Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಫೈಝಲ್ ಹತ್ಯೆ: 8 ಮಂದಿಯ ಬಂಧನ

ಫೈಝಲ್ ಹತ್ಯೆ: 8 ಮಂದಿಯ ಬಂಧನ

ವಾರ್ತಾಭಾರತಿವಾರ್ತಾಭಾರತಿ28 Nov 2016 11:31 AM IST
share
ಫೈಝಲ್ ಹತ್ಯೆ: 8 ಮಂದಿಯ ಬಂಧನ

ತಿರುರಂಙಾಡಿ, ನ. 28: ಇಸ್ಲಾಮ್ ಸ್ವೀಕರಿಸಿದ್ದಕ್ಕೆ ಕೊಡಿಂಞಿ ಪುಲ್ಲಾಣಿ ಫೈಝಲ್‌ರನ್ನು(30) ಕಡಿದು ಕೊಲೆಗೈದ ಪ್ರಕರಣದಲ್ಲಿ ಸಹೋದರಿ ಪತಿ ಮತ್ತು ಬಿಜೆಪಿ -ಆರೆಸ್ಸೆಸ್ ಕಾರ್ಯಕರ್ತರ ಸಹಿತ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ. ಕೊಲೆಪಾತಕಕ್ಕೆ ಸಂಚು ಹೆಣೆದವರು ಮತ್ತು ಕೊಲೆಕೃತ್ಯಕ್ಕೆ ಸಹಾಯ ಮಾಡಿದವರನ್ನು ಮಲಪ್ಪುರಂ ಡಿವೈಎಸ್ಪಿ ಪಿ.ಎಂ. ಪ್ರದೀಪ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ನೇರವಾಗಿ ಕೃತ್ಯದಲ್ಲಿ ಪಾಲ್ಗೊಂಡವರನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇವರು ಈಗಾಗಲೇ ಪೊಲೀಸರ ಬಲೆಗೆಬಿದ್ದಿದ್ದಾರೆಂದು ಸೂಚನೆ ಕೂಡಾ ಇದೆ.

ನನ್ನಬ್ರ ಕೊಡಿಂಞಿ, ಚುಳ್ಳಿಕುನ್ನ್ ನಿವಾಸಿಯೂ ಫೈಝಲ್‌ನ ಸಹೋದರಿಯ ಪತಿಯೂ ಆದ ಪುಲ್ಲಾಣಿ ವಿನೋದ್(39),ಫೈಝಲ್‌ನ ತಾಯಿ ತಮ್ಮನ ಪುತ್ರ ಪುಲ್ಲಾಣಿ ಸಜೀಷ್(32), ಕೊಲೆಕೃತ್ಯದ ಮುಖ್ಯ ಸೂತ್ರಧಾರ ಪುಳ್ಳಿಕಲ್ ಹರಿದಾಸನ್(30), ಈತನ ಅಣ್ಣ ಶಾಜಿ(39), ಚಾನತ್ ಸುನಿಲ್(39), ಕಳತ್ತಿಲ್ ಪ್ರದೀಪ್(32), ಕೊಡಿಂಞಿಯ ಡ್ರೈವಿಂಗ್ ಸ್ಕೂಲ್ ನಿರ್ವಾಹಕ ಪಾಲತ್ತಿಂಙಲ್ ಪಳ್ಳಿಪ್ಪಡಿ ಲಿಜು ಎಂಬ ಲಿಜಿಶ್(27), ಪರಪ್ಪನಂಙಾಡಿಯ ವಿಮುಕ್ತ್, ಕೋಟ್ಟಯಿಲ್ ಜಯಪ್ರಕಾಶ್(50) ಇವರನ್ನು ಬಂಧಿಸಲಾಗಿದೆ. ಬಂಧನಕ್ಕೊಳಗಾದವರು ಕೇಸರಿ ಸಂಘಟನೆಗಳ ಕಾರ್ಯಕರ್ತರಾಗಿದ್ದಾರೆ.

ಕಳೆದ 19ಕ್ಕೆ ಬೆಳಗ್ಗೆ ಪತ್ನಿಯ ತಂದೆಯನ್ನು ಮತ್ತು ತಾಯಿಯನ್ನು ತಾನೂರ್ ರೈಲ್ವೆ ಸ್ಟೇಷನ್‌ನಿಂದ ಕರೆದುಕೊಂಡು ಬರಲು ಆಟೊದಲ್ಲಿ ಹೋಗುವಾಗ ಕೊಡಿಂಞಿ ಫಾರೂಕ್ ನಗರದಲ್ಲಿ ಬೈಕ್‌ನಲ್ಲಿ ಬಂದ ತಂಡವೊಂದು ಫೈಝಲ್‌ರನನ್ನು ಕಡಿದು ಕೊಲೆಗೈದಿತ್ತು. ಫೈಝಲ್ ಇಸ್ಲಾಮ್ ಸ್ವೀಕರಿಸಿದ್ದು ಕೊಲೆಪಾತಕಕ್ಕೆ ಕಾರಣವಾಗಿತ್ತು. ಕಳೆದ ಜುಲೈಯಲ್ಲಿ ಫೈಝಲ್ ಊರಿಗೆ ಬಂದಿದ್ದಾಗ ಪತ್ನಿ ಮತ್ತು ಮೂವರು ಮಕ್ಕಳು ಇಸ್ಲಾಮ್ ಸ್ವೀಕರಿಸಿದ್ದರು.

ಸಹೋದರಿಯನ್ನುಮತ್ತುಮಕ್ಕಳನ್ನು ಕೂಡಾ ಇಸ್ಲಾಮ್ ಸ್ವೀಕರಿಸಬಹುದೆಂದು ಹೆದರಿ ಸಹೋದರಿ ಗಂಡನಾದ ವಿನೋದ್ ಕೇಸರಿ ಸಂಘಟನೆಯ ನಾಯಕರಾದ ಹರಿದಾಸನ್, ಶಾಜಿ,ಸುನೀಲ್, ಸಜೀಷ್‌ರನ್ನು ಭೇಟಿಯಾಗಿದ್ದ. ಇವರು ಸಂಘಟನೆಯ ಪರಪ್ಪನಂಙಾಡಿಯ ನಾಯಕರಿಗೆ ವಿಷಯ ತಿಳಿಸಿದ್ದರು. ಸಂಘಟನೆಯ ಅಲ್ಲಿನ ನಾಯಕ ಜಯಪ್ರಕಾಶ್ ಮುಂತಾದವರು ಮೇಲಾಪ್ಪುರಂ ಎಂಬಲ್ಲಿ ಒಟ್ಟುಗೂಡಿ ಸಂಚು ಹೆಣೆದಿದ್ದರು. ವಿಷಯವನ್ನು ತಿರೂರಿನ ಪ್ರಮುಖ ಕೇಸರಿ ಸಂಘಟನೆಯ ನಾಯಕನಿಗೆ ತಿಳಿಸಿದ್ದಾರೆ. ತಿರೂರಿನ ನಾಯಕನ ನಿರ್ದೇಶನ ಪ್ರಕಾರ ಮೂವರು ಬೆಳಗ್ಗೆ ಕೊಡಿಂಞಿಗೆ ಬಂದು ಕೃತ್ಯ ನಡೆಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಫೈಝಲ್ ತಾನೂರಿಗೆ ಹೋಗುತ್ತಿರುವ ವಿಷಯವನ್ನು ಲಿಜೇಷ್ ಎಂಬಾತ ಕೊಲೆಗಡುಕರಿಗೆ ತಿಳಿಸಿದ್ದನೆಂದು ವರದಿ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X