ಶೆಟ್ಟಿಬೆಟ್ಟು ರಸ್ತೆ ಕಾಮಗಾರಿ ಉದ್ಘಾಟನೆ

ಉಡುಪಿ, ನ.22: ವಾರಾಹಿ ನೀರಾವರಿ ಯೋಜನೆಯಡಿ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಶೆಟ್ಟಿಬೆಟ್ಟು ಮಾರುತಿನಗರ ರಸ್ತೆ ಕಾಮಗಾರಿಯನ್ನು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಇತ್ತೀಚೆಗೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಸುಕೇಶ್ ಕುಂದರ್, ಸ್ಥಳೀಯ ರಾದ ಸುಧಾಕರ ಹೆಗ್ಡೆ, ಬ್ರಿಜಾರ್ ಸಾಮಾನಿ, ಸಂಜೀವ ಪೂಜಾರಿ, ರಾಮದಾಸ್ ಕಾಮತ್, ರತ್ನಾಕರ ಸಾಮಂತ್, ಗಣೇಶ್ ಸುನೀಲ್, ವಿಶ್ವನಾಥ, ನೀರಜ್ ಪಾಟೀಲ್, ಸಿತಾರ ಸಾಲ್ಯಾನ್, ಸುರೇಂದ್ರ, ರವಿರಾಜ್, ದಿನೇಶ್, ಸೂರಪ್ಪ ಪೂಜಾರಿ, ಶಂಭು ಶೆಟ್ಟಿ, ವಿಠಲ ಮಡಿವಾಳ, ಜಯಶೆಟ್ಟಿ, ರಾಮ, ಅಪ್ಪಿ ಪೂಜಾರ್ತಿ, ಶೇಖರ, ಗಣೇಶ್ ಎಂ ಮುಂತಾದವರು ಉಪಸ್ಥಿತರಿದ್ದರು.
Next Story





