ಕದ್ರಿ: ತುಳು ರಕ್ಷಣಾ ವೇದಿಕೆಯಿಂದ ಧರಣಿ
![ಕದ್ರಿ: ತುಳು ರಕ್ಷಣಾ ವೇದಿಕೆಯಿಂದ ಧರಣಿ ಕದ್ರಿ: ತುಳು ರಕ್ಷಣಾ ವೇದಿಕೆಯಿಂದ ಧರಣಿ](https://www.varthabharati.in/sites/default/files/images/articles/2016/11/25/24 turave.jpg)
ಮಂಗಳೂರು, ನ.24: ವಿವಿಧ ಸಮಸ್ಯೆ ಗಳಲ್ಲಿ ಸಿಲುಕುತ್ತಿರುವ ಕದ್ರಿ ಮಾರುಕಟ್ಟೆಗೆ ಕಾಯಕಲ್ಪ ಕಲ್ಪಿಸಬೇಕೆಂದು ಒತ್ತಾಯಿಸಿ ತುಳುನಾಡ ರಕ್ಷಣಾ ವೇದಿಕೆಯು ಗುರುವಾರ ಕದ್ರಿ ಮಾರುಕಟ್ಟೆಯ ಮುಂದೆ ಪ್ರತಿಭಟನೆ ನಡೆಸಿತು.
ತುರವೇ ಸ್ಥಾಪಕ ಅಧ್ಯಕ್ಷ ಯೋಗೀಶ್ಶೆಟ್ಟಿ ಜಪ್ಪುಮಾತನಾಡಿ, ಮಾರುಕಟ್ಟೆ ಯಲ್ಲಿ ಪಾರ್ಕಿಂಗ್ ಮತ್ತು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಕೆಲವು ಅಂಗಡಿಗಳ ಗಾತ್ರ ಚಿಕ್ಕದಾಗಿದ್ದು, ವ್ಯಾಪಾರಿಗಳಿಗೆ ಭದ್ರತೆ ಇಲ್ಲದಂತಾಗಿದೆ. ಸರಕಾರದಿಂದ ವರ್ಷಕ್ಕೆ 9 ಲಕ್ಷ ರೂ. ಆದಾಯ ಬರುತ್ತಿದ್ದರೂ ಮಾರುಕಟ್ಟೆಗೆ ಮಾತ್ರ ತಿಂಗಳ ನಿರ್ವಹಣೆಗೆ ಸರಿಯಾಗಿ ಖರ್ಚು ಮಾಡುವುದಿಲ್ಲ ಎಂದವರು ದೂರಿದರು.
ಸಿರಾಜ್ ಅಡ್ಕರೆ, ಅಬ್ದುರ್ರಶೀದ್ ಜಪ್ಪು, ಜ್ಯೋತಿಕಾ ಜೈನ್, ಆನಂದ್ ಅಮೀನ್ ಅಡ್ಯಾರ್, ರಕ್ಷಿತ್ ಬಂಗೇರ ಕುಡುಪು, ಹರೀಶ್ ಶೆಟ್ಟಿ ಶಕ್ತಿನಗರ, ರಾಜೇಶ್ ಕುತ್ತಾರ್, ನವಾಝ್ ಬಜಾಲ್, ತಾರನಾಥ್ ಜತ್ತಣ್ಣ, ರಹೀಂ ಕುತ್ತಾರ್, ಜನಾರ್ದನ ಬೆಂಗ್ರೆ, ಚಂದ್ರಶೇಖರ್ ಕಣ್ಣಗುಡ್ಡೆ, ಕಾಮಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.
Next Story