ಅನಂತಾಡಿ ಕ್ರಿಕೆಟ್ ಪಂದ್ಯಾಟ
![ಅನಂತಾಡಿ ಕ್ರಿಕೆಟ್ ಪಂದ್ಯಾಟ ಅನಂತಾಡಿ ಕ್ರಿಕೆಟ್ ಪಂದ್ಯಾಟ](https://www.varthabharati.in/sites/default/files/images/articles/2016/12/1/Ananthady Cricket 2.jpg)
ವಿಟ್ಲ, ಡಿ.1 : ಅನಂತಾಡಿ ಫ್ರೆಂಡ್ಸ್ ಕ್ರಿಕೆಟರ್ಸ್ ಮತ್ತು ಫ್ರೆಂಡ್ಸ್ ಅನಂತಾಡಿ ಇವುಗಳ ಆಶ್ರಯದಲ್ಲಿ ಹೊನಲು ಬೆಳಕಿನ 8 ಜನರ ಮುಕ್ತ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಇಲ್ಲಿನ ಶ್ರೀ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ನಡೆಯಿತು.
ಪಂದ್ಯಾಟವನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾಧವ ಮಾವೆ ಉದ್ಘಾಟಿಸಿದರು. ತಾ.ಪಂ. ಸದಸ್ಯೆ ಗೀತಾ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಅನಂತಾಡಿ ಗ್ರಾ.ಪಂ. ಅಧ್ಯಕ್ಷ ಸನತ್ ಕುಮಾರ್ ರೈ, ಶಿಕ್ಷಣ ಇಲಾಖೆಯ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ವೆಂಕಟೇಶ್ ಅನಂತಾಡಿ, ಬಂಟ್ರಂಜ ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಪ್ರಸಾಸ್ ಗೌಡ ತಾಳಿಪಡ್ಪು, ಜಯಂತಿ ವಸಂತ ಪೂಜಾರಿ ಬಾಕಿಲ, ವಿಶ್ವನಾಥ ಪೂಜಾರಿ ಬಾಕಿಲ, ನಾರಾಯಣ ಸಾಲಿಯಾನ್ ಅನಂತಾಡಿ, ಶಿವರಂಜನ್ ಪೂಂಜ ಬಾಳಿಕೆ, ಅನಂತಾಡಿ ಗ್ರಾ.ಪಂ. ಸದಸ್ಯ ಪುರಂದರ ಗೌಡ ತಾಳಿಪಡ್ಪು, ಪತ್ರಕರ್ತ ಲತೀಫ್ ನೇರಳಕಟ್ಟೆ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನೇರಳಕಟ್ಟೆ ಸಿ.ಎ. ಬ್ಯಾಂಕ್ ಮಾಣಿ ಶಾಖಾ ಮ್ಯಾನೇಜರ್ ಸಂಜೀವ ಪೂಜಾರಿ, ಚೇತನ್ ಗೌಡ ತಾಳಿಪಡ್ಪು, ಹರೀಶ್ ಪೂಜಾರಿ ಬಾಕಿಲ, ಅರುಣ್ ಕುಮಾರ್ ರೈ ತುಂಬೆಕೋಡಿ, ಮೋನಪ್ಪ ಗೌಡ ತಾಳಿಪಡ್ಪು, ಅರವಿಂದ ಕೊಂಡೆ, ಕಿರಣ್ ರೈ ತುಂಬೆಕೋಡಿ ಮೊದಲಾದವರು ಬಹುಮಾನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಫ್ರೆಂಡ್ಸ್ ಪದಾಧಿಕಾರಿಗಳಾದ ಅನೂಪ್ರಾಜ್ ರೈ, ಹರಿಶ್ಚಂದ್ರ ಗೌಡ, ಝಕರಿಯಾ, ಸುಲೈಮಾನ್, ವಿಶ್ವನಾಥ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಚೇತನ್ ಸ್ವಾಗತಿಸಿ, ಜೀವಿತ ವಂದಿಸಿದರು. ದೀಕ್ಷಿತ್ ಬಂಟ್ರಿಂಜ ಕಾರ್ಯಕ್ರಮ ನಿರೂಪಿಸಿದರು.
ಪ್ಲೇ ಬಾಯ್ಸ್ ತಂಡಕ್ಕೆ ಪ್ರಶಸ್ತಿ
36 ತಂಡಗಳು ಭಾಗವಹಿಸಿದ್ದ ಈ ಕ್ರಿಕೆಟ್ ಪಂದ್ಯಾಟದಲ್ಲಿ ಪ್ಲೇ ಬಾಯ್ಸ್ ಅನಂತಾಡಿ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಬಂದಾರಡ್ಕದ ಶ್ರೀ ಫ್ರೆಂಡ್ಸ್ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿತು. ಉಳಿದಂತೆ ತೃತೀಯ ಹಾಗೂ ಚತುರ್ಥ ಸ್ಥಾನಗಳನ್ನು ಕ್ರಮವಾಗಿ ಝಮಾನ್ ಬಾಯ್ಸ್ ಕಲ್ಲಡ್ಕ ಹಾಗೂ ಬಾಯ್ಸ್ ಸಾಲ್ಮರ ತಂಡಗಳು ಪಡೆದುಕೊಂಡಿತು. ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಅನಂತಾಡಿ ತಂಡದ ಸುರೇಶ್ ಪಡೆದುಕೊಂಡರೆ, ಹೊಡೆತಗಾರ ಪ್ರಶಸ್ತಿಯನ್ನು ಅಶ್ರಫ್ ಪಡೆದುಕೊಂಡರು. ಆಲ್ರೌಂಡರ್ ಪ್ರಶಸ್ತಿಯನ್ನು ಕಿಶೋರ್ ತಮ್ಮದಾಗಿಸಿಕೊಂಡರು.