Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನೋಟಿನ ಚಿಂದಿ ಕತೆಗಳು

ನೋಟಿನ ಚಿಂದಿ ಕತೆಗಳು

ವಾರ್ತಾಭಾರತಿವಾರ್ತಾಭಾರತಿ28 Nov 2016 12:23 AM IST
share
ನೋಟಿನ ಚಿಂದಿ ಕತೆಗಳು

ರೂಪಾಯಿ ಬರ್ತಾ ಇಲ್ಲ

 ಇವತ್ತು ಎಟಿಎಂ ಕ್ಯೂನಲ್ಲಿ ಒಂದು ತಮಾಷೆಯಾಯಿತು. ಒಬ್ಬ ಎಟಿಎಂ ಒಳಗೆ ಹೋಗಿ ಹತ್ತು ನಿಮಿಷದ ಬಳಿಕ ಹೊರಬಂದು ಮುಖ ಬಾಡಿಸಿ ಹೇಳಿದ ಇಲ್ಲಾರಿ,ಎರಡು ಸಾವಿರ ರೂಪಾಯಿ ಬರ್ತಾ ಇಲ್ಲ ನೋಟು ಮುಗಿಯಿತೇನೋ ಎಂದು ನಾನು ಬೆಚ್ಚಿ ಬಿದ್ದೆ. ಅಷ್ಟರಲ್ಲಿ ಒಬ್ಬ ಒಳ ಹೋಗಿ ಎರಡು ಸಾವಿರ ನೋಟಿನೊಂದಿಗೆ ಹೊರ ಬಂದ ಅರೆ ನೋಟು ಬರ್ತಾ ಇದೆಯಲ್ಲ? ನಾನು ಮತ್ತೆ ಆ ವ್ಯಕ್ತಿಯ ಬಳಿ ಕೇಳಿದೆ. ಇಲ್ಲ, ನಾನು ಎರಡೆರಡು ಬಾರಿ ಪ್ರಯತ್ನಿಸಿದೆ ಹಣೆ ಒರೆಸಿ ಕೊಳ್ಳುತ್ತಾ ಹೇಳಿದ. ನಾನು ಅನುಮಾನದಿಂದ ಕೇಳಿದೆ ನಿಮ್ಮ ಅಕೌಂಟ್‌ನಲ್ಲಿ ಹಣ ಇದೆಯೇ ?

ನನ್ನ ಅಕೌಂಟ್‌ನಲ್ಲಿ ಹಣ ಇಲ್ಲ.ಆದರೆ ಮೋದಿ ಹೇಳಿದ್ದಾರಂತಲ್ಲ, ನವೆಂಬರ್ 1ರಿಂದ ಎಟಿಎಂನಲ್ಲಿ 2000 ರೂಪಾಯಿ ಬರುತ್ತದೆ ಅಂತ. ಮೋದಿಯವರ ಘೋಷಣೆ ಕೇಳಿ ನಾನು ನನ್ನ 2000 ರೂಪಾಯಿ ತೆಗೆದು ಕೊಳ್ಳಲು ಬಂದದ್ದು. ಆದರೆ ನನ್ನ ಅಕೌಂಟಿಗೆ ಎರಡು ಸಾವಿರ ಬೀಳಲೇ ಇಲ್ಲ ..
ಪಾಪ ಅನ್ನಿಸಿತು. ಸಮಾಧಾನಿಸಿದೆ. ನೋಡಿ ಹಾಗೇನಿಲ್ಲ, ನೀವು ಬ್ಯಾಂಕಿಗೆ ನಾಲ್ಕು ಸಾವಿರ ಹಾಕಿದರೆ ಎರಡು ಸಾವಿರ ರೂಪಾಯಿ ತೆಗೆದು ಕೊಳ್ಳಬಹುದು,ಅಷ್ಟೇ ..
ಅವನು ಅರ್ಥವಾಗದೆ ಏನೋ ಗೊಣಗುತ್ತಾ ಹೋದ. ಪಾಪ, ಯಾರೋ ಮೋದಿ ಭಕ್ತ ಈತನನ್ನು ಯಾಮಾರಿಸಿರಬೇಕು.

------------***------------

ಗಂಡನ ಹೊಸ ಬಟ್ಟೆ

ಇವತ್ತು ಕಚೇರಿಗೆ ಹೊರಟಾಗ ರಿಕ್ಷಾ ಚಾಲಕರೊಬ್ಬರ ಜೊತೆ ಮಾತುಕತೆ.
ಉದ್ದಕ್ಕೂ ನೋಟು ನಿಷೇಧದಿಂದ ತನಗಾಗಿರುವ ಸಮಸ್ಯೆ ಹೇಳುತ್ತಿದ್ದರು. ಎಲ್ಲಾ ಕೇಳಿಸಿಕೊಂಡ ನಾನು ಅವರಿಗೆ ಭರವಸೆ ನೀಡಿದೆ. ತಲೆ ಬಿಸಿ ಮಾಡಬೇಡಿ. ಇನ್ನೊಂದು ಎರಡು ವರ್ಷದಲ್ಲಿ ದೇಶಕ್ಕೆ ಭಾರೀ ಒಳ್ಳೆಯದಾಗುತ್ತೆ. ಸ್ವಲ್ಪಸಹನೆ ತೆಗೆದುಕೊಳ್ಳಿ.
ರಿಕ್ಷಾ ಚಾಲಕ ಮುಖಕ್ಕೆ ಹೊಡೆದಂತೆ ಹೇಳಿದರು ಇದು ಗಂಡ ಹೊಸ ಬಟ್ಟೆ ತರ್ತಾನೆ ಎಂದು ನಂಬಿ, ಹೆಂಡತಿ ಇರುವ ಹಳೆ ಬಟ್ಟೆಗೆ ಬೆಂಕಿ ಕೊಟ್ಟು ಬೆತ್ತಲೆಯಾಗಿ ಕಾದು ಕುಳಿತ ಕತೆಯಾಯಿತು.
ಮತ್ತೆ ಅವನ ಮುಖ ನೋಡುವ ಧೈರ್ಯ ನನಗೆ ಬರಲಿಲ್ಲ.

------------***------------
ಕೋತಿ ಮತ್ತು ಅದರ ಮುದ್ದಿನ ಮರಿ

ನಿನ್ನೆ ಆಟೊ ರಿಕ್ಷಾ ಒಂದರಲ್ಲಿ ಕಚೇರಿ ಕಡೆ ಸಾಗುತ್ತಿದ್ದಾಗ ಚಾಲಕ ನೋಟು ನಿಷೇಧದಿಂದಾದ ಸಮಸ್ಯೆಯನ್ನು ತೋಡಿ ಕೊಳ್ಳುತ್ತಿದ್ದರು. ಮಾತು ನೋಟು ನಿಷೇಧಕ್ಕಾಗಿ ಮೋದಿಯನ್ನು ಬೆಂಬಲಿಸುತ್ತಿರುವ ಭಕ್ತರ ಕಡೆ ತಿರುಗಿತು.
ಮೋದಿಯ ಅಭಿಮಾನಿಗಳು ನೋಟು ನಿಷೇಧವನ್ನು ಉತ್ತಮ ಕೆಲಸ ಎನ್ನುತ್ತಿದ್ದಾರೆ.ಮೋದಿಯನ್ನು ತಲೆ ಮೇಲೆ ಹೊತ್ತು ತಿರುಗುತ್ತಿದ್ದಾರೆ. ಹಾಗಾದರೆ ನೋಟಿನ ಬಿಸಿ ಅವರಿಗೆ ತಾಗಿಲ್ಲವೇ? ತಾಗಿದ್ದಿದ್ದರೆ ಈ ವರ್ಗ ಮೋದಿಯನ್ನು ಹೀಗೆ ಹೊತ್ತು ಮೆರೆಯುತ್ತಿತ್ತೇ? ರಿಕ್ಷಾ ಚಾಲಕನಲ್ಲಿ ನಾನು ಕೇಳಿದೆ.
ಆಟೊ ಚಾಲಕ ನಗುತ್ತಾ ಸಾರ್, ನಾನೊಂದು ಕತೆ ಹೇಳ್ತೇನೆ, ಕೇಳ್ತೀರಾ? ಎಂದರು.
ನಾನೂ ಕುತೂಹಲದಿಂದ ಹೇಳಿ ಹೇಳಿ ಎಂದೆ. ಆಟೊ ಮುಂದೆ ಸಾಗುತ್ತಿತ್ತು.
ಸರ್,ಒಂದು ಖಾಲಿ ಸ್ವಿಮ್ಮಿಂಗ್ ಟ್ಯಾಂಕ್‌ನಲ್ಲಿ ಒಂದು ಕೋತಿ ಮತ್ತು ಅದರ ಮುದ್ದಿನ ಮರಿ ಆಡುತ್ತಿತ್ತು.ಅಷ್ಟರಲ್ಲಿ ಸ್ವಿಮ್ಮಿಂಗ್ ಟ್ಯಾಂಕ್‌ಗೆ ನೀರು ತುಂಬಿಸ ತೊಡಗಿದರು. ಮೊದಲು ಕೋತಿ ತನ್ನ ಮರಿಯ ಜೊತೆ ಆ ನೀರಲ್ಲಿ ಆಡ ತೊಡಗಿತು. ನೀರಿನ ಮಟ್ಟ ಏರುತ್ತಿದ್ದ ಹಾಗೆ ಕೋತಿ ತನ್ನ ಮರಿಯನ್ನು ಎತ್ತಿ ಸೊಂಟದಲ್ಲಿ ಇಟ್ಟುಕೊಂಡಿತು. ನೀರು ಮತ್ತೆ ಏರತೊಡಗಿತು. ಈಗ ಕೋತಿ ತನ್ನ ಮರಿಯನ್ನು ಹೆಗಲ ಮೇಲೆ ಇಟ್ಟು ರಕ್ಷಿಸಿತು. ನೀರಿನ ಮಟ್ಟ ಮತ್ತೆ ಏರಿತು. ನೀರು ಎದೆಯ ಮಟ್ಟಕ್ಕೆ ಬಂತು.ಈಗ ಕೋತಿ ತನ್ನ ಮರಿಯನ್ನು ತಲೆಯ ಮೇಲೆ ಇಟ್ಟಿತು. ನೀರು ಇನ್ನೂ ಏರ ತೊಡಗಿತು. ಕುತ್ತಿಗೆಗೆ ಬಂತು. ಕೋತಿ ತುದಿಗಾಲಲ್ಲಿ ನಿಂತಿತು. ಈಗ ನೀರು ಕೋತಿಯ ಮೂಗಿನ ಮಟ್ಟಕ್ಕೆ ಬಂತು. ಎಂದವನೇ ಚಾಲಕ ನನ್ನ ಮುಖ ನೋಡಿದರು.
ಮತ್ತೇನಾಯಿತು ಹೇಳಿ? ಕುತೂಹಲದಿಂದ ಕೇಳಿದೆ.
ಈಗ ಕೋತಿ ತನ್ನ ಮರಿಯನ್ನು ಕಾಲ ಕೆಳಗೆ ತಳ್ಳಿ, ಅದರ ಮೇಲೆ ನಿಂತು, ಟ್ಯಾಂಕ್‌ನಿಂದ ಹೊರಗೆ ಹಾರಿತು. ಸರ್, ಸದ್ಯ ನೀರು ಸೊಂಟದವರೆಗಷ್ಟೇ ಬಂದಿದೆ. ನೀರು ಅವರ ಮೂಗಿನವರೆಗೆ ಬರುವವರೆಗೆ ಕಾಯಿರಿ.
ಅಷ್ಟರಲ್ಲಿ ನನ್ನ ಸ್ಟಾಪ್ ಬಂತು. ಇಳಿದೆ. ರಿಕ್ಷಾ ಚಾಲಕ ಹೇಳಿದ ಕತೆ ಈಗಲೂ ನನ್ನ ತಲೆಯಲ್ಲಿ ಬೇರೆ ಬೇರೆ ಆಯಾಮಗಳನ್ನು ಪಡೆದು ಕೊಳ್ಳುತ್ತಾ ಬೆಳೆಯುತ್ತಿದೆ.

------------***------------
ಮಾಯದ ಬಟ್ಟೆ

ಅಂಬಾನಿ ಹೊಲಿದ ಮಾಯದ ಬಟ್ಟೆ ಧರಿಸಿ ಮೋದಿ ಸಂಭ್ರಮಿಸುತ್ತಿದ್ದಾರೆ. ಭಕ್ತರು ಇಲ್ಲದ ಬಟ್ಟೆಯ ವರ್ಣನೆ ಮಾಡುತ್ತಿದ್ದಾರೆ. ಎಳೆ ಮಗುವೊಂದು ಬೆತ್ತಲೆ ರಾಜನ ನೋಡಿ ಕಿಸಕ್ಕನೆ ನಕ್ಕಿದೆ. ಇದೀಗ ಆ ಮಗುವಿನ ಮೇಲೆ ರಾಜ ದ್ರೋಹದ ಆರೋಪ ಹೊರಿಸಲಾಗಿದೆ.

------------***------------
ನೀನೆಲ್ಲಿದ್ದೀಯ?

ದೇಶಕ್ಕಾಗಿ ಇಷ್ಟಾದರೂ ಮಾಡೋಕ್ಕಾಗಲ್ವಾ ಜನರಿಗೆ ?
ಅದಿರ್ಲಿ ನೀನೆಲ್ಲಿದ್ದೀಯ ?

ನಾನು ಅಮೆರಿಕ ಟೂರಲ್ಲಿದ್ದೇನೆ ..ಎಲ್ಲ ಸರಿಯಾದ ಮೇಲೆ ಬರೋಣ ಅಂತ ..

------------***------------

ನಂಬಿಕೆ

ಹೊಸ 2000ರೂ. ನೋಟಿಗೆ ಬೆಂಕಿ ಹಚ್ಚಿದ್ರೆ ಬೆಂಕಿ ಹತ್ತೋದೇ ಇಲ್ಲ ಎಂಬ ಮೋದಿ ಭಕ್ತನ ಮಾತನ್ನು ನಂಬಿ, ಪರೀಕ್ಷಿಸಲು ಹೋಗಿ ಇಲ್ಲೊಬ್ಬ ತನ್ನ ಹೊಸ 2000ರೂ. ನೋಟನ್ನು ಕಳೆದು ಕೊಂಡಿದ್ದಾನೆ

------------***------------

ಸ್ವಾಗತ

ಅಂದ ಹಾಗೆ ನಿಮಗೆ ಗೊತ್ತಾ, ನೋಟು ನಿಷೇಧವನ್ನು ಜನಾರ್ದನ ರೆಡ್ಡಿಯವರು ಸ್ವಾಗತಿಸಿದ್ದಾರೆ!!

------------***------------

ಮೋದಿ ಫೋಟೊ

ಮಂಗಳೂರಿನ ವೆಲೆನ್ಸಿಯಾ ಪಕ್ಕದಲ್ಲಿರುವ ಈತ ಪುಟ್ಟದೊಂದು ಹೊಟೇಲು ಇಟ್ಟಿದ್ದಾನೆ. ಮೋದಿಯ ಅಭಿಮಾನಿ. ಗೋಡೆಯ ಮೇಲೆ ಮೋದಿಯ ಫೋಟೊ ತೂಗು ಹಾಕಿದ್ದ.
ಯಾವಾಗ ಮೋದಿಯವರು ಕಾರ್ಡ್ ಉಪಯೋಗಿಸಿ ಎಂದು ಕರೆ ಕೊಟ್ಟರೋ, ಅಂದಿನಿಂದ ಅವನ ಗೋಡೆಯಲ್ಲಿರುವ ಮೋದಿ ಫೋಟೋ ಮಾಯವಾಗಿದೆ.

------------***------------
ಗೊತ್ತಾ?

‘‘ಏ.. ಎರಡು ಸಾವಿರ ನೋಟಿನ ಮೇಲೆ ಮೊಬೈಲ್ ಇಟ್ರೆ ಮೋದಿ ಭಾಷಣ ಮಾಡೋದು ಕಾಣಿಸತ್ತೆ, ಗೊತ್ತಾ?’’
ನನಗೆ ಬೇಕಾಗಿರೋದು ಭಾಷಣ ಅಲ್ಲ, ಎರಡು ಸಾವಿರ ರೂಪಾಯಿಯ ಚಿಲ್ರೆ ..

------------***------------

ಮತ್ತೆ ಅಮೃತಮತಿ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರಿ ನಾಯಕನಿಗಾಗಿ ಹಂಬಲಿಸೋ ಮತದಾರ,ಪತಿ ಯಶೋಧರನನ್ನು ತಿರಸ್ಕರಿಸಿ ಅಷ್ಟಾವಕ್ರನ ಹಿಂಸಾರತಿಗಾಗಿ ಹಂಬಲಿಸೋ ಅಮೃತ ಮತಿಯಂತೆ ಭಾಸವಾಗುತ್ತಾನೆ. ಅತ್ಯಂತ ಕ್ರೂರಿಯೂ,ವಿಕಾರಿಯೂ ಆಗಿರುವ ಅಷ್ಟಾವಕ್ರ ಚಾಟಿಯಿಂದ ಬಾರಿಸುವಾಗ,ಅಮೃತಮತಿ ಕಾಮನೆಯಿಂದ ಸುಖಿಸುತ್ತಾ. ಇನ್ನಷ್ಟು ಹೊಡಿ,ಆದರೆ ನನ್ನನ್ನು ತಿರಸ್ಕರಿಸಬೇಡ ಎಂದು ದೀನವಾಗಿ ಬೇಡಿಕೊಳ್ಳುವ ಮನಸ್ಥಿತಿ ಮೋದಿಗಾಗಿ ಇನ್ನೂ ಹಪಹಪಿಸುತ್ತಿರುವ ಜನರಲ್ಲಿ ಆಳವಾಗಿ ಬಚ್ಚಿಟ್ಟು ಕೊಂಡಿದೆಯೇ? ಜನ್ನನ ‘ಯಶೋಧರ ಚರಿತೆ’ಯನ್ನು ಓದುತ್ತಿರುವಾಗ ಹೀಗೊಂದು ಆಲೋಚನೆ ಬಂದು ಬಿಟ್ಟಿತು ..

------------***------------

 ಅಂಬಿಗ ಮತ್ತು ಅವನ ಮಗ

ಇದೂ ರಿಕ್ಷಾ ಚಾಲಕನೇ ಹೇಳಿದ ಕತೆ. ಕಚೇರಿ ಕಡೆ ರಿಕ್ಷಾದಲ್ಲಿ ಸಾಗುತ್ತಿರುವಾಗ ಮೋದಿಯ ನೋಟು ನಿಷೇಧದ ಅವಾಂತರಗಳ ಬಗ್ಗೆ ಈ ಚಾಲಕ ಗೊಣಗುತ್ತಿದ್ದ.ಚಾಲಕ ವಯಸ್ಸಲ್ಲಿ ತುಂಬಾ ಹಿರಿಯ. ಜೊತೆಗೆ ತುಂಬಾ ತಿಳುವಳಿಕೆ ಉಳ್ಳವರಂತೆಯೂ ಕಾಣುತ್ತಿದ್ದರು.
ಸ್ವಾಮೀ, ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂತಹದೇ ಸ್ಥಿತಿ ಇತ್ತು ಗೊತ್ತಾ ?ಒಮ್ಮಾಮ್ಮೆ ಹಾಗೆ ಆಗ್ತದೆ ನಾನು ಚಾಲಕನನ್ನು ಸಮಾಧಾನಿಸಿದೆ.

ಚಾಲಕ ನಿಟ್ಟುಸಿರಿಟ್ಟು ಹೇಳಿದ ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯ ಸಂದರ್ಭ ನನಗೆ ಇಪ್ಪತ್ತು ವರ್ಷ. ನೀವಾಗ ಹುಟ್ಟಿರಲಿಕ್ಕೆ ಇಲ್ಲ. ಆಗ ದುಡಿಯುವ ಜನ ಹೀಗೆ ಬೀದಿಗೆ ಬಿದ್ದಿರಲಿಲ್ಲ. ದೊಡ್ಡವರನ್ನೆಲ್ಲ ಹಿಡಿದು ಜೈಲಿಗೆ ಹಾಕಿದಳು ಆಕೆ ..ನಿಮಗೆ ದೋಣಿಯವನ ಕತೆ ಗೊತ್ತಾ?ಎಂದು ಕೇಳಿದರು ಗೊತ್ತಿಲ್ಲ ಹೇಳಿ ..ಎಂದೆ.
ಅವನು ಕತೆ ಹೇಳ ತೊಡಗಿದ.
ಒಂದು ಊರು. ನದಿ ದಾಟಿಯೇ ಆ ಊರಿಗೆ ಹೋಗಬೇಕು. ಆ ಊರಿಗೆ ಒಂದೇ ದೋಣಿ. ಒಬ್ಬನೇ ಅಂಬಿಗ. ಹೆಂಗಸರ ವಿಷಯದಲ್ಲಿ ಈ ಅಂಬಿಗನ ವರ್ತನೆ ಅಷ್ಟು ಸರಿ ಇರಲಿಲ್ಲ. ದೋಣಿಯನ್ನು ಆತ ಪೂರ್ತಿ ದಡದ ಸಮೀಪ ನಿಲ್ಲಿಸುತ್ತಿರಲಿಲ್ಲ. ಮೊಣಕಾಲಿಗಿಂತ ಜಾಸ್ತಿ ನೀರು ಇರುವಲ್ಲಿ ದೋಣಿ ನಿಲ್ಲಿಸುತ್ತಿದ್ದ. ಇದರಿಂದ ಮಹಿಳೆಯರು ತಮ್ಮ ಸೀರೆಯನ್ನು ಮೊಣಕಾಲಿಗಿಂತ ಮೇಲೆ ಮಾಡಿ ದಡ ಸೇರಬೇಕಾಗಿತ್ತು. ಈ ಮೂಲಕ ಅಂಬಿಗನಿಗೆ ಹೆಂಗಸರ ಕಾಲು ನೋಡುವ ಚಪಲ. ಹೆಂಗಸರು ಅಂಬಿಗನಿಗೆ ಶಾಪ ಹಾಕುತ್ತಾ ಸೀರೆ ಮೇಲೆತ್ತಿ ದಡ ಸೇರುತ್ತಿದ್ದರು. ಇದು ಹೀಗೆ ನಡೆಯುತ್ತಲೇ ಇತ್ತು. ಸದಾ ಹೆಂಗಸರಿಗೆ ಅಂಬಿಗನನ್ನು ಬೈಯೋದೆ ಕೆಲಸ ..
ಹೀಗಿರುವಾಗ ಅಂಬಿಗನಿಗೆ ವಯಸ್ಸಾಯಿತು. ಸಾಯುವ ಸಮಯವಾಯಿತು. ಆಗ ಮಗನಿಗೆ ದೋಣಿ ಬಿಡುವ ಹೊಣೆಗಾರಿಕೆ ಕೊಟ್ಟು ಹೇಳಿದ ‘ಮಗನೆ ನಿನ್ನ ತಂದೆಯ ಹೆಸರು ಉಳಿಸಬೇಕು.ಊರವರೆಲ್ಲ ನಿನ್ನಿಂದಾಗಿ ನನ್ನನ್ನು ಹೊಗಳುವಂತಾಗಬೇಕು’
ಮಗ ಮಾತು ಕೊಟ್ಟ. ಸರಿ, ತಂದೆಯ ಹೆಸರು ಉಳಿಸೋದು ಹೇಗೆ ?ಒಂದು ಉಪಾಯ ಮಾಡಿದ.
ತಂದೆ ಮೊಣಕಾಲು ನೀರಿನಲ್ಲಿ ದೋಣಿ ನಿಲ್ಲಿಸೋದು ಅವನಿಗೆ ಗೊತ್ತಿತ್ತು. ಇದೀಗ ಮಗನೋ ಸೊಂಟದವರೆಗೆ ನೀರಿನಲ್ಲಿ ದೋಣಿ ನಿಲ್ಲಿಸ ತೊಡಗಿದ. ಮಹಿಳೆಯರಿಗೆ ಮತ್ತಷ್ಟು ಪೀಕಲಾಟ. ಈಗ ಸೀರೆಯನ್ನು ಇನ್ನಷ್ಟು ಮೇಲಕ್ಕೆತ್ತಬೇಕಾಗಿತ್ತು. ‘ಇವನಿಗಿಂತ ಇವನ ತಂದೆ ಎಷ್ಟೋ ಒಳ್ಳೆಯವನು. ಇವನಿಗಿಂತ ಅವನೇ ಆಗಬಹುದು’ಎಂದು ಹಳೆಯ ಅಂಬಿಗನನ್ನು ಜನರು ಹೊಗಳ ತೊಡಗಿದರು. ಹೀಗೆ ಮಗ ತಂದೆಯ ಹೆಸರನ್ನು ಉಳಿಸಿದ...
ಹೀಗೆ ತನ್ನ ಕತೆಯನ್ನು ಮುಗಿಸಿದ ರಿಕ್ಷಾ ಚಾಲಕ ಹೇಳಿದ ಮೋದಿಯಿಂದಾಗಿ ಇಂದಿರಾಗಾಂಧಿಯ ಹೆಸರು ಉಳಿಯಿತು ನೋಡಿ ..
ಅಷ್ಟರಲ್ಲಿ ನಾನು ಇಳಿಯುವ ಸ್ಟಾಪ್ ಬಂತು.

------------***------------

share
ವಾರ್ತಾಭಾರತಿ
ವಾರ್ತಾಭಾರತಿ
Next Story
X