Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಪ್ರಜಾಪ್ರಭುತ್ವ ಪರ ನಿಲುವಿಗಾಗಿ ...

ಪ್ರಜಾಪ್ರಭುತ್ವ ಪರ ನಿಲುವಿಗಾಗಿ ಬಾಜ್ವಾಗೆ ಒಲಿದ ಸೇನಾವರಿಷ್ಠ ಸ್ಥಾನ

ಪಾಕ್ ಮಾಧ್ಯಮಗಳ ಅನಿಸಿಕೆ

ವಾರ್ತಾಭಾರತಿವಾರ್ತಾಭಾರತಿ27 Nov 2016 8:02 PM IST
share
ಪ್ರಜಾಪ್ರಭುತ್ವ ಪರ ನಿಲುವಿಗಾಗಿ  ಬಾಜ್ವಾಗೆ ಒಲಿದ ಸೇನಾವರಿಷ್ಠ ಸ್ಥಾನ

ಇಸ್ಲಾಮಾಬಾದ್,ನ.27: ಪಾಕಿಸ್ತಾನದ ನೂತನ ಸೇನಾ ಮುಖ್ಯಸ್ಥರಾಗಿ ಜನರಲ್ ಖಮರ್ ಬಾಜ್ವಾ ಅವರನ್ನು ಪ್ರಧಾನಿ ನವಾಝ್ ಶರೀಫ್ ನೇಮಕಗೊಳಿಸಲು ಅವರ ಪ್ರಜಾಪ್ರಭುತ್ವ ಪರ ನಿಲುವು ಹಾಗೂ ಪ್ರಚಾರದಿಂದ ದೂರವಿರುವ ವ್ಯಕ್ತಿತ್ವ ಕಾರಣವೆಂದು ಪಾಕಿಸ್ತಾನಿ ಮಾಧ್ಯಮಗಳು ಹಾಗೂ ತಜ್ಞರು ಅಭಿಪ್ರಾಯಿಸಿದ್ದಾರೆ.
 
ಜನರಲ್ ಬಾಜ್ವಾ ಅವರ ಪೂರ್ವಾಪರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಲ್ಲಿ ಅವರ ಪ್ರಜಾಪ್ರಭುತ್ವಪರ ನಿಲುವುಗಳೇ ಅವರನ್ನು ಸೇನಾ ಮುಖ್ಯಸ್ಥನ ಹುದ್ದೆಗೇರಿಸಿರುವುದಾಗಿ ಪಾಕಿಸ್ತಾನದ ‘ದಿ ನ್ಯೂಸ್’ ಪತ್ರಿಕೆ ವರದಿ ಮಾಡಿದೆ. ಸೇನಾ ಪರಿಣಿತನೂ ಹಾಗೂ ಪ್ರಜಾತಂತ್ರದ ಬೆಂಬಲಿಗನೂ ಆದ ಸೇನಾಧಿಕಾರಿಯನ್ನು ಸೇನಾವರಿಷ್ಠನನ್ನಾಗಿ ನೇಮಿಸಲು ಪ್ರಧಾನಿ ನವಾಝ್ ಶರೀಫ್ ಬಯಸಿದ್ದರೆಂದು ಪತ್ರಿಕೆ ತಿಳಿಸಿದೆ.
 ನಾಗರಿಕ ಸರಕಾರದ ಜೊತೆಗಿನ ಬಾಂಧವ್ಯದ ಬಗ್ಗೆ ಜನರಲ್ ಬಾಜ್ವಾ ಅವರಿಗಿರುವ ಸೌಮ್ಯವಾದಿ ನಿಲುವು, ಅವರನ್ನು ಸೇನಾಮುಖ್ಯಸ್ಥನ ಸ್ಥಾನಕ್ಕೇರಿಸಿದೆಯೆಂದು ಪಾಕಿಸ್ತಾನದ ಇನ್ನೊಂದು ಪ್ರಮುಖ ದಿನ ಪತ್ರಿಕೆ ಡಾನ್ ಪತ್ರಿಕೆ ವರದಿ ಮಾಡಿದೆ.
ಸೇನಾ ಮುಖ್ಯಸ್ಥನಾಗಿ ಭಡ್ತಿ ಪಡೆಯುವ ಮೂಲಕ ಜನರಲ್ ಬಾಜ್ವಾ ಅವು ಲೆ.ಜ. ಸೈಯದ್ ವಾಜಿದ್ ಹುಸೈನ್ (ಪಾಕಿಸ್ತಾನದ ಭಾರೀ ಕೈಗಾರಿಕೆಗಳ ತಕ್ಸಿಲಾದ ಅಧ್ಯಕ್ಷ0, ್ಞಲೆ.ಜ. ನಜೀಬುಲ್ಲಾ ಖಾನ್ ( ಸಿಬ್ಬಂದಿ ಮುಖ್ಯ ಕಾರ್ಯಾಲಯದ ಜಂಟಿ ಮಹಾನಿರ್ದೇಶಕ), ಲೆ.ಜ. ಇಶ್ಫಾಕ್ ನದೀಂ ಅಹ್ಮದ್ (ಕಾರ್ಪ್ಸ್ ಕಮಾಂಡರ್ ಮುಲ್ತಾನ್) ಹಾಗೂ ಲೆ.ಜ. ಜಾವೇದ್ ಇಕ್ಬಾಲ್ ರಾಮ್‌ದಯ್ (ಕಾರ್ಪ್ಸ್ ಕಮಾಂಡರ್ ಬಹಾಲ್‌ಪುರ್) ಅವರನ್ನು ಹಿಂದಕ್ಕೆ ಸರಿಸಿದಂತಾಗಿದೆ.

ಪಾಕಿಸ್ತಾನದ ಆಡಳಿತಾರೂಢ ಪಿಎಂಎಲ್-ಎನ್ ಪಕ್ಷದ ಸಂಸದ ಲೆ.ಜ. (ನಿವೃತ್ತ) ಅಬ್ದುಲ್ ಖಯೂಮ್ ಅವರು ಜನರಲ್ ಬಾಜ್ವಾ ನೇಮಕವನ್ನು ಸಮರ್ಥಿಸಿದ್ದಾರೆ. ಸಂಸತ್‌ನ ಶ್ರೇಷ್ಠತೆಯಲ್ಲಿ ನಂಬಿಕೆಯಿಟ್ಟಿರುವ ಹಾಗೂ ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಬೆಂಬಲಿಸುವ ಮತ್ತು ದೇಶದ ಒಳಿತಿಗಾಗಿ ಶ್ರಮಿಸುವ ವ್ಯಕ್ತಿಯನ್ನು ಸೇನಾವರಿಷ್ಠನನ್ನಾಗಿ ನೇಮಿಸಲು ಪ್ರಧಾನಿ ಬಯಸಿದ್ದರೆಂದು ಅವರು ಹೇಳಿದ್ದಾರೆ.

ಸೈನಿಕ ಬಲದಲ್ಲಿ ಜಗತ್ತಿನ ಆರನೆ ಅತಿ ದೊಡ್ಡ ಸೈನ್ಯವೆಂದು ಕರೆಸಿಕೊಂಡಿರುವ ಪಾಕ್ ಸೇನೆಯ ವರಿಷ್ಠರಾಗಿ ಜನರಲ್ ಬಾಜ್ವಾ ಮಂಗಳವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನಿರ್ಗಮನ ಸೇನಾವರಿಷ್ಠ ಜನರಲ್ ರಾಹೀಲ್ ಆ ದಿನವೇ ನಿವೃತ್ತರಾಗಲಿದ್ದಾರೆ.

ನಿಯೋಜಿತ ಸೇನಾವರಿಷ್ಠ ಬಜ್ವಾ ಅವರು ಇಂದು ಪ್ರಧಾನಿ ನವಾಝ್ ಶರೀಫ್‌ರನ್ನು ಭೇಟಿಯಾಗಿ ಅವರೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X