Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ವಾರ್ತಾಭಾರತಿವಾರ್ತಾಭಾರತಿ4 Dec 2016 11:57 PM IST
share

*ನಗದು ರಹಿತ ಆರ್ಥಿಕತೆಯನ್ನು ಬಳಸಿ. ಕಾರ್ಡ್‌ಗಳನ್ನು ಬಳಸಿ
-ನರೇಂದ್ರ ಮೋದಿ, ಪ್ರಧಾನಿ
  ಅಂದರೆ, ನೋಟು ಸಮಸ್ಯೆಯನ್ನು ಸರಿಪಡಿಸಲು ಸಾಧ್ಯವಿಲ್ಲ ಎಂಬ ಅಧಿಕೃತ ಘೋಷಣೆಯೇ?
---------------------
  ಕರ್ನಾಟಕ ಸರಕಾರ ದೇಶದ ಅತ್ಯಂತ ಭ್ರಷ್ಟ ಸರಕಾರ
-ಅಮಿತ್ ಶಾ, ಬಿಜೆಪಿ ಅಧ್ಯಕ್ಷ
  ಗುಜರಾತ್‌ನಲ್ಲಿ ಘೋಷಣೆಯಾಗುತ್ತಿರುವ ಕಪ್ಪು ಹಣಗಳ ವಿವರಗಳನ್ನು ನೋಡಿದರೆ ತುಸು ಅನುಮಾನ.

---------------------
  ಇಂದು ವಿಶ್ವದಲ್ಲಿ ಧಾರ್ಮಿಕತೆ ಹೆಚ್ಚಾದಂತೆ ಕಾಣುತ್ತದೆ
-ಡಾ. ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ
  ಆದುದರಿಂದಲೇ ಅನ್ಯಾಯ, ಹಿಂಸೆ ಕೂಡ ಹೆಚ್ಚಿರುವುದು.

---------------------
  ಮೋದಿ ಗೆದ್ದಿದ್ದೇ ಕ್ಪಪು ಹಣದಿಂದ
-ಎಚ್.ವಿಶ್ವನಾಥ್, ಕಾಂಗ್ರೆಸ್ ನಾಯಕ
  ತನ್ನಂತೆ ಉಳಿದವರು ಗೆಲ್ಲಬಾರದೆಂದು ಮುಂಜಾಗ್ರತೆ ವಹಿಸುತ್ತಿದ್ದಾರಂತೆ. 

---------------------

  ಒಂದು ಪಕ್ಷ ಕೈಕೊಟ್ಟಾಗ ಮತ್ತೊಂದು ಪಕ್ಷದ ಕೈ ಹಿಡಿಯಲೇ ಬೇಕು
-ಝಮೀರ್ ಅಹ್ಮದ್, ಶಾಸಕ
ಒಂದು ಪಕ್ಷ ಕೈ ಕೊಟ್ಟಾಗ, ಇನ್ನೊಂದು ಪಕ್ಷದ ಕಾಲು ಹಿಡಿಯಬೇಕು ಎಂದರೆ ಚೆನ್ನ.

---------------------
  ಯಡಿಯೂರಪ್ಪ ಅವರೇ ಕರ್ನಾಟಕದ ಮುಂದಿನ ಮುಖ್ಯಮಂತ್ರಿ
-ಕೆ.ಎಸ್.ಈಶ್ವರಪ್ಪ, ವಿ.ಪ.ವಿ.ನಾಯಕ
ಮುಂದೆ ತಾವೇ ತೋಡಿಟ್ಟ ಗುಂಡಿಗಳಿವೆಯಲ್ಲ, ಅವನ್ನು ದಾಟಿ ಗೆದ್ದರೆ ಮಾತ್ರ.

---------------------
  ಇಂದಿನ ಆಧುನಿಕ ಸಮಾಜದಲ್ಲಿ ಬ್ರಾಹ್ಮಣರನ್ನು ಗುರುತಿಸುವುದೇ ಕಷ್ಟ
-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
  ಇದರಿಂದಾಗಿ ಕೃಷ್ಣ ಮಠದಲ್ಲಿ ಪಂಕ್ತಿ ಊಟಕ್ಕೆ ಸಮಸ್ಯೆಯಾಗಿರಬೇಕು ಅಲವೇ?
---------------------
  ಭಾರತದ ಎಲ್ಲಾ ಮುಸ್ಲಿಮರೂ ದೇಶಭಕ್ತರು
-ರಾಜನಾಥ್ ಸಿಂಗ್, ಕೇಂದ್ರ ಸಚಿವ
  ಅಂದರೆ ಉಳಿದ ಸಮುದಾಯದ ಎಲ್ಲರೂ ದೇಶಭಕ್ತರು ಅಲ್ಲವೇ?

  ಮಾನವ ಅಂಗಾಂಗಗಳು ರಾಷ್ಟ್ರೀಯ ಸಂಪತ್ತು
-ಜೆ.ಪಿ ನಡ್ಡಾ, ಕೇಂದ್ರ ಸಚಿವ
  ಅವೆಲ್ಲವನ್ನೂ ಬ್ಯಾಂಕಿಗೆ ಒಪ್ಪಿಸಬೇಕು ಎನ್ನುತ್ತೀರಾ?

---------------------
  ಚಿಕ್ಕವನಿದ್ದಾಗ ನಾನು ಕಳ್ಳಭಟ್ಟಿ ಮಾರುತ್ತಿದ್ದೆ
-ರುದ್ರಪ್ಪ ಲಮಾಣಿ, ಸಚಿವ
  ಈಗ ತುಸು ದೊಡ್ಡ ಮಟ್ಟದಲ್ಲಿ ಮಾರುತ್ತಿದ್ದೀರಿ, ಅಷ್ಟೇ ವ್ಯತ್ಯಾಸ.

---------------------
  ದೇಶದ ಏಕತೆಗಾಗಿ ಬಹಳ ತ್ಯಾಗ, ಹೋರಾಟ ಮಾಡಿದವರು ಬ್ರಾಹ್ಮಣರು
-ದಿನೇಶ್ ಗುಂಡೂರಾವ್, ಕಾಂಗ್ರೆಸ್ ನಾಯಕ
ಹೌದು. ದಲಿತರೆಲ್ಲ ಅವರ ತ್ಯಾಗ, ಹೋರಾಟದ ಫಲಾನುಭವಿಗಳು.

---------------------
  ರಾಷ್ಟ್ರಗೀತೆ ಹಾಡುವಾಗ ಎದ್ದು ನಿಂತುಕೊಂಡರೆ ಅದರಿಂದ ದೇಶಭಕ್ತಿ ಹೆಚ್ಚುತ್ತದೆಯೇ?
-ಅಸಾದುದ್ದೀನ್ ಉವೈಸಿ, ಸಂಸದ
  ಕನಿಷ್ಠ ನಿಮ್ಮ ಘನತೆಯಾದರೂ ಒಂದಿಷ್ಟು ಹೆಚ್ಚಬಹುದು. ಎದ್ದು ನಿಂತುಕೊಳ್ಳಿ.

---------------------
  ನಿತೀಶ್ ಕುಮಾರ್ ಎನ್‌ಡಿಎ ಸೇರ್ಪಡೆಗೆ ಮುಂದಾದರೆ ಸ್ವಾಗತಿಸುತ್ತೇನೆ
-ರಾಮ್‌ ವಿಲಾಸ್ ಪಾಸ್ವಾನ್, ಸಂಸದ
  ಬಿಹಾರದ ಡಿಎನ್‌ಎ ಪರೀಕ್ಷೆಯನ್ನು ಮತ್ತೊಮ್ಮೆ ಮಾಡಬೇಕಾಗುತ್ತದೆಯೇ?
---------------------
  ಆಡಳಿತ ವೈಖರಿಯಲ್ಲಿ ನರೇಂದ್ರ ಮೋದಿ ತುಘಲಕ್ ಮತ್ತು ಹಿಟ್ಲರ್‌ನನ್ನು ಮೀರಿಸುತ್ತಿದ್ದಾರೆ.
-ಮಮತಾ ಬ್ಯಾನರ್ಜಿ, ಪ.ಬ.ಮುಖ್ಯಮಂತ್ರಿ
  ತಮ್ಮ ಹೊಗಳಿಕೆಗೆ ಮೋದಿ ಪುಳಕಿತರಾಗಿದ್ದಾರೆ.

---------------------
  ಮೋದಿ ಮತ್ತು ಸಿದ್ದರಾಮಯ್ಯ ಅಣ್ಣ ತಮ್ಮಂದಿರು
-ಜನಾರ್ದನ ಪೂಜಾರಿ, ಕಾಂಗ್ರೆಸ್ ನಾಯಕ
  ನೀವು ಅವರಿಗೆ ಸೋದರಮಾವ ಆಗಬೇಕೇ?
  
ಕಂಬಳ ಪುನಾರಂಭಕ್ಕೆ ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡಿಸಲಾಗುವುದು
-ಡಾ.ಜಿ ಪರಮೇಶ್ವರ್, ಸಚಿವ
  ಕಾವೇರಿಯ ವಾದದ ಕತೆ ಏನಾಯಿತು ಅದನ್ನು ಹೇಳಿ.

---------------------
  ಜನ್ಮ ನೀಡಿದ ತಾಯಿ, ಹಾಲು ಕೊಟ್ಟ ಹಸು, ಅನ್ನ ನೀಡುವ ಭೂಮಿಯನ್ನು ಜನ ಮರೆಯುತ್ತಿರುವುದು ತುಂಬಾ ನೋವಿನ ಸಂಗತಿ
-ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
 ಜನ್ಮ ನೀಡಿದ ತಾಯಿಯ ಹೆಸರು ಹೇಳಿ ಅವಳ ಸೆರಗಿಗೆ ಕೈಹಾಕುವವರ ಕುರಿತಂತೆ ಏನಾದರೂ ಹೇಳಿ.

---------------------
  ಭಾರತ್ ಮಾತಾಕಿ ಜೈ ಎನ್ನುವವರನ್ನು ಜೈಲಿಗೆ ಕಳಿಸಲಾಗುತ್ತದೆ, ದೇಶದ್ರೋಹಿಗಳನ್ನು ಬೀಗರಂತೆ ನೋಡಲಾಗುತ್ತದೆ
-ಸಿ.ಟಿ. ರವಿ, ಶಾಸಕ
  ಜೈ ಎಂದು ದೇಶಕ್ಕೆ ಕನ್ನ ಹಾಕುವವರನ್ನು ದೇಶಭಕ್ತರೆಂದು ಬಿಂಬಿಸಲಾಗುತ್ತಿರುವುದು ವಿಪರ್ಯಾಸ.

---------------------
  ನಮ್ಮನ್ನಾಳಿದ ಬ್ರಿಟಿಷರು ಎಷ್ಟೋ ವಾಸಿ
-ಕಾಗೋಡು ತಿಮ್ಮಪ್ಪ, ಸಚಿವ
  ಅದಕ್ಕೇ ಅವರು ಹಿಂಬಾಗಿಲಿನಿಂದ ಮತ್ತೆ ಭಾರತ ಪ್ರವೇಶಿಸಿದ್ದಾರೆ.

---------------------
  ಸಾಯುತ್ತೇನೆ ಎಂಬ ಭಯದಿಂದ ಜನರು ಸರಕಾರಿ ಆಸ್ಪತ್ರೆಗಳಿಗೆ ಹೋಗುತ್ತಿಲ್ಲ
-ಆರ್.ಅಶೋಕ್, ಮಾಜಿ ಉಪ ಮುಖ್ಯಮಂತ್ರಿ
  ಅವರೆಲ್ಲ ಈಗ ಎಟಿಎಂ ಮುಂದೆ ಸಾಯುತ್ತಿದ್ದಾರೆ.
---------------------
  ಅಮೆರಿಕವನ್ನು ಒಂದು ಬಿಸಿನೆಸ್‌ನಂತೆ ನಡೆಸುವ ಕಾಲ ಬಂದಿದೆ
-ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
  ಆದರೆ ಅದನ್ನು ಕೊಳ್ಳುವವರು ಯಾರೂ ಇಲ್ಲ, ಅದೇ ಸಮಸ್ಯೆ.

---------------------
  ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ
-ಸಿದ್ದರಾಮಯ್ಯ, ಮುಖ್ಯಮಂತ್ರಿ
  ಮೊಸರಲ್ಲಿ ಹೊಸ ಎರಡು ಸಾವಿರದ ನೋಟು ಪತ್ತೆಯಾಗಿರುವ ಬಗ್ಗೆ ಏನಾದರೂ ಹೇಳಿ.

---------------------
  ಎಲ್ಲವನ್ನೂ ಜೀರ್ಣಿಸಿಕೊಳ್ಳುವ ಶಕ್ತಿ ನನಗಿದೆ
-ಡಿ.ಕೆ.ಶಿವಕುಮಾರ್, ಸಚಿವ
  ಆದುದರಿಂದಲೇ ನೀವು ಸಚಿವರಾಗಿದ್ದೀರಿ ಬಿಡಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X