಂಡಿದೆ. ಆಗಿನಿಂದಲೂ ಈ ಕಾರ್ಮಿಕರ ದಿನದ ಗಳಿಕೆಗೆ ಗ್ರಹಣ ಬಡಿದಿದೆ. ಹೆಚ್ಚಿನ ಕಾರ್ಮಿಕರಿಗೆ ಒಂದೇ ಒಂದು ಪೈಸೆಯನ್ನೂ ಗಳಿಸಲು ಸಾಧ್ಯವಾಗಿಲ್ಲ.

ನಾನು ದಿನಕ್ಕೆ ಏನಿಲ್ಲವೆಂದರೂ ನಾಲ್ಕೈದು ನೂರು ರೂ.ದುಡಿಯುತ್ತಿದ್ದೆ, ಈಗ ನನ್ನ ದುಡಿಮೆ 40 ರೂ.ಗಳನ್ನೂ ದಾಟುತ್ತಿಲ್ಲ. ಕಳೆದ ಐದು ದಿನಗಳಿಂದಲೂ ಈ ಬವಣೆ ಮುಂದುವರಿದಿದೆ. ಇನ್ನೆಷ್ಟು ದಿನ ನಾವು ಒದ್ದಾಡಬೇಕೋ ಗೊತ್ತಿಲ್ಲ ಎಂದು ಮೊಹಮ್ಮದ್ ಝುಬೈರ್ ನಿಡುಸುಯ್ದ. ಮೂಲತಃ ಬಿಹಾರದ ವೈಶಾಲಿಗಂಜ್ ನಿವಾಸಿಯಾಗಿರುವ ಈತ ಕಳೆದ ಹಲವಾರು ವರ್ಷಗಳಿಂದಲೂ ಮೆಚುವಾ ಬಝಾರ್‌ನಲ್ಲಿ ದುಡಿಯುತ್ತಿದ್ದಾನೆ.

ಈ ಮಾರುಕಟ್ಟೆಯಿಂದ ರಾಜ್ಯಾದ್ಯಂತ ಹಣ್ಣುಹಂಪಲುಗಳು ಪೂರೈಕೆಯಾಗುವ ಜೊತೆಗೆ, ಈಶಾನ್ಯ ರಾಜ್ಯಗಳು ಮತ್ತು ಬಾಂಗ್ಲಾದೇಶಕ್ಕೂ ರವಾನೆಯಾಗುತ್ತವೆ. ಹಳೆಯ ನೋಟುಗಳ ವಿನಿಮಯಕ್ಕೆ ಬ್ಯಾಂಕುಗಳಲ್ಲಿ ಅವಕಾಶವಿದ್ದರೂ,ಸಣ್ಣ ಮುಖಬೆಲೆಯ ನೋಟುಗಳ ಕೊರತೆಯಿಂದಾಗಿ ನಾಗರಿಕರು ತಮ್ಮ ಖರೀದಿಗಳನ್ನೇ ಮೊಟಕು ಗೊಳಿಸಿದ್ದಾರೆ.

ಮೊಹಮ್ಮದ್ ಶಬೀರ್ ತನ್ನ ಪತ್ನಿ ಮತ್ತು ಮೂರರ ಹರೆಯದ ಪುತ್ರಿಯೊಂದಿಗೆ ವಾಸವಾಗಿರುವ ಮೆಚುವಾದ ಪುಟ್ಟಮನೆಯಲ್ಲಿಯ ಕಪಾಟಿನ ಮೂಲೆಯಲ್ಲಿ 500 ರೂ.ಗಳ ಎರಡು ಹಳೆಯ ನೋಟುಗಳು ಧೂಳು ತಿನ್ನುತ್ತಿವೆ, ಆದರೆ ಮನೆಯಲ್ಲಿ ಒಂದು ತುತ್ತೂ ಕೂಳು ಇಲ್ಲ. ಕೆಲವು ದಿನಗಳ ಹಿಂದೆ ಎರಡು 500 ರೂ.ನೋಟುಗಳನ್ನು ತಲಾ 350 ರೂ.ನಂತೆ ಮಾರಾಟ ಮಾಡಿ ಬಿಹಾರದ ಸ್ವಗ್ರಾಮದಲ್ಲಿರುವ ಹೆತ್ತವರಿಗೆ ಕಳುಹಿಸಿದ್ದ. ಶಬೀರ್ ನೋಟು ವಿನಿಮಯಿಸಿಕೊಳ್ಳಲು ಮೂರು ಸಲ ಬ್ಯಾಂಕಿಗೆ ತೆರಳಿದ್ದ. ಆದರೆ ಗುರುತು ಚೀಟಿಯಿಲ್ಲದ್ದರಿಂದ ಖಾಲಿ ಕೈಯಲ್ಲಿ ವಾಪಸಾಗಿದ್ದಾನೆ. ಸಗಟು ಹಣ್ಣು ಮಾರಾಟಗಾರರು ಹಳೆಯ ನೋಟುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿರುವುದರಿಂದ ಹಣ್ಣುಗಳ ಖರೀದಿ ಸಾಧ್ಯವಾಗದೆ ಆತ ಹಣ್ಣುಗಳ ಮಾರಾಟವನ್ನೂ ನಿಲ್ಲಿಸಿದ್ದಾನೆ. ಮಾರುಕಟ್ಟೆಯಂತೂ ತಳ ಕಂಡಿದೆ. ಕಳೆದ ಐದು ದಿನಗಳಿಂದ ಒಂದೇ ಒಂದು ಪೈಸೆಯನ್ನೂ ದುಡಿಯಲಾಗಿಲ್ಲ. ಕುಟುಂಬದ ತುತ್ತಿನ ಚೀಲಗಳನ್ನು ತುಂಬುವುದು ಹೇಗೆ ಎನ್ನುವುದು ಅವನಿಗೆ ಗೊತ್ತಾಗುತ್ತಿಲ್ಲ. ಕೆಲವರು ನೋಟುಗಳನ್ನು ಕಡಿಮೆ ಹಣಕ್ಕೆ ಖರೀದಿಸುತ್ತಾರಾದರೂ ಅದರಿಂದ ನಷ್ಟವಾಗುತ್ತದೆ. ‘‘ಸರಕಾರವು ಇದನ್ನೇ ಬಯಸು ತ್ತಿದೆಯೇ ’’ ಎನ್ನುವುದು ಶಬೀರ್‌ನ ಪ್ರಶ್ನೆ.

ಬಿಹಾರದ ನಾವಡಾ ಜಿಲ್ಲೆಯ ನಿವಾಸಿಯಾಗಿರುವ ಶಬೀರ್‌ಗೆ ಸರಕಾರವು ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಕ್ರಮವನ್ನು ಕೈಗೊಂಡಿದೆ ಎಂದು ತಿಳಿದಾಗ ಇತರ ಹಲವರಂತೆ ಈತನಿಗೂ ಖುಷಿಯಾಗಿತ್ತು. ಆದರೆ ತನ್ನ ಕುಟುಂಬಕ್ಕೆ ಮುಂದಿನ ಊಟ ಎಂದು ದೊರೆಯಲಿದೆ ಎಂಬ ಅನಿಶ್ಚಿತತೆ ಸರಕಾರದ ಕ್ರಮವನ್ನು ಪ್ರಶ್ನಿಸುವಂತೆ ಮಾಡಿದೆ.

ಈ ಮಾರುಕಟ್ಟೆಯಲ್ಲಿ ದುಡಿಯುವ ಹೆಚ್ಚಿನ ಕಾರ್ಮಿಕರದ್ದೂ ಇದೇ ಕಥೆ. ಬಿಹಾರದಿಂದ ವಲಸೆ ಬಂದಿರುವ ಇವರಿಗೆ ಕಾಯಂ ವಿಳಾಸವಿಲ್ಲ,ಹೀಗಾಗಿ ಗುರುತು ಚೀಟಿಯೂ ಇಲ್ಲ. ತಾವು ಕಷ್ಟಪಟ್ಟು ದುಡಿದ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆಯೇ ಎಂಬ ಕಳವಳ ಅವರನ್ನು ಕಾಡುತ್ತಿದೆ.

ನೂರಾರು ಹಮಾಲಿಗಳು,ಮಾರಾಟಗಾರರು,ಹರಾಜುದಾರರು......ಎಲ್ಲರದೂ ಒಂದೇ ಕಥೆ. ಕೈಯಲ್ಲಿ ಹಣವಿಲ್ಲ.ಹಳೆಯ ನೋಟುಗಳನ್ನು ವಿನಿಮಯಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕುಟುಂಬಗಳನ್ನು ಸಾಕುವುದಾದರೂ ಹೇಗೆ ಎಂಬ ಚಿಂತೆಯಿಂದ ಇವರೆಲ್ಲ ಹೈರಾಣಾಗಿದ್ದಾರೆ.

  ಭಾರತದಲ್ಲಿ ಶೇ.40ರಷ್ಟು ಜನರು ನಗದು ವ್ಯವಹಾರ ಮಾಡುತ್ತಾರೆ. ಕಾರ್ಮಿಕರು ಚೆಕ್‌ಗಳನ್ನು ಸ್ವೀಕರಿಸುವುದಿಲ್ಲ. ಶೇ.70ರಷ್ಟು ಸಗಟು ಮಾರುಕಟ್ಟೆ ನಗದು ಹಣದ ಬಲದ ಮೇಲೆಯೇ ನಡೆಯುತ್ತದೆ. ನಮ್ಮದು ನಗದು ಚಾಲಿತ ಆರ್ಥಿಕತೆಯಾಗಿದೆ. ಒಂದು ಅಥವಾ ಎರಡು ದಿನಗಳಲ್ಲಿ ಇಡೀ ವ್ಯವಸ್ಥೆಯನ್ನು ಬದಲಿಸಲು ಸಾಧ್ಯವಿಲ್ಲ ಎಂದು ಹಣ್ಣಿನ ವ್ಯಾಪಾರಿಯೋರ್ವರು ಹೇಳಿದರು. ಅವರ ಮಾತಿನಲ್ಲಿ ಸತ್ಯವಿದೆ ಎಂದೆನಿಸುವುದಿಲ್ಲವೇ?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X