ನೋಟು ಅಮಾನ್ಯ: ಕೇಂದ್ರ ಸರಕಾರದ ತೀರ್ಮಾನಕ್ಕೆ ಪೂಜಾರಿ ಏನು ಹೇಳ್ತಾರೆ?
![ನೋಟು ಅಮಾನ್ಯ: ಕೇಂದ್ರ ಸರಕಾರದ ತೀರ್ಮಾನಕ್ಕೆ ಪೂಜಾರಿ ಏನು ಹೇಳ್ತಾರೆ? ನೋಟು ಅಮಾನ್ಯ: ಕೇಂದ್ರ ಸರಕಾರದ ತೀರ್ಮಾನಕ್ಕೆ ಪೂಜಾರಿ ಏನು ಹೇಳ್ತಾರೆ?](https://www.varthabharati.in/sites/default/files/images/articles/2016/11/19/Poojary.gif)
ಮಂಗಳೂರು, ನ.19: ದೇಶದಲ್ಲಿ ಈ ಹಿಂದೆಯೂ ನೋಟನ್ನು ಸರಕಾರ ಅಮಾನ್ಯ ಮಾಡಿದ ಘಟನೆ ಆಗಿದೆ. ಆದರೆ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಸುಪ್ರೀಂ ಕೋರ್ಟ್ ಹೇಳಿದಂತೆ ಜನರು ದಂಗೆ ಏಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವೃದ್ಧರು, ಮಹಿಳೆಯರು, ಅಶಕ್ತರು ನೋಟಿಗಾಗಿ ಪರದಾಟ ಪಡುತ್ತಿದ್ದಾರೆ. ಬ್ಯಾಂಕ್ನ ಬಳಿ ಹೋದರೆ ಹಣ ಇಲ್ಲದೆ ಬರುತ್ತಿದ್ದಾರೆ. ಎಟಿಎಂ ಮುಂದೆ ಜನರು ಸಾಲಿನಲ್ಲಿ ನಿಂತಿದ್ದಾರೆ. ಇದಕ್ಕೆ ಮೋದಿ ನೇತೃತ್ವದ ಸರಕಾರದ ಅನುಭವದ ಕೊರತೆ ಕಾರಣ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅಭಿಪ್ರಾಯಿಸಿದ್ದಾರೆ.
ಜೆಪ್ಪು ಸೆಮಿನರಿಯ ಪ್ರಶಾಂತಿ ನಿಲಯದಲ್ಲಿ ಇಂದಿರಾ ಗಾಂಧಿ ಜನ್ಮ ಜಯಂತಿಯನ್ನು ಆಚರಿಸಲು ಆಗಮಿಸಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ತಾಯಿಯನ್ನು ಕ್ಯೂನಲ್ಲಿ ನಿಲ್ಲಿಸಿದ ಮೋದಿಯವರ ಬಳಿ 500 ರೂ. ನೋಟಿಲ್ಲವೇ? ಅವರೇಕೆ ಕ್ಯೂನಲ್ಲಿ ನಿಲ್ಲುವುದಿಲ್ಲ ಎಂದು ಪ್ರಶ್ನಿಸಿದರು.
ಸಚಿವರು, ಶಾಸಕರು ಬರಗಾಲಕ್ಕಾಗಿ ತಮ್ಮ ವೇತನವನ್ನು ನೀಡಲಿ
ಸಚಿವರು, ಶಾಸಕರು ಬರಗಾಲಕ್ಕಾಗಿ ತಮ್ಮ ವೇತನವನ್ನು ನೀಡಲಿ. ಆ ಮೂಲಕ ರಾಜ್ಯದ ಬರಗಾಲ ಪರಿಸ್ಥಿತಿಯನ್ನು ಎದುರಿಸುತ್ತಿರುವ ಜನರಿಗೆ ನೆರವಾಗಬೇಕಾಗಿದೆ. ಈ ಸಂದರ್ಭದಲ್ಲಿ ಆಡಂಭರದ ಕಾರ್ಯಕ್ರಮ ಸಲ್ಲದು. ದ.ಕ. ಜಿಲ್ಲಾ ಕಾಂಗ್ರೆಸ್ ಮೂಲಕ ಹಮ್ಮಿಕೊಂಡ ಬೃಹತ್ ಸಮಾವೇಶದಲ್ಲಿ ಈ ಹಿಂದೆ ನಿರ್ಧರಿಸಿದಂತೆ ತಾನು ಭಾಗವಹಿಸುವುದಿಲ್ಲ ಎಂದು ಜನಾರ್ದನ ಪೂಜಾರಿ ಹೇಳಿದರು.