Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪ್ರಧಾನಿ ಮೋದಿಯ ಧ್ವನಿ ಅನುಸರಿಸುವ...

ಪ್ರಧಾನಿ ಮೋದಿಯ ಧ್ವನಿ ಅನುಸರಿಸುವ ಶ್ಯಾಮ್ ಈಗ ಭಾರೀ ಫೇಮಸ್ಸು: ವೈರಲ್ ವೀಡಿಯೊ

ವಾರ್ತಾಭಾರತಿವಾರ್ತಾಭಾರತಿ4 Dec 2016 4:51 PM IST
share
ಪ್ರಧಾನಿ ಮೋದಿಯ ಧ್ವನಿ ಅನುಸರಿಸುವ ಶ್ಯಾಮ್ ಈಗ ಭಾರೀ ಫೇಮಸ್ಸು: ವೈರಲ್ ವೀಡಿಯೊ

ವ್ಯಾಟ್ಸಾಪ್ ಸಂದೇಶವನ್ನು ನೀವು ತೆರೆದಾಕ್ಷಣ ‘ಮೇರೆ ಪ್ಯಾರೆ ಭಾಯಿಯೋಂ ಬೆಹನೋಂ’ ಎನ್ನುವ ಚಿರಪರಿಚಿತ ಧ್ವನಿ ನಿಮ್ಮ ಕಿವಿಗೆ ಬೀಳುತ್ತದೆ. ಕಳೆದ 10 ದಿನಗಳಿಂದ ಅಸಾಮಾನ್ಯ ಧ್ವನಿಯನ್ನು ಹೊಂದಿರುವ ಈ ಶ್ರೀಸಾಮಾನ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದಾನೆ. ಶ್ಯಾಮ್ ರಂಗೀಲಾ ಎಂದು ಜನಪ್ರಿಯನಾಗಿರುವ ಶ್ಯಾಮ ಸುಂದರ್(22) ಪ್ರಧಾನಿ ಮೋದಿಯವರ ಧ್ವನಿಯ ಅನುಕರಣೆ ಮಾಡುತ್ತಿದ್ದಾನೆಂದು ಥಟ್ಟನೆ ಗೊತ್ತೇ ಆಗುವುದಿಲ್ಲ. ಸುಂದರ್‌ನ ಒಂದು ನಿಮಿಷ ಎಂಟು ಸೆಕೆಂಡ್ ಅವಧಿಯ,ಮೋಜಿಗಾಗಿ ಸ್ನೇಹಿತನೋರ್ವನ ಫೋನ್‌ನಿಂದ ಅಪ್‌ಲೋಡ್ ಮಾಡಲಾಗಿ ರುವ ಈ ವೀಡಿಯೋ ರಾತ್ರಿ ಬೆಳಗಾಗುವುದರಲ್ಲಿ ಆತನಿಗೆ ಪ್ರಸಿದ್ಧಿಯನ್ನು ತಂದು ಕೊಟ್ಟಿದೆ.

ರಾಜಸ್ಥಾನದ ಮೋಖಮ್‌ವಾಲಾ ಗ್ರಾಮದ ರೈತನೋರ್ವನ ಮಗನಾಗಿರುವ ಸುಂದರ್‌ಗೆ ತನ್ನ ಅದೃಷ್ಟವನ್ನೇ ನಂಬಲಾಗುತ್ತಿಲ್ಲ.
‘‘ನನ್ನ ಫೋನ್ ಹಾಳಾಗಿದ್ದರಿಂದ ಸ್ನೇಹಿತನ ಫೋನ್‌ನಲ್ಲಿ ಈ ವೀಡಿಯೊ ಮಾಡಿದ್ದೆ. ಮನೆಯಲ್ಲಿ ವಿದ್ಯುತ್ತೂ ಇರಲಿಲ್ಲ. ನನ್ನ ಮುಖದ ಮೇಲೆ ಬೆಳಕು ಚೆಲ್ಲಲು ಟಾರ್ಚ್ ಬಳಸಿದ್ದೆವು. ವೀಡಿಯೊ ಮಾಡಿದ ಬಳಿಕ ನಾನದನ್ನು ಮರೆತುಬಿಟ್ಟಿದ್ದೆ. ಎರಡು ದಿನಗಳ ಬಳಿಕ ದುರಸ್ತಿಯಾದ ಫೋನ್ ನನ್ನ ಕೈ ಸೇರಿದಾಗಲಷ್ಟೇ ಈ ವೀಡಿಯೊ ವೈರಲ್ ಆಗಿದೆ ಎನ್ನುವುದು ನನಗೆ ಗೊತ್ತಾಗಿದ್ದು ’’ಎಂದು ಸುಂದರ ಹೇಳಿದ. ಇತ್ತೀಚಿಗೆ ಭೇಟಿಯೊಂದರಲ್ಲಿ ಬಾಲಿವುಡ್‌ನ ಖ್ಯಾತ ಹಾಸ್ಯನಟ,ಮಿಮಿಕ್ರಿ ಪಟು ಜಾನಿ ಲಿವರ್ ಈ ವೀಡಿಯೊದ ಆಧಾರದಲ್ಲಿ ತನ್ನನ್ನು ಗುರುತು ಹಿಡಿದಾಗ ಸುಂದರ್‌ನ ಕಾಲುಗಳು ನೆಲದ ಮೇಲೆ ಇರಲಿಲ್ಲ.

11ರ ಹರೆಯದಲ್ಲಿಯೇ ಕಾಮೆಡಿಯನ್ ಆಗುವ ಕನಸು ಕಂಡಿದ್ದ ಸುಂದರ್ ಜ.26 ಮತ್ತು ಆ.15ರಂದು ಗ್ರಾಮದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರ ಮನಸ್ಸು ಗೆದ್ದಿದ್ದ. ಎಸ್‌ಎಸ್‌ಎಲ್‌ಸಿಯ ಬಳಿಕ ಆ್ಯನಿಮೇಷನ್ ಮತ್ತು ಅಭಿನಯ ಕೋರ್ಸ್‌ಗಾಗಿ ಜೈಪುರಕ್ಕೆ ತೆರಳಿದ್ದ ಸುಂದರ್ ಶಾಲೆಗಳಲ್ಲಿ ಉಚಿತವಾಗಿ ಮನೋರಂಜನಾ ಕಾರ್ಯಕ್ರಮಗಳನ್ಜು ನೀಡುತ್ತಿದ್ದ. ಸನ್ನಿ ದಿಯೋಲ್,ಅಮಿತಾಭ್ ಬಚ್ಚನ್ ಮತ್ತು ರಾಜ್‌ಕುಮಾರ್‌ಂತಹ ಬಾಲಿವುಡ್ ನಟರನ್ನು ಅನುಕರಿಸುತ್ತಿದ್ದನಾದರೂ ಅದು ಅಷ್ಟೊಂದು ಪ್ರಭಾವ ಬೀರಿರಲಿಲ್ಲ.

2012-13ರಲ್ಲಿ ಸಾರ್ವತ್ರಿಕ ಚುನಾವಣೆಗೆ ಮುನ್ನ ಮೋದಿ ರಾಷ್ಟ್ರವ್ಯಾಪಿ ಪ್ರವಾಸ ಕೈಗೊಂಡಿದ್ದಾಗ ಅವರನ್ನು ಅನುಕರಿಸಲು ಪ್ರಯತ್ನಿಸಲು ಸುಂದರ್ ನಿರ್ಧರಿಸಿದ್ದ. ಎರಡು ವರ್ಷಗಳ ಕಾಲ ಟಿವಿಯಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಭಾಷಣಗಳನ್ನು ಕೇಳಿ ಕೇಳಿ ಅವರ ಧ್ವನಿಯಲ್ಲೇ,ಅವರ ಶೈಲಿಯಲ್ಲೇ ಭಾಷಣ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದ.

ತನ್ನ ಬಂಧುಗಳಿಗೆ ಕರೆಗಳನ್ನು ಮಾಡಿ ಮೋದಿಯವರ ಧ್ವನಿಯಲ್ಲಿ ಮಾತನಾಡಿ ಮತಗಳನ್ನು ಯಾಚಿಸಿ ಮೋಜು ಪಡೆಯುತ್ತಿದ್ದ. ಸ್ವತಃ ಮೋದಿಯವರೇ ತಮಗೆ ಕರೆ ಮಾಡಿದ್ದಾರೆ ಎಂದು ಸಂಭ್ರಮಿಸುತ್ತಿದ್ದ ಅವರು, ಮೋದಿಯವರಿಗೆ ತಮ್ಮ ಹೆಸರುಗಳು ಗೊತ್ತಾಗಿದ್ದು ಹೇಗೆ ಎಂದು ಅಚ್ಚರಿಯನ್ನೂ ಪಡುತ್ತಿದ್ದರು.
 ನಿಧಾನವಾಗಿ ಜಯಪುರದಲ್ಲಿ ಹೆಸರು ಮಾಡಿದ ಸುಂದರ್ ರಾಹುಲ್ ಗಾಧಿಯ ಅನುಕರಣೆ ಮಾಡಿದರೆ ಜನರು ಹೊಟ್ಟೆ ತುಂಬ ನಗುತ್ತಿದ್ದರು,ಆದರೆ ಮೋದಿಯವರ ಧ್ವನಿಯಲ್ಲಿ ಮಾತನಾಡಿದರೆ ಜನರಿಗೆ ಅಚ್ಚರಿಯಿಂದ ಮಾತುಗಳೇ ಹೊರಡುತ್ತಿರಲಿಲ್ಲ. ಟಿವಿ ಕಾರ್ಯಕ್ರಮಗಳಲ್ಲಿ ಅವಕಾಶ ಹುಡುಕಿಕೊಂಡು ಆರು ತಿಂಗಳ ಹಿಂದೆ ಮುಂಬೈಗೆ ತೆರಳಿರುವ ಸುಂದರ್‌ಗೆ ಅವಕಾಶಗಳು ದೊರೆಯುವ ಸಾಧ್ಯತೆಗಳು ದಟ್ಟವಾಗಿವೆ.

ಮೋದಿಯವರನ್ನು ಖುದ್ದು ಭೇಟಿಯಾಗುವುದು ಸುಂದರ್‌ನ ಈಗಿನ ಕನಸು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X