ಬೆಳ್ತಂಗಡಿ : ಮಹಿಳೆಗೆ ಜೀವ ಬೆದರಿಕೆ
ಬೆಳ್ತಂಗಡಿ, ಡಿ. 8 : ನ್ಯಾಯಾಲಯದ ತಡೆಯಾಜ್ಞೆಯಿದ್ದರೂ ಮಹಿಳೆಯೊಬ್ಬಳ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ಸ್ವಾಧಿನಪಡಿಸಿಕೊಳ್ಳಲು ಯತ್ನಿಸಿದ್ದಲ್ಲದೆ ಜೀವ ಬೆದರಿಕೆಯೊಡ್ಡಿದ ವಿದ್ಯಮಾನ ಸುಲ್ಕೇರಿಯಲ್ಲಿ ನಡೆದಿದೆ.
ಸುಲ್ಕೇರಿ ಗ್ರಾಮದ ಪಿಲಿಕುಡೇಲು ಎಂಬಲ್ಲಿ ಬಿ.ರಮಣಿ ಎಂಬುವರು 1.18 ಎಕ್ರೆ ಜಮೀನನ್ನು ಹೊಂದಿರುತ್ತಾರೆ. ಈ ಜಮೀನಿನ ಸನಿಹದಲ್ಲಿಯೇ ಗ್ರಾಮದ ಮಹಮ್ಮಾಯಿ ಮನೆಯ ವಿಠಲ ಶೆಟ್ಟಿ ಎಂಬುವರು ಹಾಗೂ ಇತರ ಮೂವರು ಸೇರಿ ರಮಣಿಯವರ ಜಮೀನನ್ನು ಅಕ್ರಮವಾಗಿ ಸ್ವಾಧೀನ ಪಡಿಸಲು ಯತ್ನಿಸಿದ್ದಾರೆ.
ಇವರ ಕೃತ್ಯದ ವಿರುದ್ದ ನ್ಯಾಯಾಲಯದಲ್ಲಿ ದಾವೆ ದಾಖಲಾಗಿದ್ದು ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಆದೇಶ ಊರ್ಜಿತದಲ್ಲಿದ್ದರೂ ಡಿ. 5 ರಂದು ಯಾರೂ ಇಲ್ಲದ ವೇಳೆ ಜಮೀನಿಗೆ ಪ್ರವೇಶಿಸಿ, ಹಾಕಿದ್ದ ಬೇಲಿಯನ್ನು ಕಿತ್ತುಕೊಂಡು ಹೋಗಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ವಿಠಲ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನ ಕೈ-ಕಾಲು ಮುರಿಸುತ್ತೇನೆ ಎಂದು ಜೀವ ಬೆದರಿಕೆ ಒಡ್ಡಿದ್ದಾರೆ.
ಈ ಬಗ್ಗೆ ವೇಣೂರು ಠಾಣೆಯಲ್ಲಿ ದೂರು ದಾಖಲಾಗಿದೆ
Next Story





