ಕತಾರ್ನಲ್ಲಿ ವಿಟ್ಲ ಸಮ್ಮೇಳನದ ಪ್ರಚಾರ ಸಭೆ
ಕತಾರ್ , ಡಿ.5: ಬಂಟ್ವಾಳ ತಾಲೂಕಿನ ಕನ್ಯಾನ-ಕಣಿಯೂರು ಹಂಝತುಲ್ ಕರ್ರಾರ್ ಜುಮಾ ಮಸೀದಿಯ ದಶವಾರ್ಷಿಕ ಎ ನಡೆ ಮಹಾ ಸಮ್ಮೇಳನದ ಪ್ರಚಾರ ಸಭೆಯು ದೋಹಾ-ಕತಾರ್ನಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಹಂಝತುಲ್ ಕರ್ರಾರ್ ಮಸೀದಿ ಅಧ್ಯಕ್ಷ ಕೆ.ಕೆ. ಸುಲೈಮಾನ್ ಫೈಝಿ ಮಾತನಾಡಿ , ದಶವಾರ್ಷಿಕ ಸಮ್ಮೇಳನವು 2017ರ ಎ.14,15,16 ರಂದು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಜಾಫರ್ ಸ್ವಾದಿಕ್ ಮುಸ್ಲಿಯಾರ್ ಕಕ್ಕಿಂಜೆ, ಪಿ.ಎಂ. ಇಬ್ರಾಹಿಂ ಹಾಜಿ ಪನೀರ್, ಎಸ್. ಹಸೈನಾರ್ ಸಮಡ್ಕ, ರಶೀದ್ ಕಕ್ಕಿಂಜೆ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಹಂಝತುಲ್ ಕರ್ರಾರ್ ಜುಮಾ ಮಸೀದಿ ದಶವಾರ್ಷಿಕ ಮಹಾ ಸಮ್ಮೇಳನ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಸುಲೈಮಾನ್ ಬಲ್ಲೂರು (ಮರ್ಕಿಯ ಕತಾರ್), ಅಧ್ಯಕ್ಷರಾಗಿ ಇಬ್ರಾಹಿಂ ಹಾಜಿ ಪನೀರ್, ಉಪಾಧ್ಯಕ್ಷರಾಗಿ ಎಸ್. ಹಸೈನಾರ್ ಸಮಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ರಶೀದ್ ಕಕ್ಕಿಂಜೆ, ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಸಾಂಬಾರ್ತೋಟ, ಉಬೈದುಲ್ಲಾ ಸಂಪ್ಯ-ಪುತ್ತೂರು ಆಯ್ಕೆಯಾದರು.