Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಈ ಫ್ರಿಡ್ಜ್‌ನಲ್ಲಿ ಹಸಿದವರಿಗೆ 24...

ಈ ಫ್ರಿಡ್ಜ್‌ನಲ್ಲಿ ಹಸಿದವರಿಗೆ 24 ಗಂಟೆಯೂ ಉಚಿತ ಆಹಾರ ಲಭ್ಯ

ಅಂಗಡಿ ಮಾಲಕರೊಬ್ಬರ ಅನನ್ಯ ಸೇವೆ

ವಾರ್ತಾಭಾರತಿವಾರ್ತಾಭಾರತಿ2 Dec 2016 10:25 PM IST
share
ಈ ಫ್ರಿಡ್ಜ್‌ನಲ್ಲಿ ಹಸಿದವರಿಗೆ 24 ಗಂಟೆಯೂ ಉಚಿತ ಆಹಾರ ಲಭ್ಯ

ಮಂಗಳೂರು, ಡಿ. 2: ನಗರದಲ್ಲಿ ಕಂಪ್ಯೂಟರ್ ಸಂಬಂಧಿತ ಸಾಮಗ್ರಿಗಳನ್ನು ಹೊಂದಿರುವ ಅಂಗಡಿಯೊಂದರ ಮುಂದೆ ಆಹಾರ ತಿನಿಸುಗಳು ತುಂಬಿದ್ದ ಫ್ರಿಡ್ಜ್‌ವೊಂದು ಕಂಡುಬಂದಿದೆ. 24 ಗಂಟೆಗಳ ಕಾಲ ಚಾಲನೆಯಲ್ಲಿರುವ ಈ ಫ್ರಿಡ್ಜ್‌ನ ಮೇಲೆ ‘ಸಾರ್ವಜನಿಕ ಉಪಯೋಗಕ್ಕಾಗಿ ಉಚಿತ’ ಎಂದು ಬರೆಯಲಾಗಿದೆ.

‘‘ಫ್ರಿಡ್ಜ್‌ನಲ್ಲಿರುವ ಆಹಾರ ಪದಾರ್ಥಗಳನ್ನು ಅವಶ್ಯಕತೆ ಇರುವ ಸಾರ್ವಜನಿಕರು ಉಚಿತವಾಗಿ ಉಪಯೋಗಿಸಬಹುದು’’ ಎಂದೂ ಆಂಗ್ಲ ಹಾಗೂ ಕನ್ನಡ ಭಾಷೆಗಳಲ್ಲಿ ಬರೆಯಲಾಗಿದೆ. ಫ್ರಿಡ್ಜ್‌ನ ಎಡ ಹಾಗೂ ಬಲ ಬದಿಗಳಲ್ಲಿ ಕೆಲವು ಚಿತ್ರಗಳನ್ನು ಅಳವಡಿಸಲಾಗಿದ್ದು, ಇವು ಹೊಟ್ಟೆ ತುಂಬಾ ಉಂಡು ಉಳಿದ ಆಹಾರವನ್ನು ಬಿಸಾಡುವವರ ಗಮನ ಸೆಳೆಯಲಾಗಿದೆ. ಬಿಸಾಡಿದ ಆಹಾರವನ್ನು ಹಸಿದ ಹೊಟ್ಟೆಗಳು ಸೇವನೆ ಮಾಡುತ್ತಿರುವ ಚಿತ್ರಗಳು ಇನ್ನೊಂದೆಡೆ ಗಮನ ಸೆಳೆದಿದೆ.

ನಗರದ ಜ್ಯೋತಿ ಬಳಿಯ ಕೈರನ್ನಾರ್ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ‘ಕೊಹಿನೂರ್ ಕಂಪ್ಯೂಟರ್ ರೆನ್’ ಎಂಬ ಅಂಗಡಿಯ ಮುಂದೆ ಈ ಫ್ರಿಡ್ಜ್ ಇಡಲಾಗಿದೆ. ಈ ಅಂಗಡಿಯಲ್ಲಿ ಯಾವುದೇ ಆಹಾರ ವಸ್ತುಗಳು ಮಾರಲ್ಪಡದಿದ್ದರೂ ಇದರ ಮಾಲಕ ತನ್ನದೇ ಖರ್ಚಿನಲ್ಲಿ ಊಟ, ಹಣ್ಣು ಹಂಪಲು, ಮಿನರಲ್ ವಾಟರ್‌ಗಳನ್ನು ಇಡುವ ಮೂಲಕ ಆಸ್ಪತ್ರೆಯ ರೋಗಿಗಳ, ಮುಂಜಾನೆ ತಲುಪುವ ಪ್ರಯಾಣಿಕರ, ಬಿಕ್ಷುಕರು ಸಹಿತ ಹಸಿದವರ ಮೇಲಿನ ಕಾಳಜಿಯನ್ನು ತೋರಿಸಿದ್ದಾರೆ.

ಮಂಗಳಾದೇವಿಯ ನಿವಾಸಿ ಅರಫಾತ್ (37) ಪ್ರಸ್ತುತ ಅಂಗಡಿಯ ಮಾಲಕ. ಅವರೇ ಹೇಳುವ ಪ್ರಕಾರ ‘‘ದೂರದ ಪ್ರದೇಶದಿಂದ ನಗರದ ಆಸ್ಪತ್ರೆಗಳಿಗೆ ಬರುವವರು ಹಣವಿಲ್ಲದೆ, ಆಹಾರಕ್ಕಾಗಿ ಪರದಾಡಿದ್ದನ್ನು ಮತ್ತು ಹಣ ಇದ್ದವರು ತಡ ರಾತ್ರಿಯಲ್ಲಿ ಆಹಾರದ ಹುಡುಕಾಟ ನಡೆಸುತ್ತಿದ್ದುದನ್ನು ಗಮನಿಸಿದ್ದೇನೆ. ನೂರಾರು ಕಿಲೋ ಮೀಟರ್ ಬಸ್ಸಿನಲ್ಲಿ ಪ್ರಯಾಣಿಸಿ ಬೆಳಗ್ಗಿನ ಜಾವ 3-4 ಗಂಟೆಗೆ ನಗರಕ್ಕೆ ತಲುಪುವ ಪ್ರಯಾಣಿಕರು ನೀರಿಗಾಗಿ ಅಲೆದಾಟ ನಡೆಸಿರುವುದನ್ನು ಕಂಡಿದ್ದೇನೆ. ಇವರಿಗೆಲ್ಲಾ ಉಪಯೋಗವಾಗುವ ನಿಟ್ಟಿನಲ್ಲಿ 24 ಗಂಟೆಯೂ ಅಂಗಡಿ ಮುಂದೆ ಫ್ರಿಡ್ಜ್‌ನ್ನು ಇಟ್ಟುಕೊಂಡು ಆಹಾರ ವಸ್ತುಗಳನ್ನು ತುಂಬಿಸಿದ್ದೇನೆ. ಇಂದು ಮಧ್ಯಾಹ್ನದ ಬಳಿಕ ತಲಾ ಒಬ್ಬರಿಗೊಂದರಂತೆ 7 ಬಿರಿಯಾನಿ ಪೊಟ್ಟಣ, 2 ಕೆ.ಜಿ. ಕಿತ್ತಳೆ ಹಣ್ಣು, 1 ಕೆ.ಜಿ. ಬಾಳೆ ಹಣ್ಣು, 7 ಚಿಕ್ಕ ಪ್ಯಾಕ್‌ಗಳ ಫ್ರೂಟಿ ಜ್ಯೂಸ್, ಅರ್ಧ ಲೀಟರ್‌ಗಳ 5 ಮಿನರಲ್ ವಾಟರ್, 1 ಲೀಟರ್‌ನ 2 ಮಿನರಲ್ ವಾಟರ್ ಮತ್ತು ಪಪ್ಪಾಯವನ್ನು ಇಟ್ಟಿದ್ದೇನೆ. ಮಧ್ಯಾಹ್ನ 3 ಗಂಟೆಗೆ ಇಡಲಾಗಿದ್ದ ಆಹಾರ ತಿನಿಸುಗಳು ಸಂಜೆ 7 ಗಂಟೆ ಹೊತ್ತಿಗೆ ಖಾಲಿಯಾಗಿವೆ’’.

ಈ ಫ್ರಿಡ್ಜ್‌ನಲ್ಲಿ ಸಾರ್ವಜನಿಕರಿಗೂ ಆಹಾರ ವಸ್ತುಗಳನ್ನು ಇಡುವ ಅವಕಾಶವನ್ನು ಕಲ್ಪಿಸಲಾಗಿದೆ. ಯಾರಾದರೂ ಹಸಿದವರಿಗೆ ನೆರವಾಗಲು ಬಯಸಿದರೆ, ಸಾರ್ವಜನಿಕರಿಗಾಗಿ ಇಡಲಾಗಿದ್ದ ಈ ಫ್ರಿಡ್ಜ್‌ನಲ್ಲಿ ಆಹಾರವನ್ನು ಇಡಬಹುದು. ಈ ಫ್ರಿಡ್ಜ್ ದುರುಪಯೋಗವಾಗದಂತೆ ಫ್ರಿಡ್ಜ್‌ನ ಮೇಲ್ಬದಿಯಲ್ಲಿ ಸಿಸಿ ಕ್ಯಾಮರಾವನ್ನು ಅಳವಡಿಸಿದ್ದೇನೆ. ಆಹಾರ ಉಪಯೋಗಿಸಬಯಸುವವರು ಸ್ವಚ್ಛತೆಯನ್ನು ಕಾಪಾಡುವಂತೆ ಸೂಚಿಸಲಾಗಿದೆ. ಹಗಲು ಹೊತ್ತಿನಲ್ಲಿ ಭಿಕ್ಷುಕರು ಬಂದರೆ ಅವರು ನೇರವಾಗಿ ಫ್ರಿಡ್ಜ್‌ನೊಳಗೆ ಕೈ ಹಾಕದೆ ಅವರಿಗೆ ಬೇಕಾದ ಆಹಾರವನ್ನು ತೆಗೆಸಿಕೊಡುವಂತೆ ತನ್ನ ಅಂಗಡಿಯ ಸಿಬ್ಬಂದಿಗೆ ಸೂಚಿಸಿದ್ದೇನೆ ಎನ್ನುತ್ತಾರೆ ಅರಫಾತ್.

ಹಗಲಿರುಳು ಚಾಲನೆಯಲ್ಲಿರುವ ಈ ಫ್ರಿಡ್ಜ್‌ನ ವಿದ್ಯುತ್ ಖರ್ಚನ್ನು ನಾನೇ ಭರಿಸುತ್ತೇನೆ ಎನ್ನುವ ಅವರು, ನಾಗರಿಕರು ತಾವು ಸೇವಿಸುತ್ತಿರುವ ದೈನಂದಿನ ಆಹಾರದಲ್ಲಿ ಉಳಿದಿರುವುದನ್ನು ಬಿಸಾಡದೆ ಸಾರ್ವಜನಿಕರಿಗಾಗಿ ಇಡಲಾದ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿ ಹಸಿದವರ ಹಸಿವನ್ನು ನೀಗಿಸಲು ಸಹಕರಿಸುವಂತೆ ಕೋರಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X