‘ಮಕ್ಕಳ ಆರೈಕೆ, ರಕ್ಷಣೆ ಇಂದಿನ ಅಗತ್ಯ’
![‘ಮಕ್ಕಳ ಆರೈಕೆ, ರಕ್ಷಣೆ ಇಂದಿನ ಅಗತ್ಯ’ ‘ಮಕ್ಕಳ ಆರೈಕೆ, ರಕ್ಷಣೆ ಇಂದಿನ ಅಗತ್ಯ’](https://www.varthabharati.in/sites/default/files/images/articles/2016/11/19/UD-N17 BALIGA.jpg)
ಉಡುಪಿ, ನ.18: ದೊಡ್ಡಣಗುಡ್ಡೆ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಆಶ್ರಯದಲ್ಲಿ ಆಸ್ಪತ್ರೆಯ ಮಕ್ಕಳ ಮಾರ್ಗದರ್ಶನ ಕೇಂದ್ರದ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಆಸ್ಪತ್ರೆಯ ಕಮಲ್ ಎ.ಬಾಳಿಗಾ ಹಾಲ್ನಲ್ಲಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ತೋರ್ವಿ ಉದ್ಘಾಟಿಸಿದರು. ಕೆನರಾ ಬ್ಯಾಂಕ್ನ ನಿವೃತ್ತ ಪ್ರಬಂಧಕಿ ಮೀನಾಕ್ಷಿ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಕ್ಕಳ ತಜ್ಞ ಡಾ. ವೇಣುಗೋಪಾಲ್ ಮಾತನಾಡಿದರು. ಈ ಸಂದರ್ಭದಲ್ಲಿ ಇಬ್ಬರು ಪೌರ ಕಾರ್ಮಿಕ ಮಹಿಳೆಯರನ್ನು ಸನ್ಮಾನಿಸಲಾಯಿತು.
ಆಸ್ಪತ್ರೆಯ ಮನೋ ಸಾಮಾಜಿಕ ಕಾರ್ಯ ಕರ್ತೆ ಕೆ.ಎಸ್.ಲತಾ, ಆಡಳಿತಾಧಿಕಾರಿ ಸೌಜನ್ಯಾ ಶೆಟ್ಟಿ ಉಪಸ್ಥಿತರಿದ್ದರು. ಮನೋ ವೈದ್ಯ ಡಾ. ವಿರೂಪಾಕ್ಷ ದೇವರಮನೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೌಮ್ಯಾ ವರದಿ ವಾಚಿಸಿದರು. ನೆಲೀಶಾ ವಂದಿಸಿದರು. ವಿಜೇತಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಕ್ಕಳಿಂದ ಪ್ರತಿಭಾ ಪ್ರದರ್ಶನ, ಮನಶಾಸ್ತ್ರಜ್ಞ ಮಹೇಶ್ ಬಿ.ಎಸ್. ಅವರಿಂದ ಮಕ್ಕಳಿಗಾಗಿ ಜಾದೂ ಕಾರ್ಯಕ್ರಮ, ವೈವಿಧ್ಯಮಯ ಕರಕುಶಲ ತರಬೇತಿ ಹಾಗೂ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಯಿತು.