ನೇಣು ಬಿಗಿದು ಯುವಕ ಆತ್ಮಹತ್ಯೆ

ಕಾಸರಗೋಡು, ಡಿ.3: ಯುವಕನೋರ್ವ ಕ್ಲಬ್ ಕಟ್ಟಡದಲ್ಲಿ ನೇಣು ಬಿಗಿದು ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಮೃತಪಟ್ಟವರನ್ನು ಬಂದಡ್ಕ ಶಂಕರಪಾಡಿಯ ಎಚ್. ಮಣಿಕಂಠ (29) ಎಂದು ಗುರುತಿಸಲಾಗಿದೆ.
ಶುಕ್ರವಾರ ತಡರಾತ್ರಿ ತನಕ ಮಣಿಕಂಠ ಕ್ಲಬ್ನಲ್ಲೇ ಉಳಿದು ಕೊಂಡಿದ್ದು. ಇವರ ಜೊತೆಗಿದ್ದವರು ರಾತ್ರಿ ಮನೆಗೆ ತೆರಳಿದ್ದರು. ಆದರೆ ಮಣಿಕಂಠ ಬೆಳಗ್ಗೆಯೂ ಮನೆಗೆ ಬರದಿದ್ದುದರಿಂದ ಅವರ ಮೊಬೈಲ್ಗೆ ಕರೆ ಮಾಡಿದ್ದಾಗ ಸ್ವಿಚ್ಡ್ ಆಫ್ ಆಗಿತ್ತು. ಮನೆಯವರು ಕ್ಲಬ್ಗೆ ಬಂದಾಗ, ಶಟರ್ ಅರ್ಧದಷ್ಟು ಮುಚ್ಚಿರುವುದು ಕಂಡುಬಂದಿದೆ. ತೆರೆದು ನೋಡಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಮಣಿಕಂಠರ ಮೃತದೇಹ ಪತ್ತೆಯಾಗಿದೆ. ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ಕುತ್ತಿಕೋಲ್ ಗ್ರಾಪಂ ನೌಕರರಾಗಿದ್ದ ಇವರಿಗೆ ಡಿ.22ರಂದು ವಿವಾಹ ನಡೆಯಬೇಕಿತ್ತು.
Next Story





