ಕೋಸ್ಟಲ್ ಹೈಪರ್ ಮಾರ್ಕೆಟ್ ಶುಭಾರಂಭ
![ಕೋಸ್ಟಲ್ ಹೈಪರ್ ಮಾರ್ಕೆಟ್ ಶುಭಾರಂಭ ಕೋಸ್ಟಲ್ ಹೈಪರ್ ಮಾರ್ಕೆಟ್ ಶುಭಾರಂಭ](https://www.varthabharati.in/sites/default/files/images/articles/2016/12/2/IMG_9569.jpg)
ಮೂಡುಬಿದಿರೆ,ಡಿ.2: ಇಲ್ಲಿನ ಮೆಸ್ಕಾಂ ಕಛೇರಿ ಬಳಿಯಲ್ಲಿರುವ ವಿನ್ಸೆಂಟ್ ಪ್ಲಾಜಾದಲ್ಲಿ ಗುರುವಾರದಂದು ಕೋಸ್ಟಲ್ ಹೈಪರ್ ಮಾರ್ಕೆಟ್ ಶುಭಾರಂಭಗೊಂಡಿತು.
ಸಂಸ್ಥೆಯ ಪ್ರವರ್ತಕ ರಾಕೇಶ್ ಡಿಸೋಜ ಅವರ ಮಾತೃಶ್ರೀ ಸೆಲಿನ್ ಡಿಸೋಜ ನೂತನ ಮಳಿಗೆಯನ್ನು ಉದ್ಘಾಟಿಸಿದರು. ಮೂಡುಬಿದಿರೆ ವಲಯ ಚರ್ಚ್ಗಳ ಮುಖ್ಯ ಧರ್ಮಗುರು ರೇ/ಫಾ ಪೌಲ್ ಸಿಕ್ವೇರಾ, ತಾಕೋಡೆ ಹೋಲಿ ಕ್ರಾಸ್ ಚರ್ಚ್ನ ಧರ್ಮಗುರು ರೇ/ಫಾ ನವೀನ್ ಡಿಸೋಜ, ಕುಮಟಾದ ದಿವಳ್ಳಿ ಚರ್ಚ್ನ ಧರ್ಮಗುರು ಜೊಸ್ಲಿ ಫ್ರಾನ್ಸಿಸ್ ಡಿಸಿಲ್ವ ಆಶೀರ್ವಚನ ನೀಡಿದರು.
ಮಾಜಿ ಸಚಿವ ಕೆ. ಅಮರನಾಥ ಶಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಬೆಳೆಯುತ್ತಿರುವ ಮೂಡುಬಿದಿರೆಗೆ ಇಂತಹ ಸುಪರ್ ಮಾರ್ಕೆಟ್ಗಳ ಅಗತ್ಯವಿದ್ದು ಗುಣಮಟ್ಟದ ಉತ್ಪನ್ನಗಳು ಗ್ರಾಹಕರಿಗೆ ಲಭಿಸಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಮಾಲಕ ರಾಕೇಶ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿ ಈ ಸುಪರ್ ಮಾರ್ಕೆಟ್ನಲ್ಲಿ ಎಲ್ಲಾ ಗೃಹಬಳಕೆಯ ವಸ್ತುಗಳು ಲಭ್ಯವಿದ್ದು ಗ್ರಾಹಕರು ಪ್ರೋತ್ಸಾಹಿಸಬೇಕು ಎಂದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದಿಶ್ ಅಧಿಕಾರಿ, ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ , ಪೋಲೀಸ್ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್, ಮೂಡಾ ಮಾಜಿ ಅಧ್ಯಕ್ಷ ಸುರೇಶ್ ಕೋಟ್ಯಾನ್, ಐಕೇರ್ ಬಿಲ್ಡರ್ಸ್ ಎಂಡ್ ಡೆವೆಲಪರ್ಸ್ನ ಪ್ರಮೋಟರ್ ಅಶ್ವಿನ್ ಜೆ. ಪಿರೇರಾ, ಮೂಡುಬಿದಿರೆ ಕಾರ್ಪೋರೇಶನ್ ಬ್ಯಾಂಕ್ನ ಮುಖ್ಯ ಪ್ರಬಂಧಕ ಸದಾನಂದ ಎನ್ ಶೆಟ್ಟಿ ಭಾಗವಹಿಸಿದರು.
ಲೀಝಾ ಡಿಸೋಜ ಸ್ವಾಗತಿಸಿದರು. ಗೋಡ್ವಿನ್ ವಿನೇಜಸ್ ಕಾರ್ಯಕ್ರಮ ನಿರ್ವಹಿಸಿದರು.