ಮೊಬೈಲ್ ಅಂಗಡಿಯಿಂದ ಕಳವು
ಶಂಕರನಾರಾಯಣ, ಡಿ.5: ಸಿದ್ದಾಪುರ ಮಾರ್ಕೆಟ್ ಬಳಿ ನ.27ರಂದು ರಾತ್ರಿ ವೇಳೆ ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳರು ನಗದು ಹಾಗೂ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹರಕೆಬಾಳು ನಿವಾಸಿ ರಮೇಶ ಶೆಟ್ಟಿ ಎಂಬವರ ಶ್ರೀಮಂಜುನಾಥ ಸೆಲ್ ಸೊಲ್ಯೂಶನ್ ಮೊಬೈಲ್ ಅಂಗಡಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು 23,000 ರೂ. ನಗದು, ಮೊಬೈಲ್ ಫೋನ್, 2 ಇಯರ್ ಪೋನ್ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





