ಸರಕಾರ ಚಾಪೆಯ ಕೆಳಗೆ ನುಸುಳಿದರೆ ಭ್ರಷ್ಟರು ರಂಗೋಲಿಯಡಿಗೆ...!
ಹೊಸದಿಲ್ಲಿ, ನ.20: ವ್ಯಾಪಕವಾಗಿರುವ ಭ್ರಷ್ಟಾಚಾರ ಹಾಗೂ ತೆರಿಗೆಗಳ್ಳತನಗಳನ್ನು ತಡೆಯಲು ದೊಡ್ಡ ವೌಲ್ಯದ ನೋಟುಗಳನ್ನು ಸರಕಾರ ರದ್ದುಗೊಳಿಸಿದೆ. ಆದರೆ, ಸರಕಾರದ ಈ ಹಠಾತ್ ಕ್ರಮಕ್ಕೆ ಸೆಡ್ಡು ಹೊಡೆಯಲು ಭಾರತೀಯರು ರೋಲೆಕ್ಸ್ ವಾಚ್ ಖರೀದಿಗೆ ‘ನಗದು ಕೂಲಿಗಳಿಂದ’ ತೊಡಗಿ ಹಲವು ವಿಶಿಷ್ಟ ದಾರಿಗಳನ್ನು ಕಂಡುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನ.8ರಂದು ರೂ.500 ಹಾಗೂ 1000 ಮುಖಬೆಲೆಯ ನೋಟುಗಳ ರದ್ದತಿಯನ್ನು ಘೋಷಿಸುವ ಮೂಲಕ ದೇಶಾದ್ಯಂತ ಆಘಾತದ ಅಲೆಗಳನ್ನು ಕಳುಹಿಸಿದ್ದರು. ಅದಾಗಿ ತಾಸಿನೊಳಗೆ ಚಲಾವಣೆಯಲ್ಲಿರುವ ನೋಟುಗಳ ಶೇ.85ರಷ್ಟು ನೋಟುಗಳು ರದ್ದಿ ಕಾಗದಗಳಾದುವು.
ಈ ಘೋಷಣೆಯು ಭಾರತದ ನಗದು ಆಧರಿತ ಆರ್ಥಿಕತೆ ಯಲ್ಲಿ ತಲ್ಲಣ ಸೃಷ್ಟಿಸಿತು. ಅಘೋಷಿತ ಹಾಗೂ ಲೆಕ್ಕ ನೀಡದ ಸಂಪತ್ತನ್ನು ಶೇಖರಿಸಿಟ್ಟ ತಮ್ಮ ಕಪ್ಪು ಹಣವನ್ನು ವಿನಿಮಯ ಗೊಳಿಸಲು ಅಥವಾ ಚಿನ್ನ ಹಾಗೂ ಐಶಾರಾಮಿ ವಸ್ತುಗಳ ಖರೀದಿಗೆ ಉಪಯೋಗಿಸಲು ಹುಚ್ಚು ಧಾವಂತ ನಡೆಸಿದರು.
ದೇಶದಲ್ಲಿ ಅಂದಾಜು 2,100 ಮಂದಿ ರೂ.340 ಕೋಟಿಗೂ ಹೆಚ್ಚು ಸಂಪತ್ತುಳ್ಳ ಕುಬೇರರಿದ್ದರೂ, 2012-13ರಲ್ಲಿ ರೂ.50 ಕೋಟಿಗಿಂತ ಹೆಚ್ಚು ಸಂಪಾದಿಸುವ ಕೇವಲ 6 ಮಂದಿಯಷ್ಟೇ ರಿಟರ್ನ್ಸ್ ದಾಖಲಿಸಿದ್ದಾರೆಂದು ನಂಬಲಾಗಿದೆ.
ರೂ.2.5 ಲಕ್ಷಕ್ಕಿಂತ ಹೆಚ್ಚು ಹಣ ಠೇವಣಿಯಿರಿಸುವವರ ವಿವರವನ್ನು ಬ್ಯಾಂಕ್ಗಳು ವರದಿ ಮಾಡಲೇ ಬೇಕು ಹಾಗೂ ಅಘೋಷಿತ ಆಸ್ತಿಯಿರುವುದು ಪಾವತಿಸಬೇಕಾದ ತೆರಿಗೆಯ ದುಪ್ಪಟ್ಟು ದಂಡ ಪಾವತಿಗೆ ಕಾರಣವಾಗಬಹುದೆಂದು ಸರಕಾರ ಎಚ್ಚರಿಸುತ್ತಲೇ ಬಂದಿದೆ.
ನಗದು ಕೂಲಿಗಳು: ಕೆಲವು ಕೈಗಾರಿಕೆಗಳ ಮಾಲಕರು ಹಾಗೂ ವ್ಯಾಪಾರಿಗಳು, ಡಿ.30ರ ಅಂತಿಮ ಗಡುವಿನೊಳಗೆ ತಮ್ಮಲ್ಲಿರುವ ಹಳೆಯ ನೋಟುಗಳ ಬದಲಾವಣೆಗಾಗಿ ಬ್ಯಾಂಕ್ಗಳಲ್ಲಿ ಸರತಿಯ ಸಾಲಿನಲ್ಲಿ ನಿಲ್ಲಲು ಸಿಬ್ಬಂದಿಯನ್ನು ವಿನಂತಿಸಿದ ಅಥವಾ ಸಂಬಳಕ್ಕೆ ಆಳುಗಳನ್ನು ನೇಮಿಸಿದ ಹಲವು ಪ್ರಕರಣಗಳು ವರದಿಯಾಗಿವೆ.
ಮೊದಲು ಬ್ಯಾಂಕ್ ಕೌಂಟರ್ಗಳಲ್ಲಿ ಹಳೆ ನೋಟು ವಿನಿ ಮಯದ ಮಿತಿ ರೂ. 4,000 ಇದ್ದುದನ್ನು, ಅಪ್ರಾಮಾ ಣಿಕರು ನೋಟು ಬದಲಾಯಿಸಲು ಬಡವರನ್ನು ಸಂಬಳಕ್ಕೆ ನೇಮಿಸು ತ್ತಿರುವುದು ಸರಕಾರದ ಗಮನಕ್ಕೆ ಬಂದ ಬಳಿಕ ರೂ.2,000ಕ್ಕೆ ಇಳಿಸಲಾಗಿದೆ. ಒಬ್ಬನೇ ವ್ಯಕ್ತಿ ಹಲವು ಬಾರಿ ನೋಟು ವಿನಿಮಯ ಮಾಡುವುದನ್ನು ತಪ್ಪಿಸಲು ಚುನಾವಣೆಗಳಲ್ಲಿರುವಂತೆ ಬೆರಳಿಗೆ ಶಾಯಿ ಹಚ್ಚುವಂತೆ ಬ್ಯಾಂಕ್ಗಳಿಗೆ ಸರಕಾರ ಸೂಚಿಸಿತು.
ರೋಲೆಕ್ಸ್ ಖರೀದಿಗೆ ಓಟ: ನೋಟು ರದ್ದತಿ ಘೋಷಣೆಯ ಬಳಿಕ ಶ್ರೀಮಂತರು ತಮ್ಮ ಲೆಕ್ಕ ನೀಡದ ಹಣದಿಂದ ದುಬಾರಿ ವಸ್ತುಗಳನ್ನು ಖರೀದಿಸಲು ಧಾವಿಸಿದರು. ರೋಲೆಕ್ಸ್ ಹಾಗೂ ಡಿಯೋರ್ಗಳಂತಹ ಹಲವು ಐಶಾರಾಮಿ ಬ್ರಾಂಡ್ಗಳ ಮಾರಾಟಗಾರರು ನ.8ರ ಮಧ್ಯರಾತ್ರಿಯ ತನಕ ಅಂಗಡಿಗಳನ್ನು ತೆರೆದಿರಿಸುತ್ತೇವೆಂದು ಗಿರಾಕಿಗಳಿಗೆ ಇ-ಮೇಲ್ ಕಳುಹಿಸಿದ್ದರೆಂದು ಇಕಾನಮಿಕ್ ಟೈಂಸ್ ವರದಿ ಮಾಡಿದೆ.
ದಿಲ್ಲಿಯ ಜಾಗತಿಕ ಮಟ್ಟದ ಬ್ರಾಂಡೆಡ್ ಫ್ಯಾಶನ್ ಉಡುಪುಗಳ ಮಾರಾಟದ ಪ್ರಸಿದ್ಧ ಅಂಗಡಿಯೊಂದು ಅಂದು ಇಡೀ ರಾತ್ರಿ ತೆರೆದಿದ್ದು, 3 ತಾಸಿಗೂ ಕಡಿಮೆ ಅವಧಿಯಲ್ಲಿ ರೂ. 1 ಕೋಟಿಗೂ ಅಧಿಕ ಮೊತ್ತದ ವಹಿವಾಟು ನಡೆಸಿದೆಯೆಂದು ಅದು ಹೇಳಿದೆ.







