ಅಜ್ಮಾನ್ ನಲ್ಲಿ ದಾರುನ್ನೂರ್ ಅಜ್ಮಾನ್ ಪದಾಧಿಕಾರಿಗಳ ಆಯ್ಕೆ
ದುಬೈ,ಡಿ.7 : ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ನ ಮೂಡಬಿದ್ರಿ ಇದರ ಅಧೀನದಲ್ಲಿ ಯು ಎ ಇ ಯಲ್ಲಿ ಕಾರ್ಯಾಚರಿಸುತ್ತಿರುವ ದಾರುನ್ನೂರ್ ಕಲ್ಚರಲ್ ಸೆಂಟರ್ ಸಭೆಯು ಅಜ್ಮಾನ್ ರಾಶಿದಿಯ್ಯದಲ್ಲಿರುವ ಉದ್ಯಮಿ ಜನಾಬ್ ಇಕ್ಬಾಲ್ ಪುಚ್ಚಮುಗೇರ್ ರವರ ನಿವಾಸದಲ್ಲಿ ನಡೆಯಿತು.
ದಾರುನ್ನೂರ್ ಯು ಎ ಇ ರಾಷ್ಟ್ರೀಯ ಸಮಿತಿಯ ಪ್ರಮುಖ ಬದ್ರುದ್ದೀನ್ ಹೆಂತಾರ್ , ಸಮೀರ್ ಇಬ್ರಾಹಿಂ ಕಲ್ಲರೆ, ಮಹಮ್ಮದ್ ರಫೀಕ್ ಸುರತ್ಕಲ್, ಹಮೀದ್ ಮನಿಲ, ಉಸ್ಮಾನ್ ಕೆಮ್ಮಿಂಜೆ,ಅಬ್ದುಲ್ ರಝಾಕ್ ಕಾರಾಯಿ , ಶಾಕಿರ್ ಕುಪ್ಪೆ ಪದವು , ನಾಸಿರ್ ಮಂಗಿಲ ಪದವು , ರಿಝ್ವಾನ್ ಬಜ್ಪೆ. ಇಮ್ರಾನ್ ಮಜಿಲೋಡಿ ಮೊದಲಾದವರು ಉಪಸ್ಥಿತರಿದ್ದರು.
ಅಶ್ರಫ್ ಪಡ್ಡಂತಡ್ಕ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯದರ್ಶಿ ಜನಾಬ್ ನಿಝಾರ್ ಪಡ್ಡಂತಡ್ಕ ರವರು ಸ್ವಾಗತಿಸಿದರು.
ಪ್ರಧಾನ ಕಾರ್ಯದರ್ಶಿ ನಝೀರ್ ಗಂಟಲ್ ಕಟ್ಟೆಯವರು ಉದ್ಘಾಟಿಸಿದರು.
ವ್ಯಕ್ತಿ ಪರಿಚಯದ ಬಳಿಕ ದಾರುನ್ನೂರಿನ ಪ್ರಸಕ್ತ ಪರಿಸ್ಥಿತಿಯನ್ನು ದಾರುನ್ನೂರ್ ಯು ಎ ಇ ಇದರ ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಹೆಂತಾರ್ ವಿವರಿಸಿದರು.
ಈ ಸಂದರ್ಭ ಮಸೀದಿ ಕಟ್ಟಡದ ಕಾಮಗಾರಿ ಮತ್ತು ಮುಖ್ಯ ಕಟ್ಟಡದ ಕಾಮಗಾರಿಯ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಮಹಿಳಾ ಕಾಲೇಜಿನ ಕಾಮಗಾರಿ ಅತೀ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂಬ ವಿವರ ನೀಡಿದರು.
ಬಳಿಕ ಸಮಿತಿ ಪುನರ್ರಚನೆಯ ಜವಾಬ್ದಾರಿಯನ್ನು ಕಾರ್ಯದರ್ಶಿ ಸಮೀರ್ ಇಬ್ರಾಹಿಂ ಕಲ್ಲರೆಯವರು ವಹಿಸಿಕೊಂಡರು.
ಸಮೀರ್ ಇಬ್ರಾಹಿಂ ಮಾತನಾಡಿದರು.
ನೂತನ ಪದಾಧಿಕಾರಿಗಳು:
ಉಪದೇಶಕರು : ನಝೀರ್ ಗಂಟಲ್ ಕಟ್ಟೆ , ಮನ್ಸೂರ್ ಹಾಜಿ ಬಂದರ್ ,, ಖಾಲಿದ್ ಮೂಡಬಿದ್ರಿ
ಗೌರವಾಧ್ಯಕ್ಷ : ಅಬೂಬಕ್ಕರ್ ಬಜ್ಪೆ
ಅಧ್ಯಕ್ಷ : ಅಶ್ರಫ್ ಪಡ್ಡ0ತಡ್ಕ
ಉಪಾಧ್ಯಕ್ಷ : ಅಶ್ರಫ್ ಪುಚ್ಚ ಮುಗೇರ್ , ಇಬ್ರಾಹಿಂ ಉಳ್ಳಾಲ , ಇಮ್ರಾನ್ ಉಳ್ಳಾಲ, ಫಾರೂಕ್ ಅಬ್ದುಲ್ಲಾಹ್ ಚಿಕ್ಕಮಗಳೂರು
ಪ್ರಧಾನ ಕಾರ್ಯದರ್ಶಿ : ಶಾಫಿ ಗಂಟಲ್ ಕಟ್ಟೆ
ಕಾರ್ಯದರ್ಶಿಗಳು : ನಿಝಾರ್ ಅಹ್ಮದ್ ಪಡ್ಡಂತಡ್ಕ, ತಮೀಮ್ ಕಕ್ಕಿಂಜೆ, ಸಲ್ಮಾನ್ ಇಂಜಿನಿಯರ್ ಮೂಡಬಿದ್ರಿ
ಕೋಶಾಧಿಕಾರಿ :ಅಶ್ರಫ್ ಅಝ್ಕಾ ಪಡ್ಡಂತಡ್ಕ
ಕನ್ವೀನರ್ ಗಳು : ಫಝಲ್ ಕೃಷ್ಣಾಪುರ, ಶಫೀಕ್ ಮಂಗಳೂರು, ಅಶ್ರಫ್ ತೋಡಾರ್, ಯೂನುಸ್ ಪಡ್ಡಂತಡ್ಕ, ಆಸಿಫ್ ಬಿ.ಸಿ ರೋಡ್
ಕಾರ್ಯಕಾರಿ ಸಮಿತಿ ಸದಸ್ಯರು :
ಮುಖ್ತಾರ್ ಪಡ್ಡಂತಡ್ಕ, ಹಮೀದ್ ಸೋಮತ್ತಡ್ಕ, ಸುಲೈಮಾನ್ ಉಸ್ತಾದ್ ಮೊಡಂತ್ಯಾರ್, ಉಬೈದ್ ಅಝ್ಕಾ ಪಡ್ಡಂತಡ್ಕ , ಫೈಝಲ್ ಮಡಿಕೇರಿ , ಸುಹೈಲ್ ಮಡಿಕೇರಿ, ಸುಲ್ತಾನ್ ಮಡಿಕೇರಿ , ಝಕರಿಯಾ ಮಡಿಕೇರಿ , ಹಾರೂನ್ ಮಡಿಕೇರಿ, ಮುಸ್ತಫಾ ಉಳ್ಳಾಲ, ಸಿರಾಜ್ ಉಪ್ಪಿನಂಗಡಿ , ಫೈಝಲ್ ಬಿ.ಸಿ.ರೋಡ್
ಬಳಿಕ ದಾರುನ್ನೂರ್ ಯು ಎ ಇ ವತಿಯಿಂದ ದೇರಾ ರಾಫಿ ಹೋಟೆಲ್ ಅಡಿಟೋರಿಯಮ್ ನಲ್ಲಿ ಮೆಹ ಫಿಲೇ ರಸೂಲ್ ಎಂಬ ಶಿರೋ ನಾಮೆಯಲ್ಲಿ ನಡೆಯಲಿರುವ ಮೀಲಾದ್ ಸಮಾವೇಶ ಸಮಾರಂಭದ ಪ್ರಚಾರ ಸಭೆ ನಡೆಯಿತು.
ನೂತನ ಪ್ರಧಾನ ಕಾರ್ಯದರ್ಶಿ ಶಾಫಿ ಗಂಟಲ್ ಕಟ್ಟೆ ವಂದಿಸಿದರು.