Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನಗದುರಹಿತ ಸಮಾಜವಾಗುವಂತೆ ದೇಶಕ್ಕೆ...

ನಗದುರಹಿತ ಸಮಾಜವಾಗುವಂತೆ ದೇಶಕ್ಕೆ ಪ್ರಧಾನಿ ಮೋದಿ ಆಗ್ರಹ

ವಾರ್ತಾಭಾರತಿವಾರ್ತಾಭಾರತಿ27 Nov 2016 8:08 PM IST
share
ನಗದುರಹಿತ ಸಮಾಜವಾಗುವಂತೆ ದೇಶಕ್ಕೆ ಪ್ರಧಾನಿ ಮೋದಿ ಆಗ್ರಹ

ಹೊಸದಿಲ್ಲಿ,ನ.27: ನೋಟು ನಿಷೇಧದ ಬಳಿಕ ತನ್ನ ಮೊದಲ ರೇಡಿಯೊ ಭಾಷಣ ‘ಮನ್ ಕಿ ಬಾತ್’ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು, ಭಾರತವನ್ನು ನಗದುರಹಿತ ಸಮಾಜವನ್ನಾಗಿಸುವ ನಿಟ್ಟಿನಲ್ಲಿ ಆಂದೋಲನವೊಂದಕ್ಕೆ ಆಗ್ರಹಿಸಿದರು. ಕನಿಷ್ಠ 10 ಕುಟುಂಬಗಳಿಗೆ ಮೊಬೈಲ್ ಬ್ಯಾಂಕಿಂಗ್ ಮತ್ತು ಇತರ ಇ-ಕಾಮರ್ಸ್ ತಂತ್ರಜ್ಞಾನವನ್ನು ಕಲಿಸುವಂತೆ ಯುವಪೀಳಿಗೆಗೆ ಅವರು ಕರೆ ನೀಡಿದರು.

 ನೋಟು ನಿಷೇಧದ ನಿರ್ಧಾರ ಕಠಿಣವಾಗಿತ್ತು ಎಂದು ಬಣ್ಣಿಸಿದ ಅವರು, ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಎದುರಾಗುವ ಕಷ್ಟಗಳ ಬಗ್ಗೆ ತನಗೆ ಅರಿವಿತ್ತು. ನಿರ್ಧಾರ ವನ್ನು ಪ್ರಕಟಿಸಿ ನ.8ರಂದು ಮಾಡಿದ್ದ ಭಾಷಣದಲ್ಲಿ ತಾನು ಈ ಬಗ್ಗೆಯೂ ಮಾತನಾಡಿದ್ದೆ. ಕಳೆದ 70 ವರ್ಷಗಳಿಂದಲೂ ನಡೆದುಕೊಂಡು ಬಂದಿರುವ ವ್ಯವಸ್ಥೆಯನ್ನು ಅಲುಗಾಡಿಸುವುದು ಸುಲಭವಲ್ಲ ಎನ್ನುವುದು ತನಗೆ ತಿಳಿದಿತ್ತು. ಆದರೆ ಜನತೆಯು ನೀಡಿರುವ ಬೆಂಬಲ ತನ ಹೃದಯವನ್ನು ಸ್ಪರ್ಶಿಸಿದೆ ಮತ್ತು ನೋಟು ನಿಷೇಧ ನಿರ್ಧಾರವು ಒಡ್ಡಿರುವ ಸವಾಲುಗಳನ್ನು ಎದುರಿಸುವಲ್ಲಿ ಯಶಸ್ವಿಯಾಗುತ್ತೇವೆ ಎನ್ನುವುದನ್ನು ಈ ಬೆಂಬಲವು ತನಗೆ ಮನದಟ್ಟು ಮಾಡಿದೆ ಎಂದು ಹೇಳಿದರು.

ನಗದುರಹಿತವಲ್ಲದಿದ್ದರೆ ಕಡಿಮೆ ನಗದು ಆರ್ಥಿಕತೆ ತನ್ನ ಭಾಷಣದ ಹೆಚ್ಚಿನ ಪಾಲನ್ನು ದೇಶದ ಯುವಜನತೆಗಾಗಿ ಮೀಸಲಿಟ್ಟಿದ್ದ ಮೋದಿ, ಭಾರತವನ್ನು ನಗದುರಹಿತ ಅಥವಾ ಕನಿಷ್ಠ ಕಡಿಮೆ ನಗದು ಆರ್ಥಿಕತೆಯನ್ನಾಗಿ ಪರಿವರ್ತಿಸುವಲ್ಲಿ ‘ಬದಲಾವಣೆಯ ಯೋಧ ’ರಾಗುವಂತೆ ಅವರನ್ನು ಕೇಳಿಕೊಂಡರು.
ತನಗೆ ಭಾರತದ ಯುವಜನರ ನೆರವಿನ ಅಗತ್ಯವಿದೆ. ಇದು ತಾಯ್ನಡಿನ ಸೇವೆಗಾಗಿ ತಮಗೆ ಒದಗಿರುವ ಅಮೂಲ್ಯಅವಕಾಶ ಎಂದು ಅವರೂ ತಿಳಿದುಕೊಳ್ಳಬೇಕು. ನಿಮ್ಮ ಕುಟುಂಬಗಳಲ್ಲಿ ಮತ್ತು ನಿಮ್ಮ ಪರಿಸರದಲ್ಲಿ ಇ-ವ್ಯಾಲಟ್‌ಗಳು ಅಥವಾ ಮೊಬೈಲ್ ಬ್ಯಾಂಕಿಂಗ್‌ನಂತಹ ತಂತ್ರಜ್ಞಾನಗಳ ಬಳಕೆಯ ಬಗ್ಗೆ ಗೊತ್ತಿಲ್ಲದಿರಬಹುದು. ಕನಿಷ್ಠ 10 ಕುಟುಂಬಗಳಿಗೆ ಈ ತಂತ್ರಜ್ಞಾನವನ್ನು ತಿಳಿಸಿಕೊಡಲು ದಿನದಲ್ಲಿ ಒಂದು ಗಂಟೆ ಅಥವಾ ಹೆಚ್ಚಿನ ಸಮಯವನ್ನು ವ್ಯಯಿಸಿ ಎಂದು ಹೇಳಿದರು.

ನೋಟು ನಿಷೇಧ ಕ್ರಮಕ್ಕೆ ಅಭೂತಪೂರ್ವ ಬೆಂಬಲವನ್ನು ವ್ಯಕ್ತಪಡಿಸಿದ್ದಕಾಗಿ ಜನತೆಗೆ ಧನ್ಯವಾದಗಳನ್ನು ಸಲ್ಲಿಸಿದ ಅವರು, ಬ್ಯಾಂಕುಗಳ ಮೂಲಕ ವೇತನ ಪಾವತಿಗೆ ಒತ್ತಾಯಿಸುವಂತೆ ದಿನಗೂಲಿ ನೌಕರರನ್ನು ಆಗ್ರಹಿಸಿದರು. ಇದು ದಾಖಲೆಗಳಲ್ಲಿ ಹೆಚ್ಚು ವೇತನ ಪಾವತಿಯನ್ನು ತೋರಿಸಿ ನಿಮ್ಮ ಕೈಗಳಲ್ಲಿ ಕಡಿಮೆ ಹಣವನ್ನಿಡುವ ಮೂಲಕ ನಿಮ್ಮನ್ನು ಶೋಷಿಸುವ ಪ್ರವೃತ್ತಿಗೆ ಅಂತ್ಯ ಹಾಡುತ್ತದೆ ಎಂದರು.
ಕಪ್ಪುಹಣವನ್ನು ಹೊಂದಿರುವರು ತಮ್ಮ ಹಣವನ್ನು ಬಿಳಿಯಾಗಿಸಿಕೊಳ್ಳಲು ಬಡವರ ಬ್ಯಾಂಕ್ ಖಾತೆಗಳನ್ನು ಬಳಿಸಿಕೊಳ್ಳುತ್ತಿರುವುದು ತನಗೆ ಗೊತ್ತಿದೆ ಎಂದ ಅವರು, ಇಂತಹ ತಪ್ಪುಗಳಲ್ಲಿ ಬಡವರನ್ನು ಸಿಲುಕಿಸಬೇಡಿ ಎಂದು ಕಾಳಧನಿಕರನ್ನು ಆಗ್ರಹಿಸಿದರು.
ತನ್ನ ಭಾಷಣದ ಹೆಚ್ಚಿನ ಸಮಯವನ್ನು ಮೋದಿ ನಗದುರಹಿತ ಆರ್ಥಿಕತೆಯ ಲಾಭಗಳು ಮತ್ತು ಡಿಜಿಟಲ್ ವಹಿವಾಟುಗಳ ಬಗ್ಗೆ ಮಾತನಾಡಲು ಬಳಸಿಕೊಂಡರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X