Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅಧಿಕಾರದಲ್ಲಿದ್ದಾಗಲೇ ಮೃತಪಟ್ಟ...

ಅಧಿಕಾರದಲ್ಲಿದ್ದಾಗಲೇ ಮೃತಪಟ್ಟ ಮುಖ್ಯಮಂತ್ರಿಗಳು ಎಷ್ಟು ?

ಇಲ್ಲಿದೆ ಫುಲ್ ಲಿಸ್ಟ್

ವಾರ್ತಾಭಾರತಿವಾರ್ತಾಭಾರತಿ7 Dec 2016 12:52 PM IST
share
ಅಧಿಕಾರದಲ್ಲಿದ್ದಾಗಲೇ ಮೃತಪಟ್ಟ ಮುಖ್ಯಮಂತ್ರಿಗಳು ಎಷ್ಟು ?

ಹೊಸದಿಲ್ಲಿ, ಡಿ.7 : ಜಯಲಲಿತಾ ಅವರ ಸಾವು ತಮಿಳುನಾಡನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಅಂದ ಹಾಗೆ ಅಧಿಕಾರದಲ್ಲಿರುವಾಗಲೇ ಮೃತ ಪಟ್ಟ ಏಕೈಕ ಮುಖ್ಯಮಂತ್ರಿ ಅವರಾಗಿರಲಿಲ್ಲ. ಈಗಾಗಲೇ ಹಲವು ನಾಯಕರು ಮುಖ್ಯಮಂತ್ರಿ ಹುದ್ದೆಯಲ್ಲಿರುವಾಗಲೇ ಸಾವನ್ನಪ್ಪಿದ್ದಾರೆ. ಇಲ್ಲಿದೆ ಕೆಲ ಉದಾಹರಣೆಗಳು.
 
1. ಗೋಪಿನಾಥ್ ಬೋರ್ಡೊಲೊಯ್


ಅಸ್ಸಾಂ ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿರುವ ಗೋಪಿನಾಥ್  ತಾವು ಅಧಿಕಾರದಲ್ಲಿರುವಾಗಲೇ  ಆಗಸ್ಟ್ 6,  1950ರಂದು ನಿಧನ ಹೊಂದಿದ್ದರು. ಲೋಕಪ್ರಿಯ ಎಂಬ ಬಿರುದಾಂಕಿತರಾಗಿದ್ದ ಗೋಪಿನಾಥ್ ಅವರು ಅಸ್ಸಾಂ ಜನರ ಬಗ್ಗೆ ತಮಗಿರುವ ಅತೀವ ಪ್ರೀತಿ ಹಾಗೂ ಕಾಳಜಿಯಿಂದ ಜನಪ್ರಿಯರಾಗಿದ್ದರು. ಅವರಿಗೆ 1999ರಲ್ಲಿ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಲಾಗಿತ್ತು.
 
2. ರವಿಶಂಕರ್ ಶುಕ್ಲ

ಪುನರ್ ವಿಂಗಡಿತ ಮಧ್ಯ ಪ್ರದೇಶದ ಪ್ರಥಮ ಮುಖ್ಯಮಂತ್ರಿಯಾಗಿದ್ದ ಶುಕ್ಲ ನವೆಂಬರ್ 1, 1956 ರಿಂದ ಮುಖ್ಯಮಂತ್ರಿ ಹುದ್ದೆಯಲ್ಲಿದ್ದರು. ಅದೇ ವರ್ಷದ ಡಿಸೆಂಬರ್ 31 ರಂದು ಅವರು ಕೊನೆಯುಸಿರೆಳೆದಿದ್ದರು. ದೇಶ ಕಂಡ ಅತ್ಯುತ್ತಮ ಆಡಳಿತಗಾರರಲ್ಲೊಬ್ಬರೆಂದು ಪರಿಗಣಿತರಾಗಿದ್ದ ಶುಕ್ಲ ಭಿಲಾಯಿ ಉಕ್ಕಿನ ಕಾರ್ಖಾನೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
 
3. ಶ್ರೀ ಕೃಷ್ಣ ಸಿಂಗ್


ಬಿಹಾರದ ಪ್ರಥಮ ಮುಖ್ಯಮಂತ್ರಿಯಾಗಿದ್ದ ಇವರು ಜನವರಿ 31, 1961ರಲ್ಲಿ ಮೃತ ಪಟ್ಟಿದ್ದರು. ಬಿಹಾರ ರಾಜ್ಯವನ್ನು ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದ ಅವರ ಆಡಳಿತಾವಧಿಯಲ್ಲಿ ಬಿಹಾರ ರಾಜ್ಯವು ಪ್ರಥಮ ಪಂಚವಾರ್ಷಿಕ ಯೋಜನೆಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿದ್ದ ರಾಜ್ಯವಾಗಿತ್ತು.
 
4. ಬಿಧನ್ ಚಂದ್ರ ರಾಯ್


ಪಶ್ಚಿಮ ಬಂಗಾಳದ ಎರಡನೆ ಮುಖ್ಯಮಂತ್ರಿಯಾಗಿದ್ದ ರಾಯ್ 1948 ರಿಂದ  ಆ ಉನ್ನತ ಹುದ್ದೆಯನ್ನು ಅಲಂಕರಿಸಿದ್ದರು. ಮುಖ್ಯಮಂತ್ರಿಯಾಗಿರುವಾಗಲೇ ಅವರು  ಜುಲೈ 1, 1962ರಂದು ಇಹಲೋಕ ತ್ಯಜಿಸಿದ್ದರು.  ಅವರ ಹುಟ್ಟು ಮತ್ತು ಸಾವಿನ ದಿನಾಂಕ ಒಂದೇ ಆಗಿದ್ದು ಅದನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ದೇಶ ಕಂಡ ಮಹೋನ್ನತ ವೈದ್ಯರಲ್ಲಿ ರಾಯ್ ಒಬ್ಬರಾಗಿದ್ದರು.
 
5. ಮರೋಟರಾವ್ ಕಣ್ಣಮ್ವರ್

ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಇವರು ನವೆಂಬರ್ 20, 1962ರಿಂದ ನವೆಂಬರ್ 24 1963ರ ತನಕ ಅಧಿಕಾರದಲ್ಲಿದ್ದು.  ಅವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿರುವಾಗಲೇ  53 ವರ್ಷ ವಯಸ್ಸಿನಲ್ಲಿ ನಿಧನ ಹೊಂದಿದ್ದರು.
 
6. ಸಿ ಎನ್ ಅಣ್ಣಾದೊರೈ

 ತಮಿಳುನಾಡಿನ ಮಾಜಿ ಮುಖ್ಯಮಂತ್ರಿಯಾಗಿದ್ದ ಇವರು ಅಣ್ಣಾ  ಹಾಗೂ ಅರಿಗ್ನರ್ ಅಣ್ಣಾ ಎಂದೇ ಖ್ಯಾತರಾಗಿದ್ದರು. ಪ್ರಥಮ ಕಾಂಗ್ರೆಸ್ಸೇತರ ರಾಜ್ಯ ಸರಕಾರ ಅವರದಾಗಿತ್ತು.  ಅವರು ಕ್ಯಾನ್ಸರ್ ಕಾಯಿಲೆಯಿಂದ ಫೆಬ್ರವರಿ 3, 1969 ರಂದು ಮೃತಪಟ್ಟಿದ್ದರು.
 
7. ದಯಾನಂದ್ ಬಂಡೋಡ್ಕರ್

  ಪೋರ್ಚುಗೀಸರು ಹೊರ ಹೋದ ನಂತರ ಗೋವಾದ ಪ್ರಪ್ರಥಮ ಮುಖ್ಯಮಂತ್ರಿಯಾಗಿದ್ದ  ಇವರು ಅಧಿಕಾರದಲ್ಲಿರುವಾಗಲೇ  ಆಗಸ್ಟ್ 12, 1973ರಲ್ಲಿ  ನಿಧನರಾಗಿದ್ದರು. ಆಗ ಅವರಿಗೆ 62 ವರ್ಷ ವಯಸ್ಸಾಗಿತ್ತು.
 
8. ಬರ್ಕತುಲ್ಲಾ ಖಾನ್

 ಕಾಂಗ್ರೆಸ್ ನಾಯಕರಾಗಿದ್ದ ಇವರು  ಎರಡು ವರ್ಷಗಳ ಕಾಲ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದರು. ಅವರು ಅಕ್ಟೋಬರ್ 11, 1973ರಂದು ಮೃತ ಪಟ್ಟಿದ್ದರು.
 
9. ಶೇಕ್ ಅಬ್ದುಲ್ಲಾ

  ಶೇರ್-ಇ-ಕಾಶ್ಮೀರ್ ಎಂದು ಕರೆಯಲ್ಪಡುತ್ತಿದ್ದ ನ್ಯಾಷನಲ್ ಕಾನ್ಫರೆನ್ಸ್ ನಾಯಕ 1974ರ ಚುನಾವಣೆಯ ನಂತರ ಮುಖ್ಯಮಂತ್ರಿಯಾಗಿ ಮರು ಆಯ್ಕೆಯಾಗಿದ್ದು ಅವರು ಸೆಪ್ಟೆಂಬರ್ 1982ರಲ್ಲಿ ಮುಖ್ಯಮಂತ್ರಿ ಹುದ್ದೆಯಲ್ಲಿರುವಾಗಲೇ ಕೊನೆಯುಸಿರೆಳೆದಿದ್ದರು.
 
10. ಎಂ ಜಿ ರಾಮಚಂದ್ರನ್


 ನಟ ಹಾಗೂ ರಾಜಕಾರಣಿಯಾಗಿದ್ದ ಎಂ ಜಿ ರಾಮಚಂದ್ರನ್  ಫೆಬ್ರವರಿ 10, 1985ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಮೂರನೇ ಸತತ ಬಾರಿಗೆ ಆಯ್ಕೆಯಾಗಿದ್ದರು. ಅವರು ಅನಾರೋಗ್ಯದಿಂದ ಡಿಸೆಂಬರ್ 24, 1987ರಂದು ಮೃತಪಟ್ಟಿದ್ದರು.
 
11. ಚಿಮನ್ ಭಾಯಿ ಪಟೇಲ್

 ಗುಜರಾತ್ ಮುಖ್ಯಮಂತ್ರಿಯಾಗಿ 1973ರಲ್ಲಿ ಅಧಿಕಾರ ಸ್ವೀಕರಿಸಿದ್ದ ಇವರು  1990ರಲ್ಲಿ ಜನತಾದಳ-ಬಿಜೆಪಿ ಮೈತ್ರಿ ಕೂಟ ಸರಕಾರ ಅಧಿಕಾರಕ್ಕೆ ಬಂದಾಗ ಮತ್ತೆ ಮುಖ್ಯಮಂತ್ರಿಯಾಗಿದ್ದರು.  ಆಧುನಿಕ ಗುಜರಾತ್ ರಾಜ್ಯದ ನಿರ್ಮಾತೃ ಎಂದು ಕರೆಯಲ್ಪಡುವ ಇವರು ಅಧಿಕಾರದಲ್ಲಿರುವಾಗಲೇ ಫೆಬ್ರವರಿ 17,1994ರಲ್ಲಿ ಮೃತ ಪಟ್ಟಿದ್ದರು.
 
12. ಬೀಯಂತ್ ಸಿಂಗ್

ಇವರು ಪಂಜಾಬ್ ಮುಖ್ಯಮಂತ್ರಿಯಾಗಿ 1993 ರಿಂದ 1995 ತನಕ ಸೇವೆ ಸಲ್ಲಿಸಿದ್ದರು. ಅವರ ಅಧಿಕಾರಾವಧಿಯಲ್ಲಿ ಖಲಿಸ್ತಾನ ಉಗ್ರವಾದಿಗಳನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಸಾಕಷ್ಟು ಶ್ರಮವಹಿಸಿದ್ದರೂ ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆಯ ಆರೋಪಗಳು ಕೇಳಿ ಬಂದಿದ್ದವು.  ಆತ್ಮಾಹುತಿ ಕಾರು ಬಾಂಬ್ ಸ್ಫೋಟವೊಂದಲ್ಲಿ ಅವರು ಆಗಸ್ಟ್ 31, 1995ರಂದು ಸಾವಿಗೀಡಾಗಿದ್ದರು.
 
13. ವೈ ಎಸ್ ರಾಜಶೇಖರ ರೆಡ್ಡಿ

 ಆಂಧ್ರ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿಯಾಗಿ ಎರಡು ಅವಧಿಗೆ (2004ರಿಂದ 2009ರ ತನಕ) ಆಯ್ಕೆಯಾಗಿದ್ದ ರೆಡ್ಡಿ ತಾವು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್  ಸೆಪ್ಟೆಂಬರ್ 2, 2009ರಂದು ಪತನಗೊಂಡು ಮೃತಪಟ್ಟಿದ್ದರು.
 
14. ದೋರ್ಜಿ ಖಂಡು

 ಅರುಣಾಚಲ ಪ್ರದೇಶ ಮುಖ್ಯಮಂತ್ರಿಯಾಗಿ ಎಪ್ರಿಲ್ 9, 2007ರಲ್ಲಿ ಅಧಿಕಾರ ಸ್ವೀಕರಿಸಿದ್ದ ಇವರು  2009ರಲ್ಲಿ ಮತ್ತೆ ಆಯ್ಕೆಯಾಗಿದ್ದರು. ತಮ್ಮ ಸಮಾಜ ಸೇವಾ ಕಾರ್ಯಗಳಿಗೆ ಹೆಸರಾಗಿದ್ದ ಖಂಡು ಎಪ್ರಿಲ್ 30, 2011 ರಲ್ಲಿ ಹೆಲಿಕಾಪ್ಟರ್ ಪತನವೊಂದರಲ್ಲಿ ಸಾವಿಗೀಡಾಗಿದ್ದರು.
 
15. ಮುಫ್ತಿ ಮೊಹಮ್ಮದ್ ಸಯೀದ್ 


ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿ ಎರಡು ಬಾರಿ ಆಯ್ಕೆಯಾಗಿದ್ದ ಇವರು ಜನವರಿ 7, 2016ರಂದು ಅಂಗವೈಫಲ್ಯದಿಂದ ನಿಧನರಾಗಿದ್ದರು. ಆರಂಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದ ಮುಫ್ತಿ ನಂತರ ವಿ.ಪಿ ಸಿಂಗ್ ಅವರ ಜನಮೋರ್ಚಾ ಸೇರಿ ಮುಂದೆ  ಪಿಡಿಪಿ ಸ್ಥಾಪಿಸಿದ್ದರು 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X