Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ದ್ವಿತೀಯ ಟೆಸ್ಟ್: ಆಂಗ್ಲರ ಗೆಲುವಿಗೆ...

ದ್ವಿತೀಯ ಟೆಸ್ಟ್: ಆಂಗ್ಲರ ಗೆಲುವಿಗೆ ಕಠಿಣ ಸವಾಲು

ಇಂಗ್ಲೆಂಡ್ 87/2, ಅಲಿಸ್ಟರ್ ಕುಕ್ ಅರ್ಧಶತಕ

ವಾರ್ತಾಭಾರತಿವಾರ್ತಾಭಾರತಿ20 Nov 2016 11:17 PM IST
share
ದ್ವಿತೀಯ ಟೆಸ್ಟ್: ಆಂಗ್ಲರ ಗೆಲುವಿಗೆ ಕಠಿಣ ಸವಾಲು

ವಿಶಾಖಪಟ್ಟಣ, ನ.20: ಬಂದರು ನಗರಿಯಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ವಿರುದ್ಧ ಗೆಲುವಿಗೆ ಕಠಿಣ ಸವಾಲು ಪಡೆದಿರುವ ಇಂಗ್ಲೆಂಡ್ ತಂಡ ನಾಲ್ಕನೆ ದಿನದಾಟದಂತ್ಯಕ್ಕೆ 87 ರನ್‌ಗೆ 2 ವಿಕೆಟ್ ಕಳೆದುಕೊಂಡಿದೆ.

ರವಿವಾರ ನಾಲ್ಕನೆ ದಿನದಾಟದ ಕೊನೆಯ ಓವರ್‌ನ 2ನೆ ಎಸೆತದಲ್ಲಿ ಸ್ಪಿನ್ನರ್ ರವೀಂದ್ರ ಜಡೇಜ ಇಂಗ್ಲೆಂಡ್ ನಾಯಕ ಅಲಿಸ್ಟರ್ ಕುಕ್(54 ರನ್, 188 ಎಸೆತ, 4 ಬೌಂಡರಿ) ವಿಕೆಟ್ ಕಬಳಿಸಿ ಭಾರತಕ್ಕೆ ಮೇಲುಗೈ ಒದಗಿಸಿದರು.

  ಗೆಲ್ಲಲು 405 ರನ್ ಗುರಿ ಪಡೆದ ಇಂಗ್ಲೆಂಡ್‌ಗೆ ಕುಕ್ ಹಾಗೂ ಹಮೀದ್(25 ರನ್) ಮೊದಲ ವಿಕೆಟ್‌ಗೆ 75 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ರಾಜ್‌ಕೋಟ್ ಟೆಸ್ಟ್‌ನ ಎರಡನೆ ಇನಿಂಗ್ಸ್‌ನಲ್ಲಿ 82 ರನ್ ಗಳಿಸಿದ್ದ ಯುವ ಬ್ಯಾಟ್ಸ್‌ಮನ್ ಹಮೀದ್ 144 ಎಸೆತ ಎದುರಿಸಿ 3 ಬೌಂಡರಿ ಸಹಿತ 25 ರನ್ ಗಳಿಸಿದರು. ಆರ್.ಅಶ್ವಿನ್ ಅವರು ಹಮೀದ್‌ರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.

ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಕುಕ್ 172 ಎಸೆತಗಳಲ್ಲಿ 53ನೆ ಅರ್ಧಶತಕ ಬಾರಿಸಿದರು. ಆದರೆ ಕುಕ್ ದಿನದ ಕೊನೆಯ ಎಸೆತದಲ್ಲಿ ಜಡೇಜಗೆ ಔಟಾದರು. ಜೋ ರೂಟ್(ಅಜೇಯ 05) ಕ್ರೀಸ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್‌ಗೆ ಕೊನೆಯ ದಿನವಾದ ಸೋಮವಾರ ಉಳಿದ 8 ವಿಕೆಟ್‌ಗಳ ನೆರವಿನಿಂದ ಇನ್ನೂ 318 ರನ್ ಗಳಿಸಬೇಕಾಗಿದೆ. ಇಂಗ್ಲೆಂಡ್‌ಗೆ ಪಂದ್ಯ ಡ್ರಾ ಮಾಡಿಕೊಳ್ಳುವ ಅವಕಾಶವೂ ಮುಕ್ತವಾಗಿದೆ.

 ಭಾರತ ಕೊನೆಯ ದಿನದಾಟದಲ್ಲಿ ಇಂಗ್ಲೆಂಡ್‌ನ ಉಳಿದ 8 ವಿಕೆಟ್‌ಗಳನ್ನು ಕಬಳಿಸಿ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸುವ ವಿಶ್ವಾಸದಲ್ಲಿದೆ.

 ಭಾರತ 204: ಇದಕ್ಕೆ ಮೊದಲು ಅತ್ಯುತ್ತಮ ದಾಳಿ ಸಂಘಟಿಸಿದ ಇಂಗ್ಲೆಂಡ್‌ನ ವೇಗಿ ಸ್ಟುವರ್ಟ್ ಬ್ರಾಡ್(4-33) ಹಾಗೂ ಸ್ಪಿನ್ನರ್ ಆದಿಲ್ ರಶೀದ್(4-82) ಭಾರತವನ್ನು ಎರಡನೆ ಇನಿಂಗ್ಸ್‌ನಲ್ಲಿ 204 ರನ್‌ಗೆ ಆಲೌಟ್ ಮಾಡಿದರು.

3 ವಿಕೆಟ್‌ಗಳ ನಷ್ಟಕ್ಕೆ 98 ರನ್‌ನಿಂದ 2ನೆ ಇನಿಂಗ್ಸ್ ಮುಂದುವರಿಸಿದ ಭಾರತ 87 ರನ್ ಗಳಿಸುವಷ್ಟರಲ್ಲಿ ಕೊನೆಯ 7 ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಯಕ ವಿರಾಟ್‌ಕೊಹ್ಲಿ ಸರ್ವಾಧಿಕ ರನ್(81) ಗಳಿಸಿದರು.

ಕೊನೆಯ ವಿಕೆಟ್‌ಗೆ ಉಪಯುಕ್ತ 42 ರನ್ ಜೊತೆಯಾಟ ನಡೆಸಿದ ಜಯಂತ್ ಯಾದವ್(ಅಜೇಯ 27) ಹಾಗೂ ಮುಹಮ್ಮದ್ ಶಮಿ(19) ಭಾರತ ತಂಡ ಇಂಗ್ಲೆಂಡ್‌ಗೆ 405 ರನ್ ಗುರಿ ನಿಗದಿಪಡಿಸಲು ನೆರವಾದರು.

ರವಿವಾರ 2ನೆ ಇನಿಂಗ್ಸ್ ಆರಂಭಿಸಿದ ನಾಯಕ ವಿರಾಟ್ ಕೊಹ್ಲಿ(81) ಹಾಗೂ ಅಜಿಂಕ್ಯ ರಹಾನೆ (26) ಜೋಡಿಯನ್ನು ಬೇಗನೆ ಬೇರ್ಪಡಿಸಲು ಬ್ರಾಡ್ ಯಶಸ್ವಿಯಾದರು. ರಹಾನೆ ನಿನ್ನೆಯ ಸ್ಕೋರ್‌ಗೆ ಕೇವಲ 4 ರನ್ ಸೇರಿಸಿ ವಿಕೆಟ್ ಒಪ್ಪಿಸಿದರು. ಕೊಹ್ಲಿ ಹಾಗೂ ರಹಾನೆ 4ನೆ ವಿಕೆಟ್‌ಗೆ 77 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾಗಿದ್ದರು. ಇದು ಭಾರತ 2ನೆ ಇನಿಂಗ್ಸ್‌ನಲ್ಲಿ ದಾಖಲಿಸಿದ ಗರಿಷ್ಠ ಜೊತೆಯಾಟವಾಗಿದೆ.

 ರಹಾನೆ ಔಟಾದ ಬೆನ್ನಿಗೆ ಆರ್.ಅಶ್ವಿನ್(7) ಬ್ರಾಡ್‌ಗೆ ವಿಕೆಟ್ ಒಪ್ಪಿಸಿದರು. ವೃದ್ದಿಮಾನ್ ಸಹಾ ಹಾಗೂ ರವೀಂದ್ರ ಜಡೇಜರನ್ನು ರಶೀದ್ ಪೆವಿಲಿಯನ್‌ಗೆ ಕಳುಹಿಸಿದರು. 109 ಎಸೆತಗಳಲ್ಲಿ 8 ಬೌಂಡರಿಗಳ ಸಹಿತ 81 ರನ್ ಗಳಿಸಿದ್ದ ಕೊಹ್ಲಿಗೆ ರಶೀದ್ ಶತಕವನ್ನು ನಿರಾಕರಿಸಿದರು.

ಉಮೇಶ್ ಯಾದವ್ ಶೂನ್ಯಕ್ಕೆ ಔಟಾದಾಗ ಭಾರತಕ್ಕೆ 400ಕ್ಕೂ ಅಧಿಕ ಮುನ್ನಡೆ ಸಾಧಿಸಲು 38 ರನ್ ಅಗತ್ಯವಿತ್ತು. ಆಗ 10ನೆ ವಿಕೆಟ್‌ಗೆ 42 ರನ್ ಸೇರಿಸಿದ ಜಯಂತ್ ಯಾದವ್(ಅಜೇಯ 27) ಹಾಗೂ ಮುಹಮ್ಮದ್ ಶಮಿ(19) ಇಂಗ್ಲೆಂಡ್ ಗೆಲುವಿಗೆ 405 ರನ್ ನಿಗದಿಪಡಿಸಲು ಕಾರಣರಾದರು.

ಸ್ಕೋರ್ ವಿವರ

ಭಾರತ ಪ್ರಥಮ ಇನಿಂಗ್ಸ್:

129.4 ಓವರ್‌ಗಳಲ್ಲಿ 455

ಇಂಗ್ಲೆಂಡ್ ಪ್ರಥಮ ಇನಿಂಗ್ಸ್: 102.5 ಓವರ್‌ಗಳಲ್ಲಿ 255

ಭಾರತ ದ್ವಿತೀಯ ಇನಿಂಗ್ಸ್: 63.1 ಓವರ್‌ಗಳಲ್ಲಿ 204 ರನ್

ಮುರಳಿ ವಿಜಯ್ ಸಿ ರೂಟ್ ಬಿ ಬ್ರಾಡ್ 03

ಕೆಎಲ್ ರಾಹುಲ್ ಸಿ ಬೈರ್‌ಸ್ಟೋವ್ ಬಿ ಬ್ರಾಡ್ 10

ಪೂಜಾರ ಬಿ ಆ್ಯಂಡರ್ಸನ್ 01

ವಿರಾಟ್ ಕೊಹ್ಲಿ ಸಿ ಸ್ಟೋಕ್ಸ್ ಬಿ ರಶೀದ್ 81

ಅಜಿಂಕ್ಯ ರಹಾನೆ ಸಿ ಕುಕ್ ಬಿ ಬ್ರಾಡ್ 26

ಆರ್.ಅಶ್ವಿನ್ ಸಿ ಬೈರ್‌ಸ್ಟೋವ್ ಬಿ ಬ್ರಾಡ್ 07

ವೃದ್ದಿಮಾನ್ ಸಹಾ ಎಲ್‌ಬಿಡಬ್ಲ್ಯು ರಶೀದ್ 02

ರವೀಂದ್ರ ಜಡೇಜ ಸಿ ಅಲಿ ಬಿ ರಶೀದ್ 14

ಜಯಂತ್ ಯಾದವ್ ಅಜೇಯ 27

ಉಮೇಶ್ ಯಾದವ್ ಸಿ ಬೈರ್‌ಸ್ಟೋವ್ ಬಿ ರಶೀದ್ 00

ಶಮಿ ಸ್ಟಂ. ಬೈರ್‌ಸ್ಟೋವ್ ಬಿ ಅಲಿ 19

ಇತರ 14

ವಿಕೆಟ್ ಪತನ: 1-16, 2-17, 3-40, 4-117, 5-127, 6-130,7-151, 8-162, 9-162, 10-204.

ಬೌಲಿಂಗ್ ವಿವರ:

ಜೇಮ್ಸ್ ಆ್ಯಂಡರ್ಸನ್ 15-3-33-1

ಸ್ಟುವರ್ಟ್ ಬ್ರಾಡ್ 14-5-33-4

ರಶೀದ್ 24-3-82-4

ಸ್ಟೋಕ್ಸ್ 7-0-34-0

ಮೊಯಿನ್ ಅಲಿ 3.1-1-9-1.

ಇಂಗ್ಲೆಂಡ್ ಎರಡನೆ ಇನಿಂಗ್ಸ್: 59.2 ಓವರ್‌ಗಳಲ್ಲಿ 87/2

ಅಲಿಸ್ಟರ್ ಕುಕ್ ಎಲ್‌ಬಿಡಬ್ಲು ಬಿ ಜಡೇಜ 54

ಹಮೀದ್ ಎಲ್‌ಬಿಡಬ್ಲು ಅಶ್ವಿನ್ 25

ರೂಟ್ ಅಜೇಯ 05

ಇತರ 03

ವಿಕೆಟ್‌ಪತನ: 1-75, 2-87

ಬೌಲಿಂಗ್ ವಿವರ:

ಮುಹಮ್ಮದ್ ಶಮಿ 9-2-16-0

ಉಮೇಶ್ ಯಾದವ್ 8-3-8-0

ಆರ್.ಅಶ್ವಿನ್ 16-5-28-1

ಜಡೇಜ 22.2-8-25-1

ಜಯಂತ್ ಯಾದವ್ 4-1-7-0

ಅಂಕಿ-ಅಂಶ

 248: ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ 2ನೆ ಟೆಸ್ಟ್ ಪಂದ್ಯದಲ್ಲಿ ಒಟ್ಟು 248 ರನ್ ಗಳಿಸಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 167 ರನ್ ಹಾಗೂ ಎರಡನೆ ಇನಿಂಗ್ಸ್‌ನಲ್ಲಿ 81 ರನ್ ಕಲೆ ಹಾಕಿದ್ದಾರೆ. ಭಾರತ ನಾಯಕನೊಬ್ಬ ಟೆಸ್ಟ್ ಪಂದ್ಯವೊಂದರಲ್ಲಿ ಗರಿಷ್ಠ ರನ್ ಗಳಿಸಿದ್ದು ಇದು 3ನೆ ಬಾರಿ. 1978-79ರ ಸ್ವದೇಶಿ ಸರಣಿಯಲ್ಲಿ ಸುನೀಲ್ ಗವಾಸ್ಕರ್ ವೆಸ್ಟ್‌ಇಂಡೀಸ್ ವಿರುದ್ಧ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. ಕೊಹ್ಲಿ ಕೆಲವು ವರ್ಷಗಳ ಹಿಂದೆ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ 256 ರನ್ ಗಳಿಸಿದ್ದರು.

 2: ವಿದೇಶಿ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳು 2000ರ ಬಳಿಕ ಎರಡನೆ ಬಾರಿ ಭಾರತ ವಿರುದ್ಧ 2ನೆ ಇನಿಂಗ್ಸ್‌ನಲ್ಲಿ 50ಕ್ಕೂ ಅಧಿಕ ರನ್ ಜೊತೆಯಾಟ ನಡೆಸಿದ್ದಾರೆ. ರಾಜ್‌ಕೋಟ್ ಟೆಸ್ಟ್‌ನ 2ನೆ ಇನಿಂಗ್ಸ್‌ನಲ್ಲಿ ಮೊದಲ ವಿಕೆಟ್‌ಗೆ 180 ರನ್ ಸೇರಿಸಿದ್ದ ಅಲಿಸ್ಟರ್ ಕುಕ್ ಹಾಗೂ ಹಸೀಬ್ ಹಮೀದ್, ರವಿವಾರ ನಡೆದ 2ನೆ ಟೆಸ್ಟ್‌ನ 2ನೆ ಇನಿಂಗ್ಸ್‌ನಲ್ಲಿ ಮೊದಲ ವಿಕೆಟ್‌ಗೆ 75 ರನ್ ಸೇರಿಸಿದರು.

11: ಅಲಿಸ್ಟರ್‌ಕುಕ್ ಟೆಸ್ಟ್‌ನ ನಾಲ್ಕನೆ ಇನಿಂಗ್ಸ್‌ನಲ್ಲಿ 11ನೆ ಬಾರಿ ಅರ್ಧಶತಕ ಬಾರಿಸಿದರು. ವಿಶ್ವದ ಇತರ ನಾಲ್ವರು ಬ್ಯಾಟ್ಸ್‌ಮನ್‌ಗಳಾದ ಶಿವನಾರಾಯಣ್ ಚಂದರ್‌ಪಾಲ್, ಕ್ರಿಸ್ ಗೇಲ್, ಗ್ರೇಮ್ ಸ್ಮಿತ್(ತಲಾ 13) ಹಾಗೂ ಗವಾಸ್ಕರ್(12) ಗರಿಷ್ಠ ಬಾರಿ ಈ ಸಾಧನೆ ಮಾಡಿದ್ದಾರೆ.

171: ಕುಕ್ ಅರ್ಧಶತಕ ಪೂರೈಸಲು 171 ಎಸೆತ ಎದುರಿಸಿದರು. ಇದು ಕುಕ್ ವೃತ್ತಿಜೀವನದ ಅತ್ಯಂತ ನಿಧಾನಗತಿಯ ಅರ್ಧಶತಕ. ಈ ಹಿಂದೆ 2013ರಲ್ಲಿ ಆಸ್ಟ್ರೇಲಿಯ ವಿರುದ್ಧ, 2012ರಲ್ಲಿ ಶ್ರೀಲಂಕಾ ವಿರುದ್ಧ 164 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.

13: ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಪ್ರಸ್ತುತ ಸರಣಿಯಲ್ಲಿ ಈ ತನಕ 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಭಾರತದಲ್ಲಿ ಕಳೆದ 50 ವರ್ಷಗಳಲ್ಲಿ ವಿದೇಶಿ ಲೆಗ್ ಸ್ಪಿನ್ನರ್ ನೀಡಿರುವ ಶ್ರೇಷ್ಠ ಪ್ರದರ್ಶನ ಇದಾಗಿದೆ.

1959: ಇಂಗ್ಲೆಂಡ್ ಲೆಗ್-ಸ್ಪಿನ್ನರ್ ಓರ್ವ 1959ರಲ್ಲಿ ಕೊನೆಯ ಬಾರಿ ಸರಣಿಯೊಂದರಲ್ಲಿ 13 ವಿಕೆಟ್ ಕಬಳಿಸಿದ್ದಾರೆ. 1959ರಲ್ಲಿ ಭಾರತ ವಿರುದ್ಧ ಸ್ವದೇಶಿ ಸರಣಿಯಲ್ಲಿ ಟಾಮ್ಮಿ ಗ್ರೀನ್‌ಹೋಫ್ 3 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಉರುಳಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X